ಡೆಲ್ಲಿಯಿಂದ ಬೆಂಗ್ಳೂರಿಗೆ 8 ಗಂಟೆ ತಡವಾಗಿ ಬಂದ ವಿಮಾನ-ಮುಂದಾಗಿದ್ದೇನು?-ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್, 29: ಸಾಮಾನ್ಯವಾಗಿ ಹಲವು ಅಡೆತಡಗಳಿಂದ ವಿಮಾನಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ತಲುಪಿರುವ ಉದಾಹರಣೆಗಳಿ ಇವೆ. ಅಲ್ಲದೆ ಇದೇ ವಿಚಾರವಾಗಿ ಪ್ರಯಾಣಿಕರು ಆಕ್ರೋಶಗೊಂಡಿರುವ ಘಟನೆಗಳು ನಡೆದಿವೆ. ಹಾಗೆಯೇ ಇದೀಗ ನವದೆಹಲಿಯಿಂದ ಬೆಂಗಳೂರಿಗೆ ಇಂಡಿಗೋ ವಿಮಾನವೊಂದು 8 ಗಂಟೆಗಳ ಕಾಲ ವಿಳಂಬವಾಗಿ ಆಗಮಿಸಿದ್ದು, ವಿಮಾನಕ್ಕಾಗಿ 200 ಮಂದಿ ಪ್ರಯಾಣಿಕರು ಕಾದು ಕೋಪಗೊಂಡ ಘಟನೆ ನಡೆದಿದೆ.
ವಿಮಾನ ತಡವಾಗಿ ಬಂದಿದ್ದಷ್ಟೇ ಅಲ್ಲದೆ, ವಿಮಾನ ಹತ್ತಿದ ಬಳಿಕವೂ ಪ್ರಯಾಣಿಕರು 90 ನಿಮಿಷಗಳ ಕಾದು ಕುಳಿತಿದ್ದಾರೆ. ಈ ಬೆಳವಣಿಗೆಗೆ ವಿಮಾನಯಾನ ಸಂಸ್ಥೆಯ ವಿರುದ್ಧ ಪ್ರಯಾಣಿಕರು ಕೆಂಡಕಾರಿದ್ದಾರೆ. 6E 6622 ವಿಮಾನ ಬುಧವಾರ ದೆಹಲಿಯಿಂದ ರಾತ್ರಿ 7:10 ಕ್ಕೆ ಟೇಕ್ ಆಫ್ ಆಗಿ ರಾತ್ರಿ 9:50ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದರೆ ಗುರುವಾರ ಬೆಳಗಿನ ಜಾವ 2:57ಕ್ಕೆ ಟೇಕಾಫ್ ಆಗಿ 5:45ಕ್ಕೆ ಬೆಂಗಳೂರಿಗೆ ಆಗಮಿಸಿರುವ ಘಟನೆ ನಡೆದಿದೆ.

ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹೆಬ್ಬಾಳ ನಿವಾಸಿ ವಂದನಾ ಮಾಥರೂ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಿದ್ದರು.ವಿ ಮಾನದಲ್ಲಿ ತಾವು ಎದುರಿಸಿದ ಪರಿಸ್ಥಿತಿಯನ್ನು ವಂದನಾ ಅವರು ವಿವರಿಸಿದ್ದು, ವಿಮಾನವು ರಾತ್ರಿ 8:15ಕ್ಕೆ ಹೊರಡುವ ಕೆಲವು ಗಂಟೆಗಳ ಮೊದಲು ನಮಗೆ ಸಂದೇಶ ಬಂದಿತ್ತು. ಆದರೆ 8 ಗಂಟೆಯಾದರೂ ವಿಮಾನದೊಳಗೆ ಹೋಗಿರಲಿಲ್ಲ ಎಂದರು.
ನಂತರ ಕೌಂಟರ್ನಲ್ಲಿ ಕೇಳಿದಾಗ ಅವರು ಇನ್ನು ಕೆಲವೇ ಸಮಯಗಲ್ಲಿ ವಿಮಾನ ಬರಲಿದೆ ಎಂದು ಹೇಳಿದ್ದರು. ರಾತ್ರಿ 9:30ಕ್ಕೆ ಮತ್ತೆ ಕೇಳಿದಾಗ ವಿಮಾನ ಜೈಪುರಕ್ಕೆ ಹೊರಟಿರುವುದಾಗಿ ತಿಳಿಸಲಾಯಿತು. 100 ಮಂದಿಯನ್ನು ನಿರ್ವಹಿಸಲು ಕೌಂಟರ್ನಲ್ಲಿ ಕೇವಲ ಒಬ್ಬ ಮಹಿಳಾ ಸಿಬ್ಬಂದಿ ಮಾತ್ರ ಇದ್ದರು. ಪದೇ ಪದೇ ಇನ್ನು ಕೆಲವೇ ನಿಮಿಷಗಳಲ್ಲಿ ಎಂದು ಹೇಳುತ್ತಲೇ ಇದ್ದರು. ಆದರೆ ಮಧ್ಯರಾತ್ರಿ 2:57ಕ್ಕೆ ವಿಮಾನ ಟೇಕ್ ಆಫ್ ಆಗಿದೆ.
ಕೆಲ ಕಾರ್ಯಾಚರಣೆಯ ಕಾರಣಗಳಿಂದಾಗಿ ಡಿಸೆಂಬರ್ 27ರಂದು ನವದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ ಈ ಇಂಡಿಗೋ ವಿಮಾನ ವಿಳಂಬವಾಗಿತ್ತು. ವಿಮಾನ ವಿಳಂಬವಾಗಿ ಆಗಮಿಸುವುದನ್ನು ಪ್ರಯಾಣಿಕರಿಗೆ ತಿಳಿಸಲಾಗಿತ್ತು. ಉಪಾಹಾರಗಳನ್ನು ನೀಡಲಾಗಿತ್ತು. ಇನ್ನು ಪ್ರಯಾಣಿಕರಿಗಾದ ಅನಾನುಕೂಲತೆ ಬಗ್ಗೆ ವಿಷಾದಿಸುತ್ತೇವೆ ಎಂದು ಇಂಡಿಗೋ ವಿಮಾನದ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications