ಮಕ್ಕಳ ಅಚ್ಚುಮೆಚ್ಚಿನ ತಾತ ಶ್ರೀನಿವಾಸ ಶರ್ಮ
ಐವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಮಕ್ಕಳಿಗೋಸ್ಕರ ಶಿಶುವಿಹಾರಗಳಿದ್ದಿದ್ದು ಬಹಳ ಕಡಿಮೆ. ಒಂದೋ ಎರಡೋ ಇದ್ದಿರಬಹುದು. ಸ್ಕೂಲುಗಳಿದ್ದರೂ ಮಕ್ಕಳಿಗೆ ಪಾಠ ಹೇಳಿಕೊಡಲು ಟೀಚರ್ ಗಳು ಇನ್ನೂ ಕಡಿಮೆ.
ಅಂಥ ದಿನಗಳಲ್ಲಿ ಧೈರ್ಯದಿಂದ, ಸ್ವತಃ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಗಾಂಧೀಜಿಯವರ ಹುಟ್ಟು ಹಬ್ಬದ ದಿನ, ಅಕ್ಟೋಬರ್ 2, 1950ರಂದು ಶಿಶುವಿಹಾರ ಪ್ರಾರಂಭ ಮಾಡಲು ಹೊರಟ ಧೀಮಂತ ಶ್ರೀನಿವಾಸ ಶರ್ಮ. ಜಿಎಸ್ ಶರ್ಮ ಅವರು ಶುರುಮಾಡಿದ ಸ್ಕೂಲುಗಳು, ಶ್ರೀ ಸರಸ್ವತಿ ವಿದ್ಯಾಮಂದಿರ, ಹಣವಂತರಿಗೆ ಬೇಕಾದ ಕಾನ್ವೆಂಟ್ ಗಳಲ್ಲ. ಸಾಮಾನ್ಯವಾದ ಮಿಡಲ್ ಕ್ಲಾಸಿಗರಿಗೆ ಅನುಕೂಲವಾಗುವಂಥ ಶಿಶುವಿಹಾರಗಳು. ಫೀಸು ಕೂಡ ಕೊಡಲು ಶಕ್ತಿಯಿಲ್ಲದವರ ಎಷ್ಟೋ ತಂದೆ ತಾಯಿಯರ ಮಕ್ಕಳಿಗೂ ಸ್ಕೂಲಿಗೆ ಸೇರಿಸಿಕೊಂಡರು ಶರ್ಮ.
ಆಗಿನ ಕಾಲದಲ್ಲಿ ಬಿ.ಎಡ್. ಇನ್ನೂ ಶುರುವಾಗಿರಲಿಲ್ಲ. ನುರಿತ ಮೇಷ್ಟುಗಳ ಸಂಖ್ಯೆಯೂ ಅಷ್ಟಿರಲಿಲ್ಲ. ಪಾಠ ಹೇಳಿಕೊಡಲು, ಅದರಲ್ಲೂ ಮಕ್ಕಳಿಗೆ ಪಾಠ ಹೇಳಿಕೊಡುವ ಅಭಿರುಚಿ ಮತ್ತು ಆಸಕ್ತಿವುಳ್ಳ ಆಗ ತಾನೆ ಪದವೀಧರರಾದ ಹುಡುಗ, ಹುಡುಗಿಯರನ್ನು ಸ್ಕೂಲಿಗೆ ಸೇರಿಸಿಕೊಂಡರು ಶರ್ಮ. ಇದೊಂದು ಆಗಿನ ಕಾಲಕ್ಕೆ ಪವಾಡವೇ ಸರಿ.
ಓದುವ ಬಾಲಕ ಬಾಲಿಕೆಯರ ಸಂಖ್ಯೆ ಬೆಳೆಯುತ್ತ ಬೆಂಗಳೂರಿನಲ್ಲಿ 10 ವಿದ್ಯಾಮಂದಿರಗಳನ್ನು ತೆರೆದ ಕೀರ್ತಿ ಶ್ರೀನಿವಾಸ ಶರ್ಮರದು. ಕೋಲಾರದಲ್ಲೂ ಒಂದು ಶಿಶುವಿಹಾರವನ್ನು ತೆರೆದರು.

ಒಂದರಿಂದ ಹತ್ತನೇ ತರಗತಿಯ ತನಕ ಓದುವ ಶಾಲೆಯಲ್ಲಿ ಮಕ್ಕಳ ಬೆಳವಣಿಗೆಗೆ ಎಲ್ಲಾ ತರಹದ ಸುಸಜ್ಜತೆಯನ್ನು ಮಾಡಿದ್ದರು. ಮಕ್ಕಳ ಆಟದ ಬಗ್ಗೆಯೂ ವಿಶೇಷ ಮುತುವರ್ಜಿವಹಿಸಿದ್ದರು. ಬ್ಯಾಸ್ಕೆಟ್ ಬಾಲ್, ಫುಟ್ಬಾಲ್, ವಾಲಿಬಾಲ್ ಮತ್ತು ಹೆಣ್ಣು ಮಕ್ಕಳು ಆಡುವ ಥ್ರೋ ಬಾಲ್ ಗಳಿಗೆ ಬೇಕಾದ ಜಾಗ ಮತ್ತು ಯೂನಿಫಾರ್ಮ, ಉಪಕರಣಗಳು ಒದಗಿಸಿದ್ದರು. ಹೋದ ವರ್ಷ ಸ್ಕೂಲಿನ ಮಕ್ಕಳಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತದ ವನ್ ಡೇ ಮ್ಯಾಚನ್ನು ವೀಕ್ಷಿಸಲು ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದರು.
ಬ್ರಹ್ಮಚಾರಿಯಾಗಿದ್ದ ಶರ್ಮ ತಮ್ಮ ಜೀವನವನ್ನೇ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಾಗಿಟ್ಟರು. ಪ್ರತಿ ವರ್ಷ ಶಿಕ್ಷಕ, ಶಿಕ್ಷಕಿಯರನ್ನು ಕರೆದುಕೊಂಡು ದಕ್ಷಿಣ ಮತ್ತು ಉತ್ತರ ಭಾರತದ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಶರ್ಮ ಅವರು ವೃದ್ಧ ತಂದೆ ತಾಯಿಯರನ್ನು ಮರೆಯಲಿಲ್ಲ. ಶ್ರವಣಕುಮಾರನ ತರಹ ಅವರನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಂಡು ಕೊನೆಯ ತನಕ ಅವರ ಸೇವೆ ಮಾಡಿದರು ಶರ್ಮ.
1980ರಲ್ಲಿ, 1800 ಸ್ಕೂಲ್ ಗಳನ್ನು ಹೊಂದಿರುವ, ಕರ್ನಾಟಕದ ಅನ್ ಯೆಡೆಡ್ ಸ್ಕೂಲ್ಸ್ ಮ್ಯಾನೇಜ್ಮೆಂಟ್ ಅಸೋಶಿಯೇಷನ್ (KUSMA)ದ ಫೌಂಡರ್- ಪ್ರೆಸಿಡೆಂಟ್ ಆಗಿದ್ದರು. ಕೊನೆಯ ತನಕ ಮಕ್ಕಳ ವಿದ್ಯೆಗೆ ವಿಶೇಷವಾಗಿ ದುಡಿದ ತೊಂಬತ್ತು ವರ್ಷದ ಶ್ರೀನಿವಾಸ ಶರ್ಮ ಮೊನ್ನೆ 6 ಮಾರ್ಚಿ ಕಾಲವಾದರು.
ಇವರ ಅನಂತ ಸೇವೆಗೆ ರಾಜ್ಯ ಸರ್ಕಾರ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಿ ಎಂಬುದು ಅಭಿಮಾನಿಗಳ ಆಶಯ. ಹಾಗಿದ್ದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಜೀವನವನ್ನೇ ಮುಡುಪಾಗಿಸಿದ ಧೀಮಂತ ಶ್ರೀನಿವಾಸ ಶರ್ಮರ ಆತ್ಮಕ್ಕೆ ನಾವು ಕೊಡುವ ಅಂತಿಮ ನಮನ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications