ಇಡಿ ವಶದಲ್ಲಿರುವ ಐಎಂಎ ಮನ್ಸೂರ್ ಖಾನ್ ಜಯದೇವ ಆಸ್ಪತ್ರೆಗೆ ದಾಖಲು
Recommended Video
ದುಬೈನಿಂದ ಬಂದ ಮನ್ಸೂರ್ ಅಲಿ ಖಾನ್ ಈಗ ಎಲ್ಲಿದ್ದಾನೆ ಗೊತ್ತಾ..? | Oneindia Kannada
ಬೆಂಗಳೂರು, ಜುಲೈ 21: ಬಹುಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ, ಆ ನಂತರ ದೇಶ ಬಿಟ್ಟು ದುಬೈಗೆ ತೆರಳಿದ್ದ ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ಅಲಿ ಖಾನ್ ವಾಪಸ್ ಭಾರತಕ್ಕೆ, ಬೆಂಗಳೂರಿಗೆ ಬಂದಿದ್ದು ನಿಮಗೆಲ್ಲ ಗೊತ್ತಾಗಿರಬಹುದು. ಜಾರಿ ನಿರ್ದೇಶನಾಲಯದಿಂದ (ಇಡಿ) ತನಿಖೆ ನಡೆಸುವ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಆ ಕೂಡಲೇ ಇಸಿಜಿ ಮಾಡಲಾಗಿದೆ.
ಒಂದು ಗಂಟೆಗೂ ಹೆಚ್ಚು ಕಾಲ ವೈದ್ಯರು ತಪಾಸಣೆ ನಡೆಸಿದ್ದಾರೆ. ಆ ವೇಳೆ, " ನನಗೆ ಎದೆ ನೋವಾಗುತ್ತಿದೆ" ಎಂದು ಮನ್ಸೂರ್ ಖಾನ್ ಹೇಳಿದ್ದಾನೆ. ಆ ಕೂಡಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜತೆಯಾಗಿ ಜಯದೇವ ಆಸ್ಪತ್ರೆಗಾಗಿ ಚಿಕಿತ್ಸೆಗಾಗಿ ಭಾನುವಾರದಂದು ಕರೆದೊಯ್ಯಲಾಗಿದೆ.

ಅಧಿಕ ಲಾಭದ ಆಮಿಷ ತೋರಿಸಿ, ಸಾವಿರಾರು ಜನ ಹೂಡಿಕೆದಾರರಿಂದ ನೂರಾರು ಕೋಟಿ ರುಪಾಯಿ ಪಡೆದು, ಹಿಂತಿರುಗಿಸದ ಕಾರಣಕ್ಕೆ ಅಪಾರ ಸಂಖ್ಯೆಯಲ್ಲಿ ದೂರು ದಾಖಲಾಗಿದೆ. ಇನ್ನು ದುಬೈನಿಂದ ವಾಪಸ್ ಬಂದ ಮನ್ಸೂರ್ ಅಲಿ ಖಾನ್ ಹಲವು ಪ್ರಭಾವಿಗಳ ಹೆಸರನ್ನು ಹೇಳಿರುವುದಾಗಿ ವರದಿ ಆಗಿತ್ತು.












Click it and Unblock the Notifications