ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಇಡ್ಲಿ!
ಬೆಂಗಳೂರು, ಅಕ್ಟೋಬರ್ 01; ದಕ್ಷಿಣ ಭಾರತದ ಬಹುತೇಕ ಜನರ ನೆಚ್ಚಿನ ಉಪಹಾರ ಇಡ್ಲಿ. ಈಗಾಗಲೇ ತಟ್ಟೆ ಇಡ್ಲಿ, ಸಣ್ಣ ಇಡ್ಲಿ, ಬಟನ್ ಇಡ್ಲಿ ಹೀಗೆ ವಿವಿಧ ಮಾದರಿ ಇಡ್ಲಿಗಳು ಖ್ಯಾತಿಗಳಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಐಸ್ ಕ್ರೀಂ ಮಾದರಿ ಇಡ್ಲಿಯ ಫೋಟೋಗಳು ವೈರಲ್ ಆಗಿವೆ.
ಬೆಂಗಳೂರಿನ ಹೋಟೆಲ್ವೊಂದರಲ್ಲಿ ಐಸ್ ಕ್ರೀಂ ಕಡ್ಡಿ ಹಾಕಿ ಕೊಡುವ ಮಾದರಿಯ ಇಡ್ಲಿ ಮಾಡಲಾಗಿದೆ. ಸಾಂಬಾರ್, ಚಟ್ನಿ ಜೊತೆ ಅದನ್ನು ಸವಿಯಲು ಕೊಡಲಾಗಿದೆ. ಈ ಇಡ್ಲಿ ಬಗ್ಗೆ ಈಗ ಬಿಸಿ-ಬಿಸಿ ಚರ್ಚೆಯಾಗುತ್ತಿದೆ.
ಹೊಸ ಮಾದರಿ ಇಡ್ಲಿಯನ್ನು ಹಲವಾರು ಜನರು ಸ್ವಾಗತಿಸಿದ್ದಾರೆ. ಇನ್ನೂ ಕೆಲವು ಪುರಾತನ ಇಡ್ಲಿಯ ಸವಿಯನ್ನು ನೆನೆದು, ಕಡ್ಡಿ ಇರುವ ಇಡ್ಲಿ ನೋಡಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಕಡ್ಡಿ ಇರುವ ಇಡ್ಲಿ ನೋಡಿ ಕೆಲಸವು ಕುಲ್ಫಿ ಎಂದು ಗೊಂದಲಕ್ಕೆ ಒಳಗಾದರು. ಕುಲ್ಫಿ ತಿನ್ನಲು ಯಾವಾಗಿನಿಂದ ಸಾಂಬಾರ್, ಚಟ್ನಿ ನೀಡಲು ಆರಂಭಿಸಿದರು? ಎಂದು ಪ್ರಶ್ನೆಯನ್ನು ಎಸೆದಿದ್ದಾರೆ.
ಉಡುಪಿಯ ಇಡ್ಲಿಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬ್ರ್ಯಾಂಡ್ ಟ್ರೇಡ್ ಮಾರ್ಕ್ ಗೌರವ, ಸ್ಥಾನಮಾನ ಸಿಕ್ಕಿದೆ ಎಂಬ ಸುದ್ದಿಯ ನಡುವೆಯೇ ಈ ಕುಲ್ಫಿ ಮಾದರಿ ಇಡ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Innovative food technology of how the Idli got attached to the Ice cream stick.
— Mahendrakumar (@BrotherToGod) September 30, 2021
Bengaluru and it's food innovations are always synonymous!@vishalk82 pic.twitter.com/IpWXXu84XV
ಇಡ್ಲಿ ದಕ್ಷಿಣ ಭಾರತದ ಜನರ ಹಾಟ್ ಫೆವರೀಟ್. ಆದರೆ ಕಾಲ ಬದಲಾದಂತೆ ಇಡ್ಲಿಯ ಹೊಸ ಅವತಾರಗಳು ಜನರ ಮುಂದೆ ಬಂದು ನಿಂತಿವೆ. ಹಲವಾರು ಕಾಂಬಿನೇಷನ್ ಇಡ್ಲಿಗಳು ಈಗ ಸಿಗುತ್ತವೆ. ಆರೋಗ್ಯದ ದೃಷ್ಟಿಯಿಂದಲೂ ಬಿಸಿ ಇಡ್ಲಿ, ಚಟ್ನಿ, ಸಾಂಬಾರ್ ಅತ್ಯುತ್ತಮ ಎಂಬ ವರದಿಗಳು ಸಹ ಇವೆ.
ಯಾವುದೇ ರೋಗದಿಂದ ಚೇತರಿಸಿಕೊಳ್ಳುವ ಜನರಿಗೆ ವೈದ್ಯರು ಸಲಹೆ ನೀಡುವ ಮೊದಲ ಆಹಾರ ಇಡ್ಲಿ. ಇದು ಬಹಳ ಬೇಗ ಜೀರ್ಣವಾಗುತ್ತದೆ ಮತ್ತು ಹೊಟ್ಟೆ ಭಾರ ಎನ್ನಿಸಿದೇ ದಿನಪೂರ್ತಿ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
ಇಡ್ಲಿಯಲ್ಲಿ ಫೈಬರ್ ಹೆಚ್ಚಾಗಿರುತ್ತದೆ. ಪ್ರೊಟೀನ್ ಅಂಶ ಸಹ ಬೇಕಾದಷ್ಟಿದೆ. ತೂಕ ಇಳಿಸಬೇಕು ಎನ್ನುವವರಿಗೆ ಇಡ್ಲಿಯೇ ಬೆಸ್ಟ್. ಇಡ್ಲಿಯ ಜೊತೆ ನಾವು ಚಟ್ನಿ, ಸಾಂಬಾರ್ ತಿನ್ನುತ್ತೇವೆ. ತೆಂಗಿನ ಕಾಯಿ ಅಂಶಗಳು ಇದರಲ್ಲಿ ಸೇರಿರುತ್ತದೆ. ಇವುಗಳು ಸಹ ಫೈಬರ್ ಯುಕ್ತವಾಗಿವೆ ಎಂದು ಅಧ್ಯಯನ ಹೇಳುತ್ತದೆ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ಆಂಧ್ರಪ್ರದೇಶದಲ್ಲಿ ಕಲಬೆರಕೆ ಹಾಲು ಸೇವಿಸಿ 16 ಮಂದಿ ಸಾವು: ಹಲವು ರಾಜ್ಯಗಳಲ್ಲಿ ಅಧಿಕಾರಿಗಳಿಂದ ದಾಳಿ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications