ಗ್ರಹಣದ ದಿನ ತಟ್ಟೆಯ ಮೇಲೆ ಒನಕೆ ನಿಂತಿದ್ದು ಹೇಗೆ? ಇಲ್ಲಿದೆ ಕಾರಣ
Recommended Video
ಬೆಂಗಳೂರು, ಜನವರಿ 07: ಗ್ರಹಣದ ದಿನ ತಟ್ಟೆಯ ಮೇಲೆ ನೆಟ್ಟಗೆ ಒನಕೆ ನಿಂತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದವು. ಆದರೆ ಅದಕ್ಕೆ ವೈಜ್ಞಾನಿಕ ಕಾರಣ ಇದೀಗ ಬಯಲಾಗಿದೆ.
ಗ್ರಹಣದ ದಿನ ಮಾತ್ರವಲ್ಲ ಗ್ರಹಣ ಇಲ್ಲದ ಸಾಮಾನ್ಯ ದಿನದಂದೂ ಸಹ ಒನಕೆ ನೆಟ್ಟಗೆ ನಿಲ್ಲುತ್ತದೆ. ಒನಕೆ ನಿಲ್ಲುವುದು ಸಾಮಾನ್ಯ ವಿಷಯವೇ ಹೊರತು ಅದೊಂದು ಪವಾಡವಲ್ಲ ಎಂದು ಖ್ಯಾತ ಪವಾಡ ಭಂಜಕ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಹುಲಿಕಲ್ ನಟರಾಜ್ ನಿರೂಪಿಸಿದ್ದಾರೆ.
ಒನಕೆ ನೆಟ್ಟಗೆ ನಿಲ್ಲುವ ಕುರಿತು ಪ್ರಯೋಗವೊಂದನ್ನು ಮಾಡಿ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿರುವ ಅವರು, ಗ್ರಹಣ ಇಲ್ಲದ ದಿನ ಸಹ ಒನಕೆಯನ್ನು ತಟ್ಟೆಯ ಮೇಲೆ ನೆಟ್ಟಗೆ ನಿಲ್ಲಿಸಿದ್ದಾರೆ. ಜೊತೆಗೆ ಹಾಗೆ ಒನಕೆ ನಿಲ್ಲಲು ಕಾರಣವನ್ನೂ ಬಹಿರಂಗ ಪಡಿಸಿದ್ದಾರೆ.
'ಒನಕೆ ತಟ್ಟೆಯ ಮೇಲೆ ಅಥವಾ ನೆಲದಲ್ಲಿ ನೆಟ್ಟಗೆ ನಿಲ್ಲಲು ಗ್ರಹಣ ಕಾರಣವಲ್ಲ ಬದಲಿಗೆ ಅದರ ರಚನೆ ಮತ್ತು ವಾಯುವಿನ ಒತ್ತಡ ಕಾರಣ' ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ.

ಗ್ರಹಣ ಇಲ್ಲದ ದಿನವೂ ಒನಕೆ ನಿಲ್ಲುತ್ತದೆ
ತಟ್ಟೆಯಲ್ಲಿ ನೀರು ಹಾಕಿ ಅಲ್ಲಿ ಒನಕೆಯನ್ನಿಟ್ಟಾಗ ರೇಚಕ ಗುಣದಿಂದ ಹಾಗೂ ಬಾಹ್ಯ ವಾಯುವಿನ ಒತ್ತಡದಿಂದ ಒನಕೆ ನೆಟ್ಟಗೆ ನಿಲ್ಲುತ್ತದೆ ಎಂದಿದ್ದಾರೆ ನಟರಾಜ್, ಅವರ ಮಾತಿಗೆ ಪೂರಕವಾಗಿ ಒನಕೆಯನ್ನು ನೆಲದ ಮೇಲೆ, ಖಾಲಿ ತಟ್ಟೆಯಲ್ಲಿ ಹಾಗೂ ತಟ್ಟೆಯಲ್ಲಿ ನೀರು ಸುರಿದು ಅದರ ಮೇಲೆ ನಿಲ್ಲಿಸಿ ತೋರಿಸಿದ್ದಾರೆ. ಈ ವಿಡಿಯೋವನ್ನು ನಟರಾಜ್ ಅವರು ಚಿತ್ರೀಕರಿಸಿರುವುದು ಡಿಸೆಂಬರ್ 30 ರಂದು, ಅಂದು ಯಾವುದೇ ಗ್ರಹಣವಿರಲಿಲ್ಲ.

ಎಕ್ಕದ ಎಲೆಯ ಮೂಢನಂಬಿಕೆ ಹಿಂದಿನ ಸತ್ಯ
ಇದೊಂದೆ ಅಲ್ಲದೆ ಎಕ್ಕದ ಎಲೆಯ ಮೂಡನಂಭಿಕೆಯನ್ನೂ ಭಂಜನೆ ಮಾಡಿರುವ ಅವರು, ಲೋಟದಲ್ಲಿ ನೀರು ಹಾಕಿ ಅದನ್ನು ಎಕ್ಕದ ಎಲೆಯಿಂದ ಮುಚ್ಚಿ ಲೋಟವನ್ನು ತಲೆಕೆಳಗು ಮಾಡಿ ಹಿಡಿದಾಗ ನೀರು ಚೆಲ್ಲದೆ ಹಾಗೆ ನಿಲ್ಲುವ ಪ್ರಯೋಗವನ್ನೂ ಮಾಡಿದ್ದಾರೆ. ಅದಕ್ಕೂ ಸಹ ಗಾಳಿಯ ಬಾಹ್ಯ ಒತ್ತಡವೇ ಕಾರಣ ಎಂದು ಹುಲಿಕಲ್ ನಟರಾಜ್ ನಿರೂಪಿಸಿದ್ದಾರೆ.

ಸಗಣಿ ನೀರು ಹಾಕಿದ ತಟ್ಟೆಯನ್ನು ಹಿಡಿದಿಡುತ್ತೇ ಚಂಬು
ಸಗಣಿ ನೀರು ಹಾಕಿದ ತಟ್ಟೆಯ ಮೇಲೆ ಬೋರಲು ಹಾಕಿದ ಚೆಂಬು ತಟ್ಟೆಯನ್ನು ಬಿಡದೆ ಹಿಡಿದುಕೊಳ್ಳುವ ಪ್ರಯೋಗವನ್ನೂ ನಟರಾಜ್ ಮಾಡಿದ್ದಾರೆ. ಇದನ್ನೂ ಸಹ ಗ್ರಹಣದ ದಿನ ಕೆಲವು ಕಡೆಗಳಲ್ಲಿ ಮಾಡುತ್ತಾರೆ. ಇದೂ ಸಹ ಗ್ರಹಣದ ದಿನವಷ್ಟೇ ಸಾಧ್ಯವೆಂದು ನಂಬುತ್ತಾರೆ. ಆದರೆ ಇದು ಸುಳ್ಳು ಇದರ ಹಿಂದೆ ವಿಜ್ಞಾನವಿದೆ, ಗ್ರಹಣಕ್ಕೂ ಇದಕ್ಕೂ ಸಂಬಂಧವಿಲ್ಲವೆಂದು ಹುಲಿಕಲ್ ನಟರಾಜ್ ಹೇಳುತ್ತಾರೆ.

ಚಂಬಿನ ಒಳಗೆ ನಿರ್ವಾತ ಸೃಷ್ಟಿಯಾಗುತ್ತದೆ
ಸಗಣಿ ನೀರು ತುಂಬಿದ ತಟ್ಟೆಯ ಒಳಗೆ ಚೆಂಬು ಬೋರಲು ಹಾಕಿದಾಗ ಚೆಂಬಿನ ಒಳಗೆ ನಿರ್ವಾತ ಸೃಷ್ಟಿಯಾಗುತ್ತದೆ. ಹಾಗಾಗಿ ಅದು ತಟ್ಟೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ಚೆಂಬಿನ ಒಳಗೆ ಸ್ವಲ್ಪ ಗಾಳಿ ಹೋದ ಕೂಡಲೇ ಚೆಂಬು ತಟ್ಟೆಯನ್ನು ಬಿಡುತ್ತದೆ ಎಂದು ಪ್ರಯೋಗದ ಮೂಲಕ ನಟರಾಜ್ ತೋರಿಸಿಕೊಟ್ಟಿದ್ದಾರೆ.
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications