ಟಿವಿ ಚಾನಲ್ಲಿನಲ್ಲಿ ಮತ್ತೆ ಕನಲಿ ಕೆಂಡವಾದ 'ಹುಚ್ಚ' ವೆಂಕಟ್
ಬೆಂಗಳೂರು, ನವೆಂಬರ್ 17 : ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಬಸ್ಸುಗಳಲ್ಲಿ, ರೈಲುಗಳಲ್ಲಿ 'ಹುಚ್ಚ' ವೆಂಕಟ್ ಅವರೇ ರಾರಾಜಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಬರೀ ಅವರದೇ ಮಾತು. ಮೀಡಿಯಾಗಳಂತೂ ಅವರ 'ಹುಚ್ಚು'ತನವನ್ನೇ ಬಂಡವಾಳ ಮಾಡಿಕೊಂಡು ಟಿಆರ್ಪಿ ಹೆಚ್ಚಿಸಿಕೊಳ್ಳುತ್ತಿವೆ.
ನಿಜಕ್ಕೂ ಬುದ್ಧಿವಂತರಾಗಿರುವ 'ಹುಚ್ಚ' ವೆಂಕಟ್ ನಿಜಕ್ಕೂ ಹುಚ್ಚರಾ ಅಥವಾ ಅವರಲ್ಲಿರುವ ಹುಚ್ಚುತನವನ್ನು ಸಮಾಜ(ಮಾಧ್ಯಮ)ವೇ ಕೆರಳಿಸುತ್ತಿದೆಯಾ? ಉತ್ತರಿಸುವುದು ಕಷ್ಟ ಕಷ್ಟ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಟಿವಿಯಿಂದ ಟಿವಿಗೆ ಹಾರುತ್ತ, ಸಮಾಧಾನಚಿತ್ತದಿಂದಲೇ ಸಂದರ್ಶನ ನೀಡುತ್ತಿದ್ದ ವೆಂಕಟ್ ಅವರು ಮತ್ತೆ ಕೆರಳಿ ಕೆಂಡವಾಗುವಂಥ ಘಟನೆ ನಡೆದಿದೆ.
ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ತಮ್ಮ ಕನಸು, ಸಿನೆಮಾ, ಮಹಿಳೆಯರ ಬಗ್ಗೆ ತಮಗಿರುವ ಗೌರವ, ಬಿಗ್ ಬಾಸು, ಕನ್ನಡದ ಬಗ್ಗೆ ತಮಗಿರುವ ಅಭಿಮಾನ ಕುರಿತು ಅನಿಸಿಕೆ ಹಂಚಿಕೊಳ್ಳುತ್ತಿದ್ದ ಹಂತದಲ್ಲಿ, ನಿರ್ದೇಶಕ ರಿಷಿ ಅವರನ್ನು ಕಾಣುತ್ತಲೇ ಹುಚ್ಚ ವೆಂಕಟ್ ಕನಲಿ ಕೆಂಡವಾಗಿದ್ದಾರೆ. [ಹುಚ್ಚ ವೆಂಕಟ್ ಕುರಿತ ಸುದ್ದಿಗಳು]

ಇದಕ್ಕೆ ಕಾರಣ, 'ಕೊಟ್ಲಲ್ಲಪ್ಪೋ ಕೈ' ಕುಖ್ಯಾತಿಯ ನಿರ್ದೇಶಕ ರಿಷಿ ಅವರು, "ವೆಂಕಟ್ ಅವರ 'ಎಕ್ಕಡ, ಕೊಂದ್ಬಿಡ್ತೀನಿ, ಸಾಯಿಸಿಬಿಡ್ತೀನಿ' ಎಂಬಂತಹ ಮಾತುಗಳಿಂದ ಮಕ್ಕಳು ದಿಕ್ಕು ತಪ್ಪುತ್ತಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ" ಎಂಬ ಆರೋಪಿಸಿದ್ದಲ್ಲದೆ, ಅವರ ಜೊತೆ ಚರ್ಚೆಗೆ ಸ್ಡುಡಿಯೋಗೆ ಆಗಮಿಸಿದ್ದು ಈ ಅವಘಡಕ್ಕೆ ಕಾರಣವಾಗಿದೆ.
ರಿಷಿ ಅವರನ್ನು ಸ್ಟುಡಿಯೋದಲ್ಲಿ ಕಾಣುತ್ತಲೇ, ತಮ್ಮ ಎಂದಿನ ರೌದ್ರಾವತಾರವನ್ನು ತಾಳಿದ ವೆಂಕಟ್, ನಾನ್ಯಾರು ಗೊತ್ತೇನೋ ಎಂದು ಅಬ್ಬರಿಸುತ್ತ ರಿಷಿ ಮೇಲೆ ಆಕ್ರಮಣ ಮಾಡಲು ಹೋದರು. "ನಾನು ನಿಮ್ಮ ಅಭಿಮಾನಿ" ಅಂತ ರಿಷಿ ಹೇಳಿದರೂ, "ಎಂಥ ಅಭಿಮಾನಿ ನೀನು? ನನ್ನ ಪ್ರಿನ್ಸಿಪಲ್ ಫಾಲೋ ಮಾಡ್ತೀಯಾ?" ಎಂದು ರೇಗಾಡುತ್ತಲೇ ಹೋದರು. [ಹುಚ್ಚ ವೆಂಕಟ್ ಬಗ್ಗೆ ನಮ್ಮ ಓದುಗರು ಏನಂತಾರೆ?]
ನಿಮಗೆ ನನ್ನ ಬಗ್ಗೆ ಗೌರವವಿದ್ದರೆ ರಿಷಿಯನ್ನು ಸ್ಟುಡಿಯೋದಿಂದ ಹೊರಗೆ ಕಳಿಸಿ ಎಂದು ಒದರಾಡಿದರು. ವೆಂಕಟ್ ಅವರ ಬೆಂಬಲಿಗರು ತಡೆದಿದ್ದರಿಂದ ಆಗಬಹುದಾಗಿದ್ದ ಅನಾಹುತ ತಪ್ಪಿದೆ. ಆದರೆ, ಒಂದು ಸಂದರ್ಶನ ನಡೆಯುತ್ತಿದ್ದಾಗ, ರಿಷಿ ಅವರನ್ನು ಸ್ಟುಡಿಯೋದಲ್ಲಿ ರಿಷಿ ಅವರನ್ನು ಬಿಟ್ಟಿದ್ದು ಸರೀನಾ? ಎಂಬಂತಹ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿವೆ.
ಇದಕ್ಕೂ ಮೊದಲು, ಎಕ್ಕಡ, ಕೊಂದುಬಿಡ್ತೀನಿ ಎಂಬಂತಹ ಮಾತುಗಳನ್ನು ಇನ್ನು ಮುಂದೆ ಆಡಲ್ಲ, ಐ ಆಮ್ ಸಾರಿ ಎಂಬ ಮಾತುಗಳನ್ನೂ ಅವರ ಹೇಳಿದರು. ಆದರೂ, ಸಂದರ್ಶನದುದ್ದಕ್ಕೂ ಅವರನ್ನು ಮತ್ತೆ ಕೆರಳಿಸುವಂಥ ಮಾತುಗಳು ಕೇಳಿಬರುತ್ತಿದ್ದವು. ಈ ಸಂದರ್ಶನಗಳ ಬದಲು ಅವರನ್ನು ಅವರಷ್ಟಕ್ಕೆ ಬಿಟ್ಟರೆ 'ಹುಚ್ಚ' ವೆಂಕಟ್ ವೆಂಕಟ್ ಆಗಿರುತ್ತಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications