ಅಪಘಾತ ಸಂದರ್ಭದಲ್ಲಿ ಕಣ್ಣಿನ ಚಿಕಿತ್ಸೆ ಹೇಗೆ: ತಜ್ಞರ ಮಾಹಿತಿ
ಬೆಂಗಳೂರು, ಜನವರಿ 17 : ರಸ್ತೆ ಅಪಘಾತಗಳಿಂದ ಕಣ್ಣಿಗಳಿಗೆ ಆಗುವ ಗಾಯಗಳ ಪ್ರಮಾಣ ಗಣನೀಯವಾಗಿರುತ್ತದೆ. ಹಲವು ರೋಗಿಗಳು ದೃಷ್ಟಿಯನ್ನೇ ಕಳೆದುಕೊಳ್ಳುತ್ತಾರೆ. ವಾಹನ ಚಾಲನೆಯ ವೇಳೆ ಸರಳವಾದ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ಗಾಯಗಳನ್ನು ತಡೆಯಬಹುದು ಎಂದು ಬೆಂಗಳೂರಿನ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ನೇತ್ರ ಶಸ್ತ್ರಚಿಕಿತ್ಸಕರು ಹೇಳಿದ್ದಾರೆ.
ಭಾರತದಲ್ಲಿ ವರದಿಯಾಗುವ ಕಣ್ಣಿನ ಗಾಯಗಳಿಗೆ ರಸ್ತೆ ಅಪಘಾತಗಳ ಕೊಡುಗೆ 34% ದಷ್ಟಿದೆ. ಕಣ್ಣುಗಳು ಬಹಳ ಸಂವೇದನಾತ್ಮಕವಾದ, ಸೂಕ್ಷ್ಮವಾದ ಮತ್ತು ಸಂಕೀರ್ಣವಾದ ಅಂಗಗಳಾಗಿವೆ. ಚಾಲನೆಯ ವೇಳೆ ಅಪಘಾತಗಳು ಮತ್ತು ಆಕಸ್ಮಿಕ ಘಟನೆಗಳಿಂದ ಕಣ್ಣುಗಳು ಹಾನಿಗೊಳಗಾಗುತ್ತವೆ ಎಂದು ನೇತ್ರ ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರಿನ ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ವಿಟ್ರಿಯೋ ರೆಟಿನಲ್ ಸರ್ವಿಸಸ್ ವಿಭಾಗದಲ್ಲಿ ಹಿರಿಯ ಸಲಹೆಗಾರರಾಗಿರುವ ಡಾ. ಮೋಹನರಾಜ್ ಮಾತನಾಡಿ, ಆಘಾತದ ಸ್ವರೂಪವನ್ನು ಅವಲಂಬಿಸಿ ರಸ್ತೆ ಅಪಘಾತಗಳಲ್ಲಿ ಅನೇಕ ರೀತಿಯ ಕಣ್ಣಿನ ಗಾಯಗಳು ಸಂಭವಿಸಬಹುದು. ಅಪಘಾತದಲ್ಲಿ ಕಣ್ಣುಗಳು, ಕಣ್ಣುರೆಪ್ಪೆಗಳು, ಕಾರ್ನಿಯಾ, ಸ್ಕ್ಲೆರಾ, ಐರಿಸ್, ಲೆನ್ಸ್, ರೆಟಿನಾ ಮತ್ತು ಕಣ್ಣಿನ ನರಗಳ ಸುತ್ತಲಿನ ಮೂಳೆಗಳ ಮೇಲೆ ಪರಿಣಾಮ ಬೀರುವ ಹಲವಾರು ಗಾಯಗಳನ್ನು ನಮ್ಮ ಆಸ್ಪತ್ರೆಯ ಆಘಾತ ಚಿಕಿತ್ಸಾ ವಿಭಾಗದಲ್ಲಿ ನಾವು ನೋಡುತ್ತೇವೆ ಎಂದರು.
ಕಣ್ಣಿನಲ್ಲಿ ರಕ್ತಸ್ರಾವ, ಕಣ್ಣಿನ ಪೊರೆ ಅಥವಾ ರೆಟಿನಾದ ಆಘಾತಕಾರಿ ಬೇರ್ಪಡುವಿಕೆ ಮುಂತಾದ ಪರಿಸ್ಥಿತಿಗಳೂ ಇರಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ಕಣ್ಣು ಛಿದ್ರವೂ ಆಗಬಹುದು (ಓಪನ್ ಗ್ಲೋಬ್ ಇಂಜುರಿ). ವಿನಾಶಕಾರಿ ಪರಿಣಾಮಗಳೊಂದಿಗೆ, ಲೋಹದ ಮತ್ತು ಬೇಡವಿಲ್ಲದ ಬಾಹ್ಯ ವಸ್ತುಗಳು ಕಣ್ಣಿನ ಮೇಲ್ಮೈಯಲ್ಲಿ ಅಥವಾ ಕಣ್ಣಿನ ಒಳಭಾಗದಲ್ಲಿ ಇರಬಹುದು. ಇವುಗಳಲ್ಲಿ ಹಲವು ದೃಷ್ಟಿಯನ್ನು ಕಿತ್ತುಕೊಳ್ಳುವ ಅಪಾಯವಿರುತ್ತದೆ ಎಂದು ವಿವರಿಸಿದರು.

ಗಾಯಾಳುಗಳನ್ನು ಆಸ್ಪತ್ರೆಗೆ ಬಂದಾಗ ಕಣ್ಣಿನ ಚಿಕಿತ್ಸೆ ಕೂಡ ಅಗತ್ಯ
ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಚಿಕಿತ್ಸೆ ನೀಡುವಾಗ ಆಸ್ಪತ್ರೆಗಳ ತುರ್ತು ವಿಭಾಗದಲ್ಲಿ ಕಣ್ಣಿನ ಗಾಯಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು. ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದಾಗ, ರೋಗಿಯ ಜೀವವನ್ನು ಉಳಿಸಲು ದೈಹಿಕ ಗಾಯಗಳ ಮೇಲೆ ವೈದ್ಯರು ಗಮನ ಹರಿಸುತ್ತಾರೆ. ಕಣ್ಣುಗಳನ್ನು ಆಘಾತ ಚಿಕಿತ್ಸಕರು ಸಾಮಾನ್ಯವಾಗಿ ಕೊನೆಯ ಅಂಗವಾಗಿ ಪರಿಗಣಿಸುತ್ತಾರೆ. ಆದರೆ, ನೇತ್ರ ಶಾಸ್ತ್ರಜ್ಞರಿಂದ ತ್ವರಿತವಾಗಿ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ವಿಶೇಷವಾಗಿ ರೋಗಿಯ ತಲೆಗೆ ಆಘಾತವಾಗಿದ್ದರೆ, ಅನೇಕ ಕಣ್ಣಿನ ಗಾಯಗಳಿಗೆ ತಕ್ಷಣದ ರೋಗನಿರ್ಣಯ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಕೋಮಾದಲ್ಲಿದ್ದರೂ ರೋಗಿಯ ಕಣ್ಣಿಗೆ ಹಾನಿಯಾಗಿದೆ ಎಂದು ಶಂಕಿಸಿದರೆ, ನೇತ್ರಶಾಸ್ತ್ರಜ್ಞರಿಗೆ ತಕ್ಷಣವೇ ಕರೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಅಪಘಾತವಾದ ರೋಗಿಗೆ ಕಣ್ಣಿನ ತಜ್ಞರ ಆರೈಕೆಯೂ ಮುಖ್ಯ
ರೋಗಿಯು ಬಂದ ತಕ್ಷಣ ಇತರ ಗಾಯಗಳಂತೆ ಕಣ್ಣುಗಳ ಆರೈಕೆಯೂ ಅದೇ ಸಮಯದಲ್ಲಿ ಆಗುವಂತೆ ಆಸ್ಪತ್ರೆಗಳ ಅಪಘಾತ ಚಿಕಿತ್ಸಾ ವಿಭಾಗದ ಶಿಷ್ಟಾಚಾರವನ್ನು ಬದಲಿಸಬೇಕಿದೆ. ಪ್ರಸ್ತುತವಾಗಿ ಹೀಗೆ ನಡೆಯುತ್ತಿಲ್ಲ. ರಸ್ತೆ ಅಪಘಾತದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ವೈದ್ಯರಲ್ಲಿ ಹೆಚ್ಚಿನ ಅರಿವು ಇರಬೇಕು. ಕಣ್ಣಿಗೆ ಆಗಿರುವ ಹಾನಿಯ ಚಿಹ್ನೆಗಳಿಗೆ ಕಣ್ಣಿನ ಆಘಾತ ತಜ್ಞರಿಂದ ಆರಂಭಿಕ ಗಮನ ನೀಡಬೇಕಾಗುತ್ತದೆ. ಮಾನವನ ಕಣ್ಣುಗಳಂತೆ ಅವುಗಳಿಗೆ ಆಗುವ ಗಾಯಗಳೂ ತುಂಬಾ ಸಂಕೀರ್ಣವಾಗಿವೆ. ದೀರ್ಘಾವಧಿಯ ಅಂಗವೈಕಲ್ಯವನ್ನು ಕಡಿಮೆ ಮಾಡಲು ಮತ್ತು ಕಣ್ಣುಗಳ ಕಾರ್ಯವನ್ನು ಮರುಸ್ಥಾಪಿಸಲು ಇವುಗಳಿಗೆ ತಜ್ಞರ ಆರೈಕೆಯ ಅಗತ್ಯವಿರುತ್ತದೆ ಎಂದರು.

ಅಪಘಾತದ ಸಮಯದಲ್ಲಿ ಕಣ್ಣಿನ ರಕ್ಷಣ ಹೇಗೆ..?
ಕಣ್ಣುಗುಡ್ಡೆಯು ರಕ್ಷಣಾತ್ಮಕ ರಚನೆಯಾಗಿರುವುದರಿಂದ ಅವುಗಳಿಗೆ ಗಾಯವಾಗಿದ್ದರೆ ಸರಿಪಡಿಸಬೇಕಾಗುತ್ತದೆ. ಹಾನಿಯ ತೀವ್ರತೆಯನ್ನು ಅವಲಂಬಿಸಿ ಕಣ್ಣಿನ ಸುತ್ತಲಿನ ಮೂಳೆಯ ಮುರಿತಗಳಿಗೂ ಚಿಕಿತ್ಸೆ ನೀಡಲಾಗುತ್ತದೆ. ಸೋಂಕನ್ನು ತಡೆಗಟ್ಟಲು ಮತ್ತು ಕಣ್ಣುಗುಡ್ಡೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಕಣ್ಣಿನ ಪದರಗಳ ಗಾಯಗಳನ್ನು ಗುಣಪಡಿಸುವ ಅಗತ್ಯವಿರುತ್ತದೆ. ಕಣ್ಣಿನ ಮಸೂರಕ್ಕೆ ಗಾಯವು ಕಣ್ಣಿನ ಪೊರೆಗೆ ಆಘಾತ ಅಥವಾ ಜೋಡಣೆ ತಪ್ಪುವುದಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ, ವಿಶೇಷ ಅಂಟನ್ನು ಬಳಸಿ ಜೋಡಣೆ ತಪ್ಪಿರುವ ಲೆನ್ಸ್ ಅನ್ನು ಸರಿಪಡಿಸಲಾಗುತ್ತದೆ. ಕಣ್ಣುಗಳಲ್ಲಿ ರಕ್ತಸ್ರಾವ ಮತ್ತು ರೆಟಿನಾದ ಜೋಡಣೆ ತಪ್ಪಿದ್ದರೆ ರೆಫರಲ್ ಸೆಂಟರ್ನಲ್ಲಿ ವಿಟ್ರೊರೆಟಿನಲ್ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಡಾ. ಮೋಹನ್ ರಾಜ್ ಮಾಹಿತಿ ನೀಡಿದರು.

ಕಾರಿನ ಮುಂಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳಬಾರದು
ತಂತ್ರಜ್ಞಾನವು ಇಂದು ಎಷ್ಟು ಮುಂದುವರಿದಿದೆ ಎಂದರೆ ಕಾರ್ನಿಯಾ ಅಥವಾ ರೆಟಿನಾದ ಕೇಂದ್ರ ಮತ್ತು ಆಪ್ಟಿಕ್ ನರವು ಹಾನಿಗೀಡಾಗಿದ್ದರೆ, ರೋಗಿಯ ದೃಷ್ಟಿಯನ್ನು ಮರುಸ್ಥಾಪಿಸುವ ಸಾಧ್ಯತೆಗಳು ಸಾಕಷ್ಟು ಉತ್ತಮವಾಗಿವೆ. ಸರಳ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಚಿಕಿತ್ಸೆಗಿಂತ ಅದನ್ನು ತಡೆಗಟ್ಟುವಿಕೆ ಯಾವಾಗಲೂ ಉತ್ತಮವಾಗಿರಬೇಕು. ಜನರು ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ಗಳು, ಸೀಟ್ ಬೆಲ್ಟ್ಗಳು, ಮತ್ತು ಏರ್ಬ್ಯಾಗ್ಗಳಂತಹ ರಕ್ಷಣಾತ್ಮಕ ಕ್ರಮಗಳನ್ನು ಸಂಪೂರ್ಣವಾಗಿ ಬಳಸಬೇಕು. ಸಾಧ್ಯವಾದರೆ, ಕನ್ನಡಕವನ್ನು ಧರಿಸಲು ಪ್ರಯತ್ನಿಸಿ. ಚಿಕ್ಕ ಮಗುವನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಪೋಷಕರ ಮಡಿಲಲ್ಲಿ ಕೂರಿಸಿಕೊಳ್ಳುವ ಸಾಮಾನ್ಯ ಅಭ್ಯಾಸವನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ












Click it and Unblock the Notifications