E-Khata: ಇ- ಖಾತಾದಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ ?
E-Khata: ಎಲ್ಲಾ ಆಸ್ತಿಗಳಿಗೆ ರಾಜ್ಯ ಸರ್ಕಾರವು ಇ ಖಾತಾ ಕಡ್ಡಾಯ ಮಾಡಿದ ಮೇಲೆ ಎಲ್ಲರೂ ಖಾತಾ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಇನ್ನೂ ಲಕ್ಷಾಂತರ ಆಸ್ತಿಗಳಿಗೆ ಇ ಖಾತಾ ಲಭ್ಯವಾಗಿಲ್ಲ. ಅಲ್ಲದೆ ಈಗಾಗಲೇ ಇ - ಖಾತಾ ಮಾಡಿಸಿಕೊಂಡಿರುವವರು ಅದರಲ್ಲಿ ತಪ್ಪು ಅಥವಾ ತಿದ್ದುಪಡಿಗಳು ಆದರೆ ಯಾವ ರೀತಿ ಮಾಡಿಸಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ. ಇ ಖಾತಾದಲ್ಲಿ ಏನಾದರೂ ತಪ್ಪುಗಳಾದರೆ ಅದನ್ನು ಯಾವ ರೀತಿ ಸರಿಪಡಿಸಿಕೊಳ್ಳಬೇಕು ಹಾಗೂ ಅದಕ್ಕೆ ಅನುಸರಿಸಬೇಕಾದ ನಿಯಮಗಳೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ 24 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು ಎಲ್ಲಾ ಆಸ್ತಿಗಳಿಗೂ ಕಡ್ಡಾಯವಾಗಿ ಇ ಖಾತಾ ನೀಡಲಾಗುತ್ತಿದೆ. ಇ ಖಾತಾ ನೀಡುವುದಕ್ಕೆ ಯಾವುದೇ ಕಾಲ ಮಿತಿಯನ್ನು ನಿಗದಿ ಮಾಡಿಲ್ಲ. ಆದರೆ, ಸಾಧ್ಯವಾದಷ್ಟು ಬೇಗ ಖಾತಾ ಮಾಡಿಸಿಕೊಳ್ಳುವುದು ಉತ್ತಮ ಎಂದು ಸೂಚನೆ ನೀಡಲಾಗಿದೆ. ಖಾತಾ ಪ್ರಮಾಣ ಪತ್ರವು ಆಸ್ತಿಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಯಾಗಿದೆ. ಇನ್ನು ಇ ಖಾತಾ ಎನ್ನುವುದು ಆಸ್ತಿಯ ಡಿಜಿಟಲ್ ರೂಪವಾಗಿದೆ. ಹಾಗಾದರೆ ಆಸ್ತಿದಾರರು ಇ ಖಾತಾದಲ್ಲಿ ಏನಾದರೂ ಗೊಂದಲಗಳಾದರೆ ಅಥವಾ ತಪ್ಪುಗಳಾದರೆ ಅದನ್ನು ಸರಿಪಡಿಸಿಕೊಳ್ಳುವುದು ಅತ್ಯಂತ ಸರಳವಾಗಿದೆ. ನೀವು ಇ ಖಾತಾವನ್ನು ಮಾಡಿಸಿಕೊಳ್ಳಲು ಅಥಾವ ಅದರಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸರಳ ವಿಧಾನಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪರಿಚಯಿಸಿದೆ.

ಇ - ಖಾತಾದ ಕರೆಕ್ಷನ್ ಮಾಡುವ ಮುಂಚೆ ಈ ವಿಷಯಗಳನ್ನು ಗಮನಿಸಿ
ತಪ್ಪುಗಳನ್ನು ಗುರುತಿಸಿ: ನಿಮ್ಮ ಕರಡು ಇ-ಖಾತಾವನ್ನು ಮೊದಲು ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಹೆಸರು ತಪ್ಪಾಗಿರುವುದು, ವಿಳಾಸ ಅಥವಾ ಆಸ್ತಿ ವಿವರಗಳಂತಹ ಯಾವುದೇ ದೋಷಗಳು ಅಥವಾ ವ್ಯತ್ಯಾಸಗಳು ಆಗಿವೆಯೇ ಎಂದು ಮೊದಲು ಗುರುತಿಸಿ.
ನಿಮ್ಮ ಆಸ್ತಿಯ ಸಮೀಪದ ಎಆರ್ಒ ಕಚೇರಿಗೆ ಭೇಟಿ ನೀಡಿ: ನಿಮ್ಮ ಆಸ್ತಿ ವ್ಯಾಪ್ತಿಗೆ ಒಳಪಡುವ ಸಹಾಯಕ ಕಂದಾಯ ಅಧಿಕಾರಿ (ARO) ಕಚೇರಿಗೆ ಭೇಟಿ ನೀಡಿ.
ಇ - ಖಾತಾ ತಿದ್ದುಪಡಿ ಅರ್ಜಿ ಸಲ್ಲಿಸಿ: ಇ- ಖಾತಾದಲ್ಲಿ ಯಾವುದಾದರೂ ತಿದ್ದುಪಡಿಗಳಿದ್ದರೆ, ಎಆರ್ಒ ಕೇಸ್ವರ್ಕರ್ಗೆ ತಿಳಿಸಿ ಮತ್ತು ಮಾರಾಟ ಪತ್ರಗಳು ಅಥವಾ ಇತರ ಸಂಬಂಧಿತ ಪುರಾವೆಗಳಂತಹ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿ.
ಇ ಖಾತಾ ತಿದ್ದುಪಡಿ ಪ್ರಕ್ರಿಯೆ: ಕೇಸ್ವರ್ಕರ್ ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡುತ್ತಾರೆ. ಇದಾದ ಮೇಲೆ ತಿದ್ದುಪಡಿಗಳ ನಂತರ ಕಂದಾಯ ಅಧಿಕಾರಿ ಪರಿಶೀಲನೆ ಮಾಡಿ, ಅನುಮೋದಿಸುತ್ತಾರೆ. ಇನ್ನು ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನೀವು ಪರಿಷ್ಕೃತ ಇ-ಖಾತಾ ನಿಮಗೆ ಸಿಗಲಿದೆ.
ನಿಮ್ಮ ಇ-ಖಾತಾದಲ್ಲಿ ತಿದ್ದುಪಡಿಗಳನ್ನು ಮಾಡಲು ಅಥವಾ ಯಾವುದಾದರೂ ತಿದ್ದುಪಡಿಗಳನ್ನು ಮಾಡಬೇಕಾದರೆ ನೀವು ಬಿಬಿಎಂಪಿಯ ಎಆರ್ಒ ಕಚೇರಿಯಲ್ಲಿ ವರದಿ ಮಾಡಬೇಕಾಗುತ್ತದೆ. ಅಲ್ಲಿ ಕೇಸ್ವರ್ಕರ್ಗಳು ತಿದ್ದುಪಡಿಗಳನ್ನು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಆದರೆ ಇದಾದ ಮೇಲೆ ನೀವು ಅವುಗಳನ್ನು ಕಂದಾಯ ಅಧಿಕಾರಿಗಳ ಪರಿಶೀಲನೆಗೆ ಕಳುಹಿಸಬೇಕಾಗುತ್ತದೆ. ಅಲ್ಲಿ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ.
-
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications