ಬಿಎಂಟಿಸಿಯ ಮಾಸಿಕ ಪಾಸು ಪಡೆಯುವುದು ಹೇಗೆ?
ಬೆಂಗಳೂರಿನ ಹೆಚ್ಚಿನ ಜನರು ಸಂಚಾರಕ್ಕಾಗಿ ಬಿಎಂಟಿಸಿ ಬಸ್ಸುಗಳನ್ನು ಅವಲಂಬಿಸಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜನರ ಉಪಯೋಗಕ್ಕಾಗಿ ಮಾಸಿಕ ಪಾಸುಗಳನ್ನು ನೀಡುತ್ತದೆ. ಗುರುತಿನ ಚೀಟಿ ಮತ್ತು ಮಾಸಿಕ ಪಾಸುಗಳನ್ನು ಪಡೆದು ಜನರು ಸುಲಭವಾಗಿ ಸಂಚರಿಸಬಹುದಾಗಿದೆ. ಪ್ರತಿದಿನ ಟಿಕೆಟ್ ತಗೆದುಕೊಳ್ಳುವ ತೊಂದರೆಯನ್ನು ಮಾಸಿಕ ಪಾಸು ತಪ್ಪಿಸುತ್ತದೆ.
ಬಿಎಂಟಿಸಿಯ ಟಿಟಿಎಂಸಿ ನಿಲ್ದಾಣಗಳಲ್ಲಿ, ಕಂಡಕ್ಟರ್ ಬಳಿ ನೀವು ಮಾಸಿಕ ಪಾಸನ್ನು ಪಡೆಯಬಹುದಾಗಿದೆ. ಮಾಸಿಕ ಪಾಸು ಪಡೆಯಲು ನೀವು ಮೊದಲು ಗುರುತಿನ ಚೀಟಿಯನ್ನು ಪಡೆಯಬೇಕಾಗುತ್ತದೆ. ಒಮ್ಮೆ ಗುರುತಿನ ಚೀಟಿ ಪಡೆದರೆ, ಅದು ಮೂರು ವರ್ಷಗಳಿಗೆ ಅನ್ವಯವಾಗುತ್ತದೆ.
ಯಾವ ದಾಖಲೆಗಳು ಬೇಕು : ಮಾಸಿಕ ಗುರುತಿನ ಚೀಟಿಯನ್ನು ಪಡೆಯಲು ನೀವು 100 ರೂ. ಪಾವತಿ ಮಾಡಿ ಅರ್ಜಿಯನ್ನು ಪಡೆಯಬೇಕಾಗುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ವಿಳಾಸ ದೃಢೀಕರಣದ ಮತ್ತು ಎರಡು ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನೀಡಬೇಕು. ಟಿಟಿಎಂಸಿ ನಿಲ್ದಾಣಗಳ ಪಾಸು ವಿತರಣಾ ಕೇಂದ್ರದಲ್ಲಿ ನೀವು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ತಕ್ಷಣ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ನೀಡುತ್ತಾರೆ.

ಯಾವ-ಯಾವ ಪಾಸುಗಳಿವೆ : ಬಿಎಂಟಿಸಿ ಸಾಮಾನ್ಯ, ವಿದ್ಯಾರ್ಥಿ, ಹಿರಿಯ ನಾಗರಿಕ, ವಜ್ರ, ವಾಯು ವಜ್ರ ಮುಂತಾದ ಮಾಸಿಕ ಪಾಸುಗಳನ್ನು ಪರಿಚಯಿಸಿದೆ. ತಿಂಗಳ ಕೊನೆಯ 28ನೇ ದಿನಾಂಕದಿಂದ ಪಾಸುಗಳು ದೊರೆಯುತ್ತವೆ. ಪ್ರಯಾಣ ಮಾಡುವಾಗ ಪಾಸಿನ ಜೊತೆ ಗುರತಿನ ಚೀಟಿ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.
ಕಪ್ಪು ಹಲಗೆ ಪಾಸುಗಳು ರೂ.825 : 825 ರೂ.ನ ಮಾಸಿಕ ಪಾಸು ಪಡೆದರೆ ಕಪ್ಪು ಹಲಗೆ ಬಸ್ಸುಗಳು ಸಂಚರಿಸುವ ವ್ಯಾಪ್ತಿಯವರೆಗೆ ಎಸಿ ಬಸ್ಸುಗಳನ್ನು ಹೊರತು ಪಡಿಸಿ ಉಳಿದ ಬಸ್ಸುಗಳಲ್ಲಿ ಸಂಚರಿಸಬಹುದಾಗಿದೆ.
ಪುಷ್ಪಕ್, ಕೆಂಪು ಹಲಗೆ ರೂ. 1050 : ಎಲ್ಲಾ ಹವಾನಿಯಂತ್ರಣ ರಹಿತ ಬಸ್ಸುಗಳಲ್ಲಿ ಸಂಚರಿಸಬಹುದಾಗಿದೆ. ಈ ಪಾಸು ಪಡೆದರೆ ಟ್ರಂಪೆಟ್ ಮತ್ತು ಗ್ರಾಮೀಣ ಸೇವೆಗಳ ಬಸ್ಸುಗಳಲ್ಲಿ ಪ್ರಯಾಣಿಸುವಂತಿಲ್ಲ. [ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ]
ಗೋಲ್ಡ್ ಮಾಸಿಕ ಪಾಸು ರೂ.2250 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ವಾಯು ವಜ್ರ ಮತ್ತು ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಉಳಿದ ಬಸ್ಸುಗಳಲ್ಲಿ ಸಂಚರಿಸಬಹುದು.
ವಜ್ರ ವಿದ್ಯಾಪಾಸು 1500 ರೂ. : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ವಾಯು ವಜ್ರ ಮತ್ತು ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಉಳಿದ ಬಸ್ಸುಗಳಲ್ಲಿ ಸಂಚರಿಸಬಹುದು. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]
ವಾಯು ವಜ್ರ ಗೋಲ್ಡ್ 3350 ರೂ. : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ವಾಯುವಜ್ರ ಸೇರಿದಂತೆ ಬಿಎಂಟಿಸಿಯ ಎಲ್ಲಾ ಹವಾನಿಯಂತ್ರಿತ ಮತ್ತು ಹವಾ ನಿಯಂತ್ರಣ ರಹಿತ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ.
ಪಾಸುದಾರರಿಗೆ ವಿಶೇಷ ಸೌಲಭ್ಯ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪಾಸು ಹೊಂದಿರುವವರಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತದೆ. ಪಾಸು ಹೊಂದಿದವರು ಸಮಯದ ನಿರ್ಬಂಧವಿಲ್ಲದೆ/ಯಾವುದೇ ಸ್ಥಳದಲ್ಲಿ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಸಂಪೂರ್ಣ ಅಂಗವಿಕಲತೆ ಉಂಟಾದಲ್ಲಿ 2.00 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ವೈದ್ಯಕೀಯ ವೆಚ್ಚ ಮರುಪಾವತಿ : ಪಾಸು ಹೊಂದಿದವರು ವಾಹನ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ಪಡೆದಿದ್ದಲ್ಲಿ, ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಗರಿಷ್ಟ ರೂ.30,000ಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿ ನೀಡಲಾಗುವುದು.
ವಜ್ರ ಮತ್ತು ವಾಯುವಜ್ರ ಪಾಸುದಾರರು : ವಜ್ರ ಪಾಸು ಹೊಂದಿರುವವರು ಯಾವುದೇ ವಿಧವಾದ ವಾಹನ ಅಪಘಾತದಲ್ಲಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗವಿಕಲತೆ ಉಂಟಾದಲ್ಲಿ ರೂ.5 ಲಕ್ಷ ಹಾಗೂ ವಾಯುವಜ್ರ ಪಾಸುದಾರರಿಗೆ 10.00 ಲಕ್ಷಗಳವರೆಗಿನ ಸ್ವಯಂಚಾಲಿತ ಅಪಘಾತ ವಿಮಾ ಸೌಲಭ್ಯವಿದೆ.
ವೈದ್ಯಕೀಯ ವೆಚ್ಚ ಮರುಪಾವತಿ : ವಜ್ರ ಮತ್ತು ವಾಯುವಜ್ರ ಪಾಸು ಹೊಂದಿದವರು ವಾಹನ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ಪಡೆದಿದ್ದಲ್ಲಿ, ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಗರಿಷ್ಟ ರೂ.50,000 ಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ನೀಡಲಾಗುವುದು.
-
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು












Click it and Unblock the Notifications