ದೇವಸ್ಥಾನದಲ್ಲಿ ನನ್ನ ಚಪ್ಪಲಿ ಕದ್ದ ಧೂರ್ತನಾರು?
ಅದ್ಯಾಕೋ ಹೋದ ಶನಿವಾರ ವಿಪರೀತ ಬೋರ್ ಆಗುತ್ತಿತ್ತು, ನಡಿ ಅತ್ಲಾಗೆ ಗುಡಿಭಂಡಾರ ಸುತ್ತಾಕೊಂಡು ಬರೋಣ ಎಂದು ಮನೆಪಕ್ಕದ ದೇವಸ್ಥಾನಕ್ಕೆ ಹೋಗಿದ್ದೆ.
ದೇವಸ್ಥಾನಕ್ಕೆ ಹೋದಾಗಲೆಲ್ಲಾ ನನ್ನ ಈ ಹಿಂದಿನ ಅನುಭವ ಇದ್ದದ್ದರಿಂದ ಚಪ್ಪಲಿ ಬಗ್ಗೆ ಯಾವತ್ತೂ ಸ್ವಲ್ಪ ಹೆಚ್ಚಿನ ಕಾಳಜಿ. ಒಂದು ಕಾಲಿನ ಚಪ್ಪಲನ್ನು ಒಂದು ಕಡೆ ಮತ್ತೊಂದು ಕಾಲಿನ ಚಪ್ಪಲನ್ನು ಇನ್ನೊಂದೆಡೆ ಇಡೋ ಅಭ್ಯಾಸವನ್ನು ಕಟ್ಟುನಿಟ್ಟಾಗಿ ರೂಢಿ ಮಾಡಿಕೊಂಡಿದ್ದೆ.
ಚಪ್ಪಲಿಯನ್ನು ಚಪ್ಪಲಿ ಬಿಡಬೇಕಾದ ಸ್ಥಳದಲ್ಲೇ ಬಿಡತಕ್ಕದ್ದು ಎಂದು ದೇವಸ್ಥಾನದಲ್ಲಿ ಬೋರ್ಡು ತಗಲಾಕಿದ್ರೂ. ಬೇರೆ ಕಡೆ ಬಿಡಲು ಚಪ್ಪಲಿ ಸ್ಟ್ಯಾಂಡ್ ನವನಿಗೆ ದುಡ್ಡು ಕೊಡಬೇಕು ಎನ್ನುವ ಜಿಪುಣತನ ನನ್ನಲ್ಲಿ ಇಲ್ಲದಿದ್ದರೂ ಅದೊಂದು ಅಭ್ಯಾಸವಾಗಿ ಬಿಟ್ಟಿತ್ತು.
ಕಾಲು ತೊಳೆದುಕೊಂಡು ದೇವ್ರಿಗೆ ಒಂದು ಸುತ್ತಾಕಿ, ಕಾಪಾಡಪ್ಪಾ ತಂದೆ ಎಂದು ದೇವರಿಗೆ ಡೈವ್ ಹೊಡೆದು ಹೊರಗೆ ಬಂದು ನೋಡುತ್ತೇನೆ, ಹತ್ತು ದಿನದ ಕೆಳಗೆ ಖರೀದಿಸಿದ್ದ ಒಂದೂವರೆ ಸಾವಿರ ರೂಪಾಯಿಯ ಚಪ್ಪಲಿ ಗಾಯಬ್.

ಸುಮ್ಮನೆ ಮನೆಯಲ್ಲಿ ಕೂತಿದ್ದರೆ ಆಗಿರೋದು, ಮನೆ ಹೊರಗೆ ಕಾಲಿಟ್ಟಿದ್ದಕ್ಕೆ ಸುಮ್ಮನೆ ಜೇಬಿಗೆ ಕತ್ತರಿ ಬಿತ್ತಲ್ಲಪ್ಪಾ ಏಳುಕುಂಡಲವಾಡಾ ಎಂದು ಎಲ್ಲೆಲ್ಲಿ ಹುಡುಕಿದರೂ, ಉಹ್ಹೂಂ.. ಚಪ್ಪಲಿ ಕಣ್ಣಿಗೆ ಬೀಳಲೊಲ್ಲದು.
ಮನಸ್ಸಿಲ್ಲದ ಮನಸ್ಸಿನಲ್ಲಿ ಚಪ್ಪಲಿ ಇಲ್ಲಿ ಇಟ್ಟಿದ್ದೆ, ನೀವೇನಾದ್ರೂ ನೋಡಿದ್ರಾ ಎಂದು ಚಪ್ಪಲಿ ಸ್ಟ್ಯಾಂಡ್ ನವನ ಬಳಿ ಕೇಳಿದೆ. ಸ್ಟ್ಯಾಂಡ್ ನಲ್ಲಿ ಇಟ್ಟಿಲ್ಲ ತಾನೇ, ಮತ್ತೆ ನಮ್ಮನ್ಯಾಕ್ರೀ ಕೇಳ್ತೀರಾ ಎಂದು ಸ್ಟ್ಯಾಂಡ್ ನವನು ವಜ್ರಮುನಿ ಲುಕ್ ಕೊಟ್ಟು ಸುಮ್ಮನಾದ.
ಸರೀ ಬಿಡಪ್ಪಾ ತಂದೇ. ಎಂದು ಅವನ ಮೇಲೆ ಸಂಶಯ ಪತಾಕೆ ಮನಸ್ಸಿನಲ್ಲೇ ಹಾರಿಸಿಕೊಂಡು ಮನೆಗೆ ಹೋಗಲು ಅಣಿಯಾದೆ.
ಆದರೆ, ಇದೇ ಮೊದಲಬಾರಿಗೆ ಈ ರೀತಿಯಾಗಿದ್ದರೆ ಹೋಗ್ಲಿ ಬಿಡು ಎಂದು ಸುಮ್ಮನಾಗಿರ ಬಹುದಾಗಿತ್ತು. ದೇವಸ್ಥಾನಕ್ಕೆ ಹೋದಾಗಲೆಲ್ಲಾ ಅವಾಗಾವಾಗ ಚಪ್ಪಲಿ ಮಾಯವಾಗುತ್ತಲ್ಲಾ why ಎಂದು ಮನಸ್ಸು ಗಿರಿಗಿಟ್ಲೆ ಹೊಡೆಯಲಾರಂಭಿಸಿತು.
ಚಪ್ಪಲಿ ಹಿಂದಿನ ರಹಸ್ಯದ ಕಿಸ್ಸಾ ಏನಿರಬಹುದು? ದೇವರಿಗೆ ನನ್ನ ಮೇಲೇ ಏನಾದರೂ ಸಿಟ್ಟಿರಬಹುದೇ ಅಥವಾ ನನ್ನ ಗ್ರಹಗತಿ ಸರಿಯಿಲ್ವೇ, ಅದೂ ಅಲ್ಲದಿದ್ದರೆ ಹೋದ ಜನ್ಮದಲ್ಲಿ ಚಮ್ಮಾರರಿಗೆ ನನ್ನಿಂದ ಏನಾದ್ರೂ ಆಗ ಬಾರದು ಆಗಿದೆಯಾ ಎನ್ನುವ ಹತ್ತು ಹಲವು ಪ್ರಶ್ನೆಗಳು ತಲೆ ಕುಟ್ಟಲಾರಂಭಿಸಿತು.
@OneindiaKannada City Market hattira iro Apsara mathu Parimala Theatre compound horabagada footpath ondu suthu nodi...sikru sigabahudu! :))
— Shankar (@ceeyes) June 1, 2015 ಚಪ್ಪಲಿ ಪದೇ ಪದೇ ಕಳೆದು ಹೋಗುತ್ತಿರುವುದಕ್ಕೆ ತನಿಖೆಗೆ ಒತ್ತಾಯಿಸುವುದಕ್ಕಂತೂ ಆಗುವುದಿಲ್ಲ? ಹಾಗಂತಾ ದೇವಸ್ಥಾನಕ್ಕೆ ಹೋಗದಿರಲೂ ಆಗದು. ಇದಕ್ಕೆಲ್ಲಾ ಒಂದು ಪರಿಹಾರ ಅನ್ನೋದೇ ಇಲ್ವಾ ಎಂದು ಯೋಚಿಸುತ್ತಾ ದೇವಸ್ಥಾನದಿಂದ ಹೊರಬಂದೆ.
ಪದೇ ಪದೇ ಚಪ್ಪಲಿ ಕಳೆದು ಹೋಗುಲು ಅದರ ಹಿಂದಿನ ಕಾಣದ ಕೈಗಳು ಯಾರು, ಇದರ ಹಿಂದೆ ಏನಾದರೂ ದೊಡ್ಡ ಮಾಫಿಯಾ ಇದೆಯಾ ಎಂದು ನಾರಾಯಾಣ ಸ್ವಾಮಿ ಸ್ಟೈಲಿನಲ್ಲಿ ಯೋಚನೆ ಮಾಡುತ್ತಾ... ಮನೆಕಡೆಗೆ ವಿಷಾದದಿಂದ ನಡೆದೆ... ಪ್ರಶ್ನೆ..ಪ್ರಶ್ನೆಯಾಗಿಯೇ ಉಳಿದೋಯಿತು.
ಕಳ್ಳತನವಾಗಬಹುದು ಎಂದು ಬಗಲಿನ ಹೆಗಲುಚೀಲದಲ್ಲಿ ಚಪ್ಪಲು ಇಟ್ಟುಕೊಂಡು ದೇವಸ್ಥಾನದೊಳಗೆ ಹೋಗುವವರೂ ಇರ್ತಾರಪ್ಪಾ.. ಸಂಡೇ ಬಜಾರಿನಲ್ಲಿ ಹೋಗಿ ನೋಡು ಸಿಕ್ಕರೂ ಸಿಗಬಹುದು ಎಂದು ಸ್ನೇಹಿತ ಸಲಹೆ ಕೊಟ್ಟಿದ್ದಾನೆ. ನಿಮಗೇನಾದರೂ ಇಂಥಾ ಅನುಭವ ಆಗಿದೆಯಾ?
-
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications