ಮುಳುಗುತ್ತಿದ್ದ ಮಹಿಳೆಯ ರಕ್ಷಣೆ ಮಾಡಿದ ವಿಡಿಯೋ ವೈರಲ್
Recommended Video

ಮಳೆಯ ಬಗ್ಗೆ ಬಹಳ ಒಳ್ಳೊಳ್ಳೆ ರೂಪಕಗಳಿವೆ. ಆದರೆ ಬೆಂಗಳೂರಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಸಾವಿನ ಸುದ್ದಿ ಹೊತ್ತು ತರುತ್ತಿದೆ. ಸಂಜೆ ಹೊತ್ತಿಗೆ ಮನೆಯಲ್ಲಿರುವವರೂ ಕ್ಷೇಮವಲ್ಲ, ಹೊರಗೆ ಹೋದವರ ಬಗ್ಗೆ ಆತಂಕ ಕಡಿಮೆಯಾಗಲ್ಲ. ಹೀಗಿದೆ ಸ್ಥಿತಿ. ಮಳೆಯ ಭೀಕರತೆಯನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮಕ್ಕಳು ಆಟವಾಡುವ ಕಾರನ್ನು ಬಕೆಟ್ ನೊಳಗೆ ನೀರನ್ನು ಹಾಕಿ ಮುಳುಗಿಸುತ್ತಾರಲ್ಲ, ಹಾಗೆ ಆಗಿದೆ ಕಾರಿನ ಸ್ಥಿತಿ. ಕಾರಿನೊಳಗೆ ಸಿಲುಕಿಕೊಂಡ ಮಹಿಳೆಯನ್ನು ಹೇಗೆ ಮಳೆ ನೀರು ಮುಳುಗಿಸಿದೆ ಎಂಬ ದೃಶ್ಯಾವಳಿಗಳು ಅದರಲ್ಲಿದೆ.
In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ

ಬಿಳಿ ಬಣ್ಣದ ಕಾರೊಂದರ ಬಾನೆಟ್ ವರೆಗೆ ನೀರು ಇದ್ದು, ಮುಂಭಾಗಕ್ಕೆ ಬಾಗಿ, ಹಿಂಭಾಗ ನೀರಿನಲ್ಲಿ ತೇಲುತ್ತಿದೆ. ಪ್ರವಾಹದ ರೀತಿ ಜೋರಾಗಿ ನೀರು ಹರಿಯುತ್ತಿರುವ ಕಡೆಗೆ ಕಾರು ಜೋಲಿ ಹೊಡೆಯುತ್ತಿದೆ. ಈ ದೃಶ್ಯ ಕಂಡಂಥ ಜನರು ಕಾರೊಳಗೆ ಸಿಕ್ಕಿಕೊಂಡ ಮಹಿಳೆಯ ರಕ್ಷಣೆಗಾಗಿ ಸೊಂಟದವರೆಗೆ ಹರಿಯುತ್ತಿರುವ ನೀರಿಗೆ ಧುಮುಕುತ್ತಾರೆ.
ಕೊನೆಗೂ ನಾಲ್ವರು ಪುರುಷರು ಆ ಮಹಿಳೆಯ ರಕ್ಷಣೆ ಮಾಡುವಲ್ಲಿ ಸಫಲರಾಗುತ್ತಾರೆ. ವರದಿಗಳ ಪ್ರಕಾರ, ಆ ನಾಲ್ವರ ಪೈಕಿ ಮೂವರು ಪೊಲೀಸರು. ಈ ಘಟನೆ ಶುಕ್ರವಾರ ನಾಯಂಡಹಳ್ಳಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಅಂದಹಾಗೆ, ಬೆಂಗಳೂರಿನಲ್ಲಿ ಸುರಿದ ಮಳೆಗೆ ಶುಕ್ರವಾರ ರಾತ್ರಿ ಗೋಡೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಅದರಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬರು ಪುರೋಹಿತರು. ಕುರುಬರಹಳ್ಳಿ-ಲಗ್ಗೆರೆಯ ಒಳಚರಂಡಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.
-
IPL 2026: ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯ, ಮಾರ್ಚ್ 28ಕ್ಕೆ ಬೆಂಗಳೂರಿನ ಯಾವ ರಸ್ತೆಗಳೆಲ್ಲ ಬಂದ್ ಆಗಲಿದೆ? ಇಲ್ಲಿದೆ ಮಾಹಿತಿ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು











Click it and Unblock the Notifications