ಇಂದಿರಾನಗರದ ಓಪನ್ ಸ್ಟ್ರೀಟ್ ಉತ್ಸವಕ್ಕೆ ಹೈಕೋರ್ಟ್ ನಿಂದ ನಿರ್ಬಂಧ
ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ಓಪನ್ ಸ್ಟ್ರೀಟ್ ಉತ್ಸವಕ್ಕೆ ಹೈಕೋರ್ಟಿನಿಂದ ತಡೆಯಾಜ್ಞೆ ಸಿಕ್ಕಿದೆ. ಓಪನ್ ಸ್ಟ್ರೀಟ್ ವಿರುದ್ಧ ಇಂದಿರಾನಗರ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು.
ಬೆಂಗಳೂರು, ಜನವರಿ 10 : ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ಓಪನ್ ಸ್ಟ್ರೀಟ್ ಉತ್ಸವಕ್ಕೆ ಹೈಕೋರ್ಟಿನಿಂದ ತಡೆಯಾಜ್ಞೆ ಸಿಕ್ಕಿದೆ. ಓಪನ್ ಸ್ಟ್ರೀಟ್ ವಿರುದ್ಧ ಇಂದಿರಾನಗರ ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಅವರು ಈ ಉತ್ಸವದ ವಿರುದ್ಧ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಂದಿರಾನಗರದಲ್ಲಿ
ಜ.15ರಂದು
ನಡೆಸಲು
ಉದ್ದೇಶಿಸಿರುವ
'ಓಪನ್
ಸ್ಟ್ರೀಟ್
ಉತ್ಸವ'
ಪ್ರಶ್ನಿಸಿ
ನಿವೃತ್ತ
ಪೊಲೀಸ್
ಮಹಾ
ನಿರ್ದೇಶಕ
ಸಿ.
ದಿನಕರ್
ಹೈಕೋರ್ಟ್ಗೆ
ಸಾರ್ವಜನಿಕ
ಹಿತಾಸಕ್ತಿ
ಅರ್ಜಿ
ಸಲ್ಲಿಸಿದ್ದರು.
ಅರ್ಜಿ
ವಿಚಾರಣೆ
ನಡೆಸಿದ
ಹೈಕೋರ್ಟ್
ವಿಭಾಗೀಯ
ಪೀಠ,
ಈ
ಕಾರ್ಯಕ್ರಮಕ್ಕೆ
ನಿರ್ಬಂಧ
ವಿಧಿಸಿದೆ.
[ಇಂದಿರಾನಗರ:
ಓಪನ್
ಸ್ಟ್ರೀಟ್
ಉತ್ಸವ
ಪ್ರಶ್ನಿಸಿ
ಪಿಐಎಲ್]
ಈ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಖೆ ಅನುಮತಿ ಪಡೆದಿಲ್ಲ, ಸಂಚಾರ ಮಾರ್ಗ ಬದಲಾವಣೆ ಬಗ್ಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂಬ ಅಂಶಗಳನ್ನು ಹೈಕೋರ್ಟ್ ಪರಿಗಣಿಸಿದೆ.
ಜನವರಿ 15ರಂದು ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಉತ್ಸವ ನಿಗದಿಯಾಗಿದೆ. ಪ್ರವಾಸೋದ್ಯಮ ಇಲಾಖೆ, ಬಿಬಿಎಂಪಿ ಹಾಗೂ ಶಾಸಕ ಹ್ಯಾರಿಸ್, ಸಚಿವ ಪ್ರಿಯಾಂಕ್ ಖರ್ಗೆ ಅವರು ಆಯೋಜನೆಯ ಹೊಣೆ ಹೊತ್ತಿದ್ದಾರೆ.
ಈ ಉತ್ಸವದಿಂದ ಪಬ್ ಸಂಸ್ಕೃತಿಗೆ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ ಎಂದು ಐ ಚೇಂಜ್ ಇಂದಿರಾನಗರ ಸೇರಿದಂತೆ ಹಲವು ಸಂಘಟನೆಗಳು ಹೇಳಿವೆ. ಆದರೆ, ಈ ಉತ್ಸವದಲ್ಲಿ ಕರ್ನಾಟಕ ಸಂಗೀತ, ಸಂಕ್ರಾಂತಿ ಸಂಭ್ರಮಾಚರಣೆ ಇರಲಿದೆ, ಪಬ್ ಸಂಸ್ಕೃತಿಗೆ ಪೂರಕವಾಗಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದರು. (ಒನ್ಇಂಡಿಯಾ ಸುದ್ದಿ)