ರಾಘವೇಶ್ವರ ಸ್ವಾಮೀಜಿ ಸಂತರನ್ನು ಒಗ್ಗೂಡಿಸುತ್ತಿರುವುದೇಕೆ?
ಬೆಂಗಳೂರು, ಜೂನ್ 16: ಸನಾತನ ಧರ್ಮದ ಉಳಿವಿಗಾಗಿ, ಸಮತರಲ್ಲಿ ಒಗ್ಗಟ್ಟು ಮೂಡಿಸುವ ಸಲುವಾಗಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಯವರು ಸಂತರ ಸಂಘಟನೆಯನ್ನು ಮಾಡುತ್ತಿದ್ದಾರೆ.
ಆದರೆ 'ಯಾಕೆ ಸುಮ್ಮನೆ ಅವರು ಸಾವಿರಾರು ಸಂತರನ್ನು ಒಂದೆಡೆ ಸೇರಿಸುವ ಸಾಹಸಕ್ಕೆ ಕೈಹಾಕುತ್ತಿದ್ದಾರೆ? ಅವರ ಸ್ವಾರ್ಥಕ್ಕಿರಬಹುದು ಎಂದು ಕೆಲವರು ಹಿಂಬದಿಯಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ಸ್ವಾಮೀಜಿಗಳ ನೈಜ ಉದ್ದೇಶ ಏನು ಎಂಬುದನ್ನು ತಿಳಿಯದೆ ಮಾತನಾಡುವುದು ತರವಲ್ಲ.
ರಾಘವೇಶ್ವರ ಭಾರತಿ ಗುರುಗಳು ಅಂದೇ ಘೋಷಿಸಿದ್ದರು, 'ಸಂತ ಸಂಸ್ಕೃತಿಯನ್ನೇ ನಾಶ ಮಾಡಲು ಹುನ್ನಾರ ನಡೆಯುತ್ತಿದೆ, ಸಂತ ಸಮಾಜದ ನಿರ್ಮಾಣ ಮಾಡುತ್ತಿರುವುದು ನಮಗಾಗಿ ಅಲ್ಲ, ಮುಂದಿನ ದಿನಗಳಲ್ಲಿ ಎಲ್ಲ ಸಂತರಿಗೂ ಇಂತಹ ಪರಿಸ್ಥಿತಿ ಬರುತ್ತದೆ, ಅಂತಹ ಸಂದರ್ಭಗಳಲ್ಲಿ ನಾವು ಒಟ್ಟಾಗಿ ಹೋರಾಡಬೇಕು. ಇಲ್ಲದಿದ್ದರೆ ಹಿಂದೂ ಧರ್ಮ ಸಂಸ್ಕೃತಿಯನ್ನೇ ನಾಶಮಾಡಬಿಡಬಹದು. ಹಾಗಾಗಿ ಸಂತ ಸಂಘಟನೆ ಅತ್ಯಗತ್ಯ' ಎಂದು.

ಇಂದು ಎಲ್ಲೆಡೆ ಸಂತರ ಮೇಲೆ ಆಕ್ರಮಣಗಳು ನಡೆಯುತ್ತಿವೆ. ಸರ್ಕಾರದ ಕಪಿಮುಷ್ಠಿಯಲ್ಲಿದ್ದ ಕೂಡ್ಲಿ ಶೃಂಗೇರಿ ಮಠ ಇಷ್ಟು ದಿನ ಪಡಬಾರದ ಪಾಡು ಅನುಭವಿಸಿತ್ತು. ಇದೀಗ ಅದು ಸ್ವತಂತ್ರವಾಗಿದೆ.
ಸೋಸಲೆ ಮಠದ ವಿಚಾರವನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಮಠಗಳನ್ನು ಕಬಳಿಸುವ ಹುನ್ನಾರ ಚಾಲ್ತಿಯಲ್ಲಿದೆ. ಹೀಗಿರುವಾಗ ಧರ್ಮಗುರುಗಳು ಹಿಂದುತ್ವದ ರಕ್ಷಣೆಗೆ ಇಳಿಯಬೇಕು ಮತ್ತು ನಾವೆಲ್ಲ ಅವರ ಹಿಂದೆ ನಿಲ್ಲಬೇಕು. ಇಂತಹ ಹೋರಾಟಗಳಿಗೆ ಸಂತರು ಸಂಘಟಿತರಾಗುವುದು ಅತಿ ಮುಖ್ಯ.

ಈಗ ನೋಡಿ ಪರಮಪೂಜ್ಯ ಶೃಂಗೇರಿ ಶ್ರೀಗಳಿಗೆ ಕಾರ್ಯಕ್ರಮದಲ್ಲಿ ಸರಿಯಾದ ಗೌರವ ಕೊಡದೆ ಅವಮಾನಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಕೇವಲ ಪ್ರಾರಂಭ ಅಷ್ಟೇ, ಇಂತಹ ಸಂದರ್ಭಗಳು ಯಾರನ್ನೂ ಬಿಡುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.

ನಾವು ಇಂತಹ ವಿಷಯಗಳನ್ನು ಒಟ್ಟಾಗಿ ಖಂಡಿಸುವ ಮೂಲಕ ಮುಂದೊಂದು ದಿನ ಬರುವ ದೊಡ್ಡ ಆಪತ್ತನ್ನು ತಡೆಯಬೇಕು. ಇಂಥವುಗಳನ್ನು ಯಾರೂ ಸಹ ತಮ್ಮ ರಾಜಕೀಯ ಲಾಭಗಳಿಗೆ ಬಳಸಿಕೊಳ್ಳಬಾರದು. ಇಂತಹ ಕುತಂತ್ರಗಳ ವಿರುದ್ಧ ಎಲ್ಲರೂ ಹೋರಾಡಬೇಕು. ಧರ್ಮಯುದ್ಧದಲ್ಲಿ ಕೈಜೋಡಿಸುವುದು ಎಲ್ಲರ ಕರ್ತವ್ಯವಾಗಿದೆ. ಸಂತರ ಸತ್ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲೋಣ
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್












Click it and Unblock the Notifications