ಬೆಂಗಳೂರಲ್ಲಿ ಮಳೆ, ಕೆಂಗೇರಿಯಲ್ಲಿ ರಸ್ತೆ ಜಲಾವೃತ
Recommended Video

ಬೆಂಗಳೂರು, ಸೆಪ್ಟೆಂಬರ್ 10 : ಬೆಂಗಳೂರು ನಗರದಲ್ಲಿ ಮಳೆ ಮುಂದುವರೆದಿದ್ದು, ರಸ್ತೆಗಳು ಜಲಾವೃತವಾಗಿವೆ. ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೈಸೂರು ರಸ್ತೆಯಲ್ಲಿ ಆರ್.ಆರ್.ನಗರದಿಂದ ಕೆಂಗೇರಿ ತನಕ ಸಾಗುವ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ. ಎರಡು ಕೆಎಸ್ಆರ್ಟಿಸಿ ಬಸ್ ಮತ್ತು 4 ಕಾರುಗಳು ನೀರಿನಲ್ಲಿ ಮುಳುಗಡೆಯಾಗಿದೆ.

ವೃಷಭಾವತಿ ತುಂಬಿ ಹರಿಯುತ್ತಿದೆ. ರಸ್ತೆ ಮೇಲೆ ಸುಮಾರು 6 ಅಡಿ ನೀರು ನಿಂತಿದೆ. ಒಂದು ಕಡೆ ಮೆಟ್ರೋ ಕಾಮಗಾರಿ, ಮತ್ತೊಂದು ಕಡೆ ನೀರು ತುಂಬಿರುವುದರಿಂದ ವಾಹನ ಸವಾರರು ಪರಡಾಡುತ್ತಿದ್ದಾರೆ.
* ಆರ್.ವಿ.ಕಾಲೇಜು ಬಳಿ ನೀರಿನಲ್ಲಿ ಸಿಲುಕಿದ್ದ 36 ಜನರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ರಸ್ತೆಯಲ್ಲಿ ತುಂಬಿಕೊಂಡಿರುವ ನೀರು ನಿಧಾನವಾಗಿ ಇಳಿಯುತ್ತಿದೆ.
* ಮಾಗಡಿ ರಸ್ತೆಯಲ್ಲಿ ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಮನೆಯೊಂದು ಕುಸಿದುಬಿದ್ದಿದೆ
* ಕಗ್ಗಲೀಪುರದಲ್ಲಿ ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿದೆ. ಎನ್ಡಿಆರ್ಎಫ್ ಸಿಬ್ಬಂದಿ ರೋಗಿಗಳನ್ನು ಸ್ಥಳಾಂತರ ಮಾಡಿದರು
* ನಾಯಂಡಹಳ್ಳಿ, ವಸಂತನಗರ, ಮಾಗಡಿ ರಸ್ತೆಯ ಕೆಲವು ಕಡೆ ರಸ್ತೆಗಳು ಜಲಾವೃತವಾಗಿದೆ, ಮನೆಗಳಿಗೆ ನೀರು ನುಗ್ಗಿದೆ
* ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇನ್ಫೋಸಿಸ್ ಕ್ಯಾಂಪಸ್ ಗೋಡೆ ಕುಸಿದುಬಿದ್ದು, ನೀರು ಒಳಕ್ಕೆ ನುಗ್ಗಿದೆ












Click it and Unblock the Notifications