ಕರೆ ಮಾಡಿ ಟ್ರಾಫಿಕ್ ಪೊಲೀಸರಿಗೆ ಮತ ನೀಡಿ
ಬೆಂಗಳೂರು: ಸೆ. 18: ಟ್ರಾಫಿಕ್ ಪೊಲೀಸರ ಕಾರ್ಯ ವೈಖರಿ ಬಗ್ಗೆ ನಿಮ್ಮ ದೂರನ್ನು ಅಥವಾ ಮೆಚ್ಚುಗೆಯನ್ನು ಇನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು. ಟ್ರಾಫಿಕ್ ಪೊಲೀಸರ ಮೇಲೆ ಜನರು ಇಟ್ಟಿರುವ ಭಾವನೆಗಳೇನು? ಇಲಾಖೆ ಮಟ್ಟದಲ್ಲಿ ಯಾವ ಸುಧಾರಣೆ ಮಾಡಿಕೊಳ್ಳಬಹುದು ಎಂಬ ಅಂಶಗಳನ್ನು ಲೆಕ್ಕಹಾಕಲು ವಿನೂತನ ವ್ಯವಸ್ಥೆ ಜಾರಿಗೆ ಬಂದಿದೆ.
ಟ್ರಾಫಿಕ್ ಪೊಲೀಸರ ಕೆಲಸ ತೃಪ್ತಿದಾಯಕವಾಗಿದೆ ಅಥವಾ ಇಲ್ಲ ಎಂದು ನೀವೇ ವೋಟ್ ಮಾಡಬಹುದು. ನಿಮ್ಮ ಪ್ರತಿಕ್ರಿಯೆ ಆಧರಿಸಿ ಉತ್ತಮ ಪೊಲೀಸರಿಗೆ ಇಲಾಖೆಯಿಂದ ಸನ್ಮಾನವೂ ದೊರೆಯಲಿದೆ.(ಶನಿವಾರ ರಾತ್ರಿ ಕುಡಿದು ಗಾಡಿ ಓಡಿಸಿದವರ ಲೆಕ್ಕ)

ಅಕ್ಟೋಬರ್ 1 ರಿಂದ ಬೆಂಗಳೂರಿನ 5 ಪ್ರಮುಖ ವೃತ್ತಗಳಲ್ಲಿ ಯೋಜನೆ ಜಾರಿಗೆ ಬರಲಿದೆ. ಪೊಲೀಸ್ ಇಲಾಖೆ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರ ನೆರವಿನಲ್ಲಿ ಎನ್ಜಿಒವೊಂದು ಈ ಯೋಜನೆಯನ್ನು ರೂಪಿಸಿದೆ.
ಹೇಗೆ ಕಾರ್ಯನಿರ್ವಹಿಸುತ್ತೆ?
ನಿರ್ದಿಷ್ಟ ಪಡಿಸಿದ ಜಂಕ್ಷನ್ ನಲ್ಲಿ ಡಿಸ್ಪ್ಲೇ ಬೋರ್ಡ್ ಅಳವಡಿಸಿ ಮೊಬೈಲ್ ನಂಬರ್ ವೊಂದನ್ನು ಬಿತ್ತರಿಸಲಾಗುವುದು. ಜನರಿಗೆ ಈ ನಂಬರ್ಗೆ ಕರೆ ಮಾಡುವಂತೆ ತಿಳಿಸಲಾಗುವುದು. ನಾಗರಿಕರು ಈ ನಂಬರ್ಗೆ ಕರೆ ಮಾಡಿದರೆ ಅದು ತನ್ನಿಂದ ತಾನೇ ಕೊನೆಗೊಳ್ಳುವುದು. ಆದರೆ ಕರೆ ಮಾಡಿದವರಿಗೆ ಒಂದು(ಅಂತರ್ಜಾಲ ತಾಣದ) ಲಿಂಕ್ ಇರುವ ಎಸ್ಎಂಎಸ್ ತಲುಪುತ್ತದೆ. ಈ ಲಿಂಕ್ ಕ್ಲಿಕ್ ಮಾಡಿ www.ourtpc.com ಕ್ಕೆ ಭೇಟಿ ನೀಡಿ ನಿಮ್ಮ ಅಭಿಪ್ರಾಯ ದಾಖಲಿಸಬಹುದು ಎಂದು ಕಾರ್ಯಕ್ರಮದ ನೇತೃತ್ವ ವಹಿಸಿರುವ ಟಿಪಿಸಿ ಸಂಸ್ಥೆಯ ಸಿಇಒ ಸಂತೋಷ್ ಕುಮಾರ್ ತಿಳಿಸಿದರು.('ಸಾರ್ವಜನಿಕ ಕಣ್ಣು' ಅಂದ್ರೇನು ಗೊತ್ತಾ ನಿಮಗೆ?)
ಎಲ್ಲೆಲ್ಲಿ ಡಿಸ್ಪ್ಲೇ ಬೋರ್ಡ್ ಅಳವಡಿಕೆ?
ನಗರದ ಅತ್ಯಧಿಕ ಟ್ರಾಫಿಕ್ ಸಮಸ್ಯೆ ಅನುಭವಿಸುವ ಸಿಎಂಎಚ್ ರಸ್ತೆ ಬಿಎಂಶ್ರೀ ವೃತ್ತ, ಜಯನಗರ ಸೌತ್ ಎಂಡ್ ವೃತ್ತ, ಕೋರಮಂಗಲ ಸೋನಿ ಜಂಕ್ಷನ್, ಸಿಲ್ಕ್ ಬೋರ್ಡ್ ಮತ್ತು ಮಾನ್ಯತಾ ಟೆಕ್ ಪಾರ್ಕ್ ಗಳಲ್ಲಿ ಪೋನ್ ನಂಬರ್ ಬಿತ್ತರಿಸಲಾಗುವುದು ಎಂದು ಟ್ರಾಫಿಕ್ ವಿಭಾಗದ ಎಸಿಪಿ ಬಿ.ದಯಾನಂದ್ ತಿಳಿಸಿದರು. ನಂತರ ಪ್ರತಿಕ್ರಿಯೆ ಆಧರಿಸಿ ಇತರ ಕಡೆ ವಿಸ್ತರಿಸುವ ಯೋಜನೆಯಿದೆ ಎಂದು ತಿಳಿಸಿದರು.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications