ಏರೋ ಇಂಡಿಯಾ 2019: ಎಚ್ಎಎಲ್ ಈಗಲೂ ಮುಂಚೂಣಿಯಲ್ಲಿ
ಬೆಂಗಳೂರು, ಫೆ 15: ಏರೋ ಇಂಡಿಯಾ 2019 ರಲ್ಲಿ ವೈಮಾನಿ ಪ್ರದರ್ಶನದಲ್ಲಿ ಈ ಬಾರಿಗೂ ಎಚ್ಎಲ್ ಮುಂಚೂಣಿಯಲ್ಲಿದೆ.
ಎಲ್ಯುಎಚ್ ಪಿಟಿ-1, ಎಲ್ಸಿಎಚ್ ಟಿಡಿ-2, ಎಎಲ್ಎಚ್ (ಸುಧಾರಿತ ಲಘು ಹೆಲಿಕಾಪ್ಟರ್) ರುದ್ರ ಮತ್ತು ವೈದ್ಯಕೀಯ ತೀವ್ರ ನಿಗಾ ವ್ಯವಸ್ಥೆ ಇರುವ ಆ್ಯಂಬುಲೆನ್ಸ್ ಹೆಲಿಕ್ಯಾಪ್ಟರ್ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ನೌಕಾಪಡೆ ಬಳಕೆಗಾಗಿ ಬಾಲ ಮತ್ತು ಮುಖ್ಯರೆಕ್ಕೆಗಳನ್ನು ಮಡಚಬಲ್ಲ ಹೆಲಿಕಾಪ್ಟರ್ (ಅಭಿವೃದ್ಧಿ ಹಂತದಲ್ಲಿದೆ) ಪ್ರಮುಖ ಆಕರ್ಷಣೆಯಾಗಲಿದೆ.
ಜಾಗ್ವಾರ್ ಸಿಮ್ಯುಲೇಟರ್: ವಿಮಾನ ಹಾರಾಟದ ನೈಜ ಅನುಭವ ನೀಡುವ ಹೋಲೋಗ್ರಾಫಿಕ್ ರೂಮ್ ಮತ್ತು ಜಾಗ್ವಾರ್ ವಿಮಾನದ ಸಿಮ್ಯುಲೇಟರ್ ಇರಲಿದೆ.

ಮಿಲಿಟರಿ, ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಯೂಆರ್ಎಸ್ಎಎಂ, ಬಾಂಬ್ ಪೆಲ್ಲೆಟ್ಗಳು, ನಿಲ್ದಾಣದಲ್ಲಿ ವಿಮಾನಗಳನ್ನು ಸಾಗಿಸುವ ಟ್ರ್ಯಾಕ್ಟರ್, ಕ್ಷಿಪಣಿ ಉಡಾವಣೆಗೆ ಬಳಕೆಯಾಗುವ ವಾಹನಗಳು ಸೇರಿದಂತೆ ಇನ್ನಿತರ ಪ್ರಮುಖ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ದೇಶಿಯವಾಗಿ ನಿರ್ಮಾಣವಾಗಿರುವ ಎಲ್ಸಿಎ ತೇಜಸ್, ಲಘು ತರಬೇತಿ ವಿಮಾನ ಎಚ್ಟಿಟಿ-40, ದೇಶಿಯವಾಗಿ ಮೇಲ್ದರ್ಜೆಗೆ ಏರಿಸಲ್ಪಟ್ಟಿರುವ ಮೊದಲ ಹಾಕ್ ಎಂಕೆ132 ವಿಮಾನ (ಹಾಕ್-ಐ), ನಾಗರೀಕ ವಿಮಾನ ಸರಣಿಯ ಡಾರ್ನಿಯರ್ 228, ಸುಧಾರಿತ ಲಘು ಹೆಲಿಕಾಪ್ಟರ್ ರುದ್ರ, ಲಘು ಬಳಕೆ ಹೆಲಿಕಾಪ್ಟರ್ (ಎಲ್ಯುಎಚ್), ಲಘು ಯುದ್ಧ ಹೆಲಿಕಾಪ್ಟರ್ (ಎಲ್ಸಿಎಚ್) ಏರೋ ಇಂಡಿಯಾದಲ್ಲಿ ಹಾರಾಟ ನಡೆಸಲಿವೆ. ಇದೇ ವೇಳೆ ಸೂರ್ಯ ಕಿರಣ್ ಮತ್ತು ಎಎಲ್ಎಚ್ ಧ್ರುವ ಏರೋಬ್ಯಾಟಿಕ್ ತಂಡಗಳು ಎಂದಿನಂತೆ ವಿಶೇಷ ಪ್ರದರ್ಶನ ನೀಡಲಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications