ವೇತನ ತಾರತಮ್ಯ ಖಂಡಿಸಿ ಎಚ್ ಎಎಲ್ ನೌಕರರಿಂದ ಉಪವಾಸ ಸತ್ಯಾಗ್ರಹ
ಬೆಂಗಳೂರು, ಜೂನ್ 28: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಉದ್ಯೋಗಿಗಳು ಜೂನ್ ಇಪ್ಪತ್ತೈದರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇತರ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಯಾವ ಪ್ರಮಾಣದಲ್ಲಿ ವೇತನ ನೀಡುತ್ತಿದ್ದಾರೋ ಅದೇ ಪ್ರಮಾಣದಲ್ಲಿ ಎಚ್ ಎಎಲ್ ಸಿಬ್ಬಂದಿಗೂ ದೊರೆಯಬೇಕು ಎಂಬುದು ಒತ್ತಾಯವಾಗಿದೆ.
ಐನೂರು ಸಿಬ್ಬಂದಿ ಧರಣಿ ನಡೆಸುತ್ತಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಏಳು ರಾಜ್ಯಗಳಲ್ಲಿ ಇರುವ, ಎಲ್ಲ ಒಂಬತ್ತು ಘಟಕಗಳ ಸ್ಕೇಲ್ ಐದರಿಂದ ಹನ್ನೊಂದರ ತನಕದ ಸಿಬ್ಬಂದಿ- ನೌಕರರ ಒಕ್ಕೂಟದ ಸದಸ್ಯರೂ ಆಗಿರುವ ಹದಿನೆಂಟು ಸಾವಿರ ಉದ್ಯೋಗಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
"ಎಲ್ಲ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಒಂದೇ ಪ್ರಮಾಣದ ವೇತನ ಹಾಗೂ ಸವಲತ್ತು ನೀಡಲಾಗುದೆ. ಆದರೆ ನಮಗೆ ಎಚ್ ಎಎಲ್ ಆ ಅನುಕೂಲವನ್ನು ನಿರಾಕರಿಸುತ್ತಿದೆ" ಎಂದು ಸಮಿತಿಯ ಪ್ರಧಾನ ಕಾಯದರ್ಶಿ ಸೂರ್ಯದೇವ್ ಚಂದ್ರಶೇಖರ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕಾರ್ಮಿಕರಿಗೂ ಚುಕ್ತಾ ಮಾಡುವುದು ನೈತಿಕ ಜವಾಬ್ದಾರಿ
ಅಧಿಕಾರಿಗಳಿಗೆ ನವೆಂಬರ್ 2017ರಲ್ಲೇ ಸವಲತ್ತು, ವೇತನಗಳನ್ನು ಚುಕ್ತಾ ಮಾಡಿದ್ದು, ಕಾರ್ಮಿಕರಿಗೂ ಅದೇ ರೀತಿಯಲ್ಲಿ ಚುಕ್ತಾ ಮಾಡುವುದು ಎಚ್ ಎಎಲ್ ನ ನೈತಿಕ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ. ಅಧಿಕಾರಿಗಳಿಗೆ ಮೂಲ ವೇತನದಲ್ಲಿ 15% ಹೆಚ್ಚಳವಾಗಿದೆ. ಇನ್ನು ಸವಲತ್ತುಗಳು 35% ಏರಿಕೆ ಆಗಿದೆ.
ಆದರೆ, ಕಾರ್ಮಿಕರಿಗೆ ಹತ್ತು ಪರ್ಸೆಂಟ್ ಮೂಲ ವೇತನ ಹೆಚ್ಚಳ ಹಾಗೂ 18% ಸವಲತ್ತು ಹೆಚ್ಚಳದ ಪ್ರಸ್ತಾವ ಮಾಡಲಾಗಿದೆ. ಮೂಲವೇತನ ಹಾಗೂ ಇತರ ಸವಲತ್ತು ಸೇರಿ ಅಧಿಕಾರಿಗಳಿಗೆ ಹತ್ತರಿಂದ ನಲವತ್ತು ಪರ್ಸೆಂಟ್ ಏರಿಕೆ ಮಾಡಲಾಗಿದೆ. ಆದರೆ ಚೌಕಾಶಿ ನೆಪದಲ್ಲಿ ನಮ್ಮ ಸವಲತ್ತುಗಳಿಗೆ ಐವತ್ತು ಪರ್ಸೆಂಟ್ ಕತ್ತರಿ ಹಾಕುತ್ತಿದ್ದಾರೆ. ಇದೆಂಥ ಒಪ್ಪಂದ ಎಂದು ಸೂರ್ಯದೇವ್ ಪ್ರಶ್ನೆ ಮಾಡಿದ್ದಾರೆ.
ಜುಲೈ ಎರಡನೇ ತಾರೀಕಿನ ತನಕ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಆನಂತರವೂ ಸಮಸ್ಯೆ ಬಗೆಹರಿಯದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸುತ್ತೇವೆ. ಜುಲೈ ಮೂರನೇ ತಾರೀಕಿನಂದು ಬೆಂಗಳೂರಿನಲ್ಲಿ ಇರುವ ಎಚ್ ಎಎಲ್ ಕಾರ್ಪೋರೇಟ್ ಕಚೇರಿಯಲ್ಲಿ ಘೇರಾವ್ ಮಾಡುತ್ತೇವೆ ಎಂದಿದ್ದಾರೆ.

ಪ್ರತಿಭಟನೆ ನ್ಯಾಯ ಸಮ್ಮತವಲ್ಲ: ಎಚ್ ಎಎಲ್
ಈ ಮಧ್ಯೆ ಎಚ್ ಎಎಲ್ ಪ್ರತಿಕ್ರಿಯೆ ನೀಡಿದ್ದು, ಪ್ರತಿಭಟನೆಯು 'ನ್ಯಾಯಸಮ್ಮತವಲ್ಲ' ಎಂದಿದೆ. ಈ ವರೆಗೆ ಒಂಬತ್ತು ಸುತ್ತಿನ ಮಾತುಕತೆ ನೌಕರರ ಒಕ್ಕೂಟದ ಜತೆ ಆಗಿದೆ. ಒಕ್ಕೂಟದ ಸಹಕಾರದಿಂದ ಮಾತ್ರ ಈ ಸಮಸ್ಯೆ ಬಗೆಹರಿಯಲು ಸಾಧ್ಯ. ಅವರ ನಿರೀಕ್ಷೆಗಳು ವಾಸ್ತವದಿಂದ ಕೂಡಿರಬೇಕು ಹಾಗೂ ಈಡೇರಿಸಲು ಸಾಧ್ಯವಿರುವ ನಿರೀಕ್ಷೆ ಆಗಿರಬೇಕು ಎಂದು ಹೇಳಿದೆ.
ಅಧಿಕಾರಿಗಳಿಗೆ ಸಮವಾಗಿ ಅಥವಾ ಅದಕ್ಕಿಂತ ಹೆಚ್ಚು ವೇತನ ಹಾಗೂ ಸವಲತ್ತು ನೀಡಬೇಕು ಎಂಬುದು ಸಮರ್ಥನೀಯವಲ್ಲ. ಅಧಿಕಾರಿಗಳಿಗೆ ಜನವರಿ 1, 2017ರಿಂದ ವೇತನ ಪರಿಷ್ಕರಣೆ ಜಾರಿಯಾಗಿದೆ. ಅದ ಕೂಡ ಹತ್ತು ವರ್ಷಗಳ ನಂತರ. ಆದರೆ ಕಾರ್ಮಿಕರಿಗೆ ಐದು ವರ್ಷಗಳಿಗೆ ಏರಿಕೆ ಮಾಡಲಾಗಿದೆ. ಜತೆಗೆ ಅಧಿಕಾರಿಗಳ ಮಟ್ಟದಲ್ಲಿ ಇರುವವರಿಗೆ ಇತರ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಎಚ್ ಎಎಲ್ ಗಿಂತ ಹೆಚ್ಚಿನ ವೇತನ ಇದೆ ಎಂದು ಸಂಸ್ಥೆ ಹೇಳಿದೆ.

ಎಚ್ ಎಎಲ್ ನೀಡಿದ ಮಾಹಿತಿ ಸಂಪೂರ್ಣ ಸುಳ್ಳು: ಸೂರ್ಯದೇವ್
ಆದರೆ, ಎಚ್ ಎಎಲ್ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಸಂಪೂರ್ಣ ಸುಳ್ಳು. ಅದರಲ್ಲಿ ನೀಡಿರುವ ಮಾಹಿತಿ ಸುಳ್ಳು ಹಾಗೂ ಜನರನ್ನು ದಾರಿ ತಪ್ಪಿಸುವಂಥದ್ದು. ನಮ್ಮ ಬೇಡಿಕೆಗಳು ಸಂಪೂರ್ಣವಾಗಿ ಸಮರ್ಥನೀಯ ಹಾಗೂ ನಾವು ಯಾವುದನ್ನು ಹೇಳುತ್ತಿದ್ದೇವೆ ಅದು ನೂರು ಪರ್ಸೆಂಟ್ ಸತ್ಯ ಎಂದು ಸೂರ್ಯದೇವ್ ಹೇಳಿದ್ದಾರೆ.
ಜುಲೈ ಮೂರನೇ ತಾರೀಕಿನಂದು ಟೋಕನ್ ಧರಣಿಗೆ ನೋಟಿಸ್ ನೀಡಲು ನಿರ್ಧರಿಸಿದೆ. ಸದ್ಯಕ್ಕೆ ತೀರ್ಮಾನ ಕೈಗೊಂಡಿರುವಂತೆ ಜುಲೈ ಹದಿನೆಂಟನೇ ತಾರೀಕು ಟೋಕನ್ ಧರಣಿ ನಡೆಸಲು ಎಚ್ ಎಎಲ್ ನೌಕರರ ಸಂಘ ನಿರ್ಧಾರ ಮಾಡಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications