ರಾಹುಲ್ ನೇತೃತ್ವದ ರಫೇಲ್ ಡೀಲ್ ಚರ್ಚೆಗೆ ಎಚ್ಎಎಲ್ ನಕಾರ
ಬೆಂಗಳೂರು, ಅಕ್ಟೋಬರ್ 11: ರಫೇಲ್ ಡೀಲ್ ಹಗರಣಕ್ಕೆ ಸಂಬಂಧಿಸಿದಂತೆ ಎಚ್ಎಎಲ್ ನೌಕರರ ಬಳಿ ನೇರ ಸಂವಾದ ನಡೆಸಲು ಮುಂದಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಹಿನ್ನಡೆಯುಂಟಾಗಿದೆ. ಸಂವಾದ ಮಾಡಲು ಎಚ್ಎಎಲ್ ಅನುಮತಿ ನಿರಾಕರಿಸಿದೆ.
ಅಕ್ಟೋಬರ್
13ರಂದು
ಬೆಂಗಳೂರಿನಲ್ಲಿರುವ
ಹಿಂದೂಸ್ತಾನ್
ಏರೋನಾಟಿಕ್ಸ್
ಲಿಮಿಟೆಡ್
ನ
ಆವರಣದಲ್ಲಿ
ಅಲ್ಲಿನ
ನೌಕರರ
ಜತೆ
ರಫೇಲ್
ಒಪ್ಪಂದ
ಕುರಿತಂತೆ
ರಾಹುಲ್
ಚರ್ಚೆ
ನಡೆಸಲು
ನಿರ್ಧರಿಸಲಾಗಿತ್ತು.
ಈ
ಮಧ್ಯೆ
ಬೆಂಗಳೂರಿನ
ಎಚ್ಎಎಲ್
ಆವರಣದಲ್ಲೇ
ರಫೇಲ್
ಡೀಲ್
ಒಪ್ಪಂದ
ಕುರಿತಂತೆ
ಸಂವಾದ
ಏರ್ಪಡಿಸುವ
ಮೂಲಕ
ಕಾಂಗ್ರೆಸ್
ಕೇಂದ್ರ
ಸರ್ಕಾರಕ್ಕೆ
ಮುಜುಗರವನ್ನುಂಟು
ಮಾಡಲು
ಮುಂದಾಗಿತ್ತು.
ರಾಹುಲ್
ಬೆಂಗಳೂರು
ಭೇಟಿ
ವೇಳೆ
ಹಳೆಯ
ಕಾಂಗ್ರೆಸ್
ನಾಯಕರೊಂದಿಗೆ
ಚರ್ಚೆ
ನಡೆಸಲಿದ್ದು,
ಮುಂಬರುವ
ವಿಧಾನಸಭೆ,
ಲೋಕಸಭೆ
ಉಪ
ಚುನಾವಣೆ
ಕುರಿತಂತೆಯೂ
ಮಾತುಕತೆ
ನಡೆಸಲಿದ್ದಾರೆ
ಎಂದು
ಕಾಂಗ್ರೆಸ್
ಮೂಲಗಳು
ತಿಳಿಸಿವೆ.
ಎಚ್ಎಎಲ್ ಅಂಗಳದಲ್ಲಿ ರಫೇಲ್ ಚರ್ಚೆ: ಅ.13ರಂದು ರಾಹುಲ್ ಭೇಟಿ
ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿರುವ ರಫೇಲ್ ಡೀಲ್ ಒಪ್ಪಂದಕ್ಕೆ ಮೂಲ ಕಾರಣವಾದ ಎಚ್ಎಎಲ್ ರದ್ದತಿ ಕುರಿತ ಸಂವಾದವನ್ನು ಎಚ್ಎಎಲ್ ಅಂಗಳದಲ್ಲೇ ನಡೆಸಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ಎಚ್ಎಎಲ್ ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಅನುಮತಿ ನಿರಾಕರಿಸಲಾಗಿದೆ.
ಫ್ರೆಂಚ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದು ಸತ್ಯ ಎಂದು ಒಪ್ಪಿಕೊಂಡ ರಿಲಯನ್ಸ್
ಅನುಮತಿ ನಿರಾಕರಣೆ ಹಿನ್ನೆಲೆ ಸೂಕ್ತ ಸ್ಥಳಕ್ಕೆ ರಾಜ್ಯ ಕಾಂಗ್ರೆಸ್ ಹುಡುಕಾಟ ನಡೆಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇರುವ ಮಿನ್ಸ್ ಸ್ಕ್ವೇರ್ ನಲ್ಲಿ ಸಂವಾದ ನಡೆಸಲು ಚಿಂತನೆ ನಡೆಸಿದೆ. ಈ ಕುರಿತು ಪೊಲೀಸರ ಬಳಿ ಅನುಮತಿ ಕೋರಿದ್ದಾರೆ.