Bengaluru Sub Urban Rail: ಕೆ-ರೈಡ್ಗೆ ಎಂಡಿ ನೇಮಕವಾಗಿಲ್ಲ!, ₹15,767 ಕೋಟಿ ಯೋಜನೆ ನಿರ್ವಹಣೆ ಬಗೆ ಇದೇನಾ?
ಬೆಂಗಳೂರು, ಮೇ 27: ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ರೈಲ್ವೆ ಇಲಾಖೆ ಸಹಕಾರದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಈ ಯೋಜನೆ ಕಾಮಗಾರಿಯನ್ನು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (K-RIDE) ನೀಡಲಾಗಿದೆ. ಆದರೆ ಈ ಕಂಪನಿಗೆ ವರ್ಷಗಳಿಂದಲೂ ವ್ಯವಸ್ಥಾಪಕ ನಿರ್ದೇಶಕರೇ ಇಲ್ಲ. ಮೊದಲೇ ರೈಲ್ವೆ ಯೋಜನೆ ವಿಳಂಬವಾಗುತ್ತಿದೆ. ಈ ಮಧ್ಯೆ ಎಂಡಿ ಇಲ್ಲದೇ ಕಂಪನಿ ಹೇಗೆ ನಿರ್ವಹಣೆ ಮಾಡುತ್ತದೆ, ಗಡುವಿನೊಳಗೆ ಹೇಗೆ ಕೆಲಸ ಮುಗಿಸುತ್ತದೆ ಎಂಬ ಅನುಮಾನ ಮೂಡಿಸಿದೆ.
ಹೌದು, ಇದೇ ವಿಚಾರ ಕುರಿತಂತೆ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಪ್ರಶ್ನೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಹಾಗೂ ಬೆಂಗಳೂರು ಉಪನಗರ ರೈಲ್ವೆ ಯೋಜನೆ ನಿಧಾನಗತಿ ಕೆಲಸ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಕೆ-ರೈಡ್ಗೆ 2 ವರ್ಷಗಳಿಂದ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಿಲ್ಲ. ಬದಲಾಗಿ, ವರ್ಷಗಳಿಂದ ಹುದ್ದೆಗಾಗಿ ಕಾಯುತ್ತಿರುವ 2017 ರ ಬ್ಯಾಚ್ ಅಧಿಕಾರಿಯನ್ನು ವಿಶೇಷ ಉಪ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಬೆಂಗಳೂರು ಉಪನಗರ ರೈಲ್ವೆ ಯೋಜನೆಯು (K-RIDE) ಒಂದು ನಿರ್ಣಾಯಕ ಯೋಜನೆಯಾಗಿದೆ. ಇಂತಹ ಮಹತ್ವದ ಯೋಜನೆಯನ್ನು ಅರೆಕಾಲಿಕ, ಅನನುಭವಿ ನಾಯಕತ್ವದಲ್ಲಿ ಹೇಗೆ ನಡೆಯಬಹುದು? ಎಂದು ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಕೆರೈಡ್ ಹುದ್ದೆ ಕುರಿತು ಒಂದಷ್ಟು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಈ ಹುದ್ದೆಯನ್ನು ವಿಶೇಷವಾಗಿ ರಚಿಸಲಾಗಿದೆಯೇ?
ರಾಜ್ಯ ಸರ್ಕಾರವು ನನಗೆ ಉತ್ತರಿಸಬೇಕು. ವ್ಯವಸ್ಥಾಪಕ ನಿರ್ದೇಶಕರ (MD) ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (K-RIDE) ನಲ್ಲಿ ಅಸ್ತಿತ್ವದಲ್ಲಿರುವ ಹುದ್ದೆಯೇ ಅಥವಾ ಹುದ್ದೆಗಾಗಿ ಕಾಯುತ್ತಿರುವ ಕಿರಿಯ ಅಧಿಕಾರಿಯನ್ನು ನೇಮಿಸಲು ವಿಶೇಷವಾಗಿ ರಚಿಸಲಾಗಿದೆಯೇ? ಎಂದು ಅವರು ಸರ್ಕಾರ ನಡೆಯನ್ನು ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ 148 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಾಲ್ಕು ಕಾರಿಡಾರ್ಗಳಗಾಗಿ (ಕನಕ, ಪಾರಿಜಾತ, ಸಂಪಿಗೆ ಮತ್ತು ಮಲ್ಲಿಗೆ) ಬೆಂಗಳೂರು ಉಪನಗರ ಯೋಜನೆ ಜಾರಿಗೆ ತೆರಲಾಗುತ್ತಿದೆ. ಇದಕ್ಕಾಗಿ ₹15,767 ಕೋಟಿ ಯೋಜನೆ ಇದಾಗಿದ್ದು, ಇಂಥದ್ದೊಂದು ಬೃಹತ್ ಯೋಜನೆ ನಿರ್ವಹಿಸುವ ಗಂಭೀರತೆ ಇದೇನಾ? ಎಂದು ಕಿಡಿ ಕಾರಿದ್ದಾರೆ.
ಈಗಾಗಲೇ ಯೋಜನೆ ವಿಳಂಬವಾಗಿದೆ. ಈ ಮಧ್ಯೆ ಮತ್ತಷ್ಟು ವಿಳಂಬ ಮಾಡದೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಗೆ (K-RIDE) ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಬೇಕು. ಈ ಮೂಲಕ ಯೋಜನೆ ತ್ವರಿತ ಪೂರ್ಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
K-RIDE, executing the Bengaluru Suburban Rail project, has had no full-time MD for 2 years. Instead, a 2017-batch officer who has been awaiting posting for years has been made Special Deputy Commissioner. How can such a critical project run on part-time, inexperienced leadership?
— P C Mohan (@PCMohanMP) May 26, 2025
ಉಪನಗರ ರೈಲ್ವೆ ಯೋಜನೆ ಕುರಿತು..
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 50:50 ಅನುಪಾತದಲ್ಲಿ ಯೋಜನೆಗೆ ಹಣ ಒದಗಿಸುತ್ತಿವೆ. ಕೆ-ರೈಡ್ ಜಾಗ ವಿಚಾರವಾಗಿ ಇದ್ದ ಗೊಂದಲ ನಿವಾರಣೆ ಆಗಿ ತಿಂಗಳುಗಳೇ ಕಳೆದಿವೆ. ಪ್ರಧಾನಿ ಮೋದಿಯವರು 2022ರಲ್ಲಿ ಮುಂದಿನ 40 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಘೋಷಿಸಿದ್ದರು. ಈಗಾಗಲೇ ವಿಳಂಬವಾದ ಯೋಜನೆ 2025ರಲ್ಲಿ ಪೂರ್ಣಗೊಳ್ಳಬೇಕಿತ್ತು. ಇದೀಗ ಅದರ ಗಡುವು 2027ಕ್ಕೆ ಮುಂದೂಡಿಕೆ ಆಗಿದೆ. ಹೀಗೆ ವಿಳಂಬವಾಗುತ್ತಾ ಹೋದರೆ, ಯೋಜನೆ ಜನರಿಗೆ ತಲುಪುವುದು ಯಾವಾಗ ಎಂಬ ಪ್ರಶ್ನೆ ಉದ್ಭವವಾಗಿದೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications