ಬೆಂಗಳೂರಿನಲ್ಲಿ 18 ಅಡಿ ಗಾಂಧಿ ಪ್ರತಿಮೆ ಅನಾವರಣ
ಬೆಂಗಳೂರು, ಫೆ.3: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ದೈತ್ಯ ಬ್ರಿಗೇಡ್ ಗ್ರೂಪ್ ವರ್ಷಗಳಿಂದ ಸಮುದಾಯ ನಿರ್ಮಾಣದತ್ತ ಅರ್ಥಪೂರ್ಣ ಕೊಡುಗೆಗಳನ್ನು ನೀಡುತ್ತಿದೆ. ಮತ್ತು ಹೊಸ ಕೊಡುಗೆಯಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ಬ್ರಿಗೇಡ್ ಗೇಟ್ ವೇ ಆವರಣದಲ್ಲಿ ಸ್ಥಾಪಿಸಿದೆ.
ಮಹಾತ್ಮ ಗಾಂಧಿ ಮೊಮ್ಮಗ ಹಾಗೂ 2004ರಿಂದ 2009ರ ತನಕ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಗೋಪಾಲಕೃಷ್ಣ ಗಾಂಧಿ ಅವರು ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಪದ್ಮ ವಿಭೂಷಣ ಡಾ.ಕೆ. ಕಸ್ತೂರಿರಂಗನ್ ಹಾಗೂ ಎಂ.ಆರ್.ಜೈಶಂಕರ್, ಬ್ರಿಗೇಡ್ ಗ್ರೂಪ್ ಸಿಎಂಡಿ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಂತಹ ಒಂದು ಪ್ರತಿಮೆಯ ಸ್ಥಾಪನೆಗೆ ಬ್ರಿಗೇಡ್ ಗೇಟ್ ವೇ ಪ್ರತಿ ವರ್ಷ 20 ದಶಲಕ್ಷ ಮಂದಿ ಪ್ರವಾಸಿಗರನ್ನು ಸೆಳೆಯುವಂತಹ ನಗರದ ಕೇಂದ್ರ ಸ್ಥಳವನ್ನು ಆಯ್ಕೆ ಮಾಡಿಕೊಂಡಿದೆ. ವರ್ಲ್ಡ್ ಟ್ರೇಡ್ ಸೆಂಟರ್ ಬೆಂಗಳೂರು, ಶೆರಟಾನ್ ಬೆಂಗಳೂರು ಹೋಟೆಲ್ ಹಾಗೂ ಒರಾಯನ್ ಮಾಲ್ ಬ್ರಿಗೇಡ್ ಗೇಟ್ ವೇಯ ಇದೇ ಆವರಣದಲ್ಲಿದ್ದು ದೇಶ ಹಾಗೂ ವಿದೇಶಾದ್ಯಂತದ ಸಂದರ್ಶಕರನ್ನು ಕಾಣುತ್ತದೆ.
18 ಅಡಿ ಎತ್ತರದ ಈ ಪ್ರತಿಮೆಯು ಈ ಎಲ್ಲಾ ವಯೋಮಾನದ ಸಂದರ್ಶಕರಿಗೆ ಸ್ವತಂತ್ರ ಭಾರತಕ್ಕಾಗಿ ಮಹಾತ್ಮ ಗಾಂಧಿ ಅವರ ನಾಯಕತ್ವ ಹಾಗೂ ತ್ಯಾಗವನ್ನು ನೆನಪಿಸುತ್ತದೆ, ಅವರ ಅಹಿಂಸೆ ತತ್ವ ಇಂದಿಗೂ ಪ್ರಸ್ತುತ ಎಂಬುದನ್ನು ಸಾರುತ್ತದೆ.
ಪ್ರತಿಮೆ ಅನಾವರಣ ಕುರಿತು ಮಾತನಾಡಿದ ಎಂ.ಆರ್. ಜೈಶಂಕರ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಬ್ರಿಗೇಡ್ ಗ್ರೂಪ್, "ಬ್ರಿಗೇಡ್ ಗೇಟ್ ವೇ ಆವರಣದಲ್ಲಿ ಮಹಾತ್ಮ ಗಾಂಧಿ ಅವರ ಸ್ಥಾಪನೆಯು ಕೋಟ್ಯಂತರ ಭಾರತೀಯರನ್ನು ಒಂದುಗೂಡಿಸಿದ ಮತ್ತು ಅಸಾಧ್ಯವನ್ನು ಸಾಧಿಸುವಲ್ಲಿ ಮುನ್ನಡೆಸಿದ ಮಹಾತ್ಮ ಗಾಂಧೀಜಿ ಅವರಿಗೆ ನಾವು ಸಲ್ಲಿಸುತ್ತಿರುವ ವಿನಮ್ರ ಗೌರವವಾಗಿದೆ..."

"ಹಿಂಸೆ ಹಾಗೂ ದ್ವೇಷವು ವಿಶ್ವವನ್ನು ನಡುಗಿಸುತ್ತಿರುವ ಈ ಸಂದರ್ಭವು, ಮಹಾತ್ಮ ಗಾಂಧಿ ಅವರು ಬೋಧಿಸಿದ ಹಾಗೂ ಆಚರಿಸಿದ ಅಹಿಂಸೆ ಮತ್ತು ಸ್ವೀಕಾರ್ಹತೆ ತತ್ವಗಳನ್ನು ನಾವು ಅನುಸರಿಸಲು ಸೂಕ್ತ ಸಮಯ ಎಂಬ ಭಾವನೆ ನಮಗಿದೆ'' ಎಂದು ಹೇಳಿದರು.
ಬ್ರಿಗೇಡ್ ಗ್ರೂಪ್ ಗಾಗಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ವಿಶೇಷವಾಗಿ ಕೆತ್ತಲಾಗಿದೆ. ಈ ಪ್ರತಿಮೆಯನ್ನು ಪ್ರಸಿದ್ಧ ಶಿಲ್ಪಿ ಕಲಬುರ್ಗಿಯ ಮಾನಯ್ಯ ಎನ್. ಬಡಿಗೇರ್ ಅವರು 6 ಮಂದಿ ಯುವ ಶಿಲ್ಪಿಗಳು ಹಾಗೂ 25 ಜನರ ಕಲಾವಿದರ ತಂಡದ ಸಹಾಯದೊಂದಿಗೆ ನಿರ್ಮಿಸಿದ್ದಾರೆ.
ಪ್ರತಿಮೆಯ ನಿರ್ಮಾಣಕ್ಕೆ ಒಂದು ವರ್ಷ ತಗುಲಿದೆ. ಹಿತ್ತಾಳೆ ಮತ್ತು ತಾಮ್ರದ ಮಿಶ್ರಲೋಹದಿಂದ ತಯಾರಿಸಲಾಗಿದ್ದು ಇದರ ತೂಕ 1000 ಕೆ.ಜಿಯಷ್ಟಿದೆ. 4. 6 ಅಡಿ ಎತ್ತರದ ಗ್ರಾನೈಟ್ ಪೀಠದ ಮೇಲೆ 11 ಅಡಿಯ ಪ್ರತಿಮೆ ಸ್ಥಾಪಿಸಲಾಗಿದ್ದು, ಒಟ್ಟಾರೆ 17 ಅಡಿ ಎತ್ತರವಿದೆ. (ಒನ್ಇಂಡಿಯಾ ಕನ್ನಡ)
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು











Click it and Unblock the Notifications