ಬೆಂಗಳೂರಿನ ಅತಿ ಮೌಲ್ಯಯುತ ಭೂಮಿ ಬಳಕೆಯ ಬಗ್ಗೆ ಜಿಬಿಎ ಕಮಿಷನರ್ ಮಹತ್ವದ ಅಪ್ಡೇಟ್ಸ್
ಕರ್ನಾಟಕದ ಇನ್ನುಳಿದ ಪ್ರಮುಖ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಮೌಲ್ಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲ್ಲೇ ಇದೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಂಗಳೂರಿನ ಭೂಮಿ, ಪ್ರಾಪರ್ಟಿ ಅದರಲ್ಲೂ ಮೌಲ್ಯಯುತ ಭೂಮಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಮಾಡಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಮೌಲ್ಯಯುತ ಭೂಮಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶ ಮತ್ತು ಯೋಜನಾ ದೃಷ್ಟಿಯಿಂದ ಪ್ರೀಮಿಯಂ ಎಫ್.ಎ.ಆರ್ (Floor Area Ratio) ಅನ್ನು ಬಳಸಲು ಕೆ.ಟಿ.ಸಿ.ಪಿ ಕಾಯ್ದೆ 1961ರ ಕಲಂ 18(B) ಮತ್ತು ಯೋಜನಾ ಪ್ರಾಧಿಕಾರ ನಿಯಮ 37(E) ರಲ್ಲಿ ಮೂಲ ಎಫ್.ಎ.ಆರ್ ಗೆ ಹೆಚ್ಚುವರಿಯಾಗಿ ಪ್ರೀಮಿಯಂ ಎಫ್.ಎ.ಅರ್ ಅನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.

ಕೆ.ಟಿ.ಸಿ.ಪಿ ಕಾಯ್ದೆ 1961ರ ಕಲಂ 13(ಇ) ಅಡಿಯಲ್ಲಿ ಆರ್.ಎಂ.ಪಿ-2015ರ ವಲಯ ನಿಯಮಾವಳಿಗಳಿಗೆ ತಿದ್ದುಪಡಿ ತರಲು, ವಲಯ ನಿಯಮಾವಳಿಗಳಿಗೆ ಅಧ್ಯಾಯ - 11ನ್ನು ಸೇರ್ಪಡೆಗೊಳಿಸಿ ("PREMIUM F.A.R GRANTED BY LEVY OF PREMIUM CHARGES") ನಿಯಮಗಳಿಗೆ ತಿದ್ದುಪಡಿ ತಂದು ದಿನಾಂಕ: 02.04.2025 ರಂದು ಅಧಿಸೂಚನೆ ಹೊರಡಿಸಲಾಗಿರುತ್ತದೆ ಎಂದು ಹೇಳಲಾಗಿದೆ.
1. ಅಭಿವೃದ್ಧಿದಾರರು/ಮಾಲೀಕರುಗಳು ಕಟ್ಟಡ ನಿರ್ಮಾಣಕ್ಕಾಗಿ ಅನುಮತಿ ಕೋರುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಪ್ರೀಮಿಯಂ ಎಫ್.ಎ.ಆರ್ ಉಪಯೋಗಿಸಿಕೊಂಡು ಕಟ್ಟಡ ನಿರ್ಮಾಣ ಮಾಡಲು ನಕ್ಷೆ ತಯಾರಿಸಿ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಬಹುದಾಗಿರುತ್ತದೆ.
2. ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಶುಲ್ಕಗಳನ್ನು ಪಾವತಿಸಲು ತಿಳಿಸುವ ಸಂದರ್ಭದಲ್ಲಿ ಪ್ರೀಮಿಯಂ ಎಫ್.ಎ.ಆರ್ ವಿಸ್ತೀರ್ಣಕ್ಕೆ ತಗಲುವ ಶುಲ್ಕಗಳನ್ನು ಲೆಕ್ಕಾಚಾರ ಮಾಡಿ ಕಟ್ಟಡ ಶುಲ್ಕಗಳೊಂದಿಗೆ ಪ್ರೀಮಿಯಂ ಎಫ್.ಎ.ಆರ್ ಶುಲ್ಕವನ್ನು ಸಹ ಪಾವತಿಸಲು ಸಂಬಂದಪಟ್ಟ ನಗರ ಪಾಲಿಕೆಯಿಂದ ಕಟ್ಟಡ ನಿರ್ಮಾಣದಾರರಿಗೆ ತಿಳಿಸಲಾಗುತ್ತದೆ.
3. ಮೇಲ್ಕಂಡ ಎಲ್ಲಾ ಶುಲ್ಕಗಳನ್ನು ಪಾಲಿಕೆಗೆ ಪಾವತಿಸಿದಲ್ಲಿ ಮೂಲ ಎಪ್.ಎ.ಆರ್. ನೊಂದಿಗೆ ಪ್ರಿಮಿಯಂ ಎಫ್.ಎ.ಆರ್ ಅನ್ನು ಸಹ ಬಳಸಿ ನಿರ್ಮಾಣ ಮಾಡಲು ಕಟ್ಟಡ ನಕ್ಷೆ ಮಂಜೂರಾತಿಯನ್ನು ನಗರ ಪಾಲಿಕೆಗಳಿಂದ ನೀಡಲಾಗುವುದು.
4. ಇದು ಸರಳವಾದ ಪ್ರಕ್ರಿಯೆಯಾಗಿದ್ದು, ಈ ವ್ಯವಸ್ಥೆಯು ಈಗಾಗಲೇ ಚಾಲ್ತಿಯಲ್ಲಿದೆ. ಇಒಡಿಬಿ ತಂತ್ರಾಂಶದಲ್ಲಿ ಇದನ್ನು ಅಳವಡಿಸಲಾಗಿದ್ದು, ಸಂಬಂಧಪಟ್ಟ ಎಲ್ಲರು ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
5. ಪ್ರೀಮಿಯಂ ಎಫ್.ಎ.ಆರ್ ನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿನ ಐದು ನಗರ ಪಾಲಿಕೆಗಳಿಂದ ವಾರ್ಷಿಕ ಸರಿಸುಮಾರು 2,000 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ಜಿಬಿಎ ಹೇಳಿದೆ.
ಮೇಲ್ಕಂಡ ಕೋಷ್ಟಕದಲ್ಲಿ ವಿವರಿಸಿರುವಂತೆ, ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಸೂಚಿ ದರವನ್ನು ಪರಿಗಣಿಸಿ ಮೂಲ ಎಪ್.ಎ.ಆರ್ಗೆ ಹೆಚ್ಚುವರಿ ಎಫ್.ಎ.ಆರ್ (ಪ್ರಿಮಿಯಂ ಎಫ್.ಎ.ಆರ್) ಅನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಅದರಂತೆ, ಮಾರ್ಗಸೂಚಿ ದರದ ಅನ್ವಯ ಶುಲ್ಕಗಳನ್ನು ಲೆಕ್ಕಾಚಾರ ಮಾಡಿ ಹೆಚ್ಚುವರಿ ಎಫ್.ಎ.ಆರ್ ಅನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ಕೋಷ್ಟಕದಲ್ಲಿ (ಪ್ರತಿ ಲಗತ್ತಿಸಿದೆ) ವಿವರಿಸಿರುವಂತೆ ಅಗತ್ಯ ಶುಲ್ಕಗಳನ್ನು ಪಾವತಿಸುವ ಮೂಲಕ ಮೂಲ ಎಫ್.ಎ.ಆರ್ನ 0.4 ರಷ್ಟು(ಅಂದರೆ ಶೇ. 40 ರಷ್ಟು) ಪ್ರೀಮಿಯಂ ಎಫ್.ಎ.ಆರ್ ಅನ್ನು ಪಡೆಯಬಹುದಾಗಿರುತ್ತದೆ. ಅದನ್ನು ಹೊರತುಪಡಿಸಿ ಮೂಲ ಎಫ್.ಎ.ಆರ್ನ 0.2 ರಷ್ಟು (ಅಂದರೆ ಶೇ. 20 ರಷ್ಟು) ಟಿಡಿಆರ್ ಅನ್ನು ಬಳಸುವ ಮೂಲಕ ಹೆಚ್ಚುವರಿಯಾಗಿ ಪಡೆಯಬಹುದಾಗಿದ್ದು, ಒಟ್ಟಾರೆ ಗರಿಷ್ಠ ಮೂಲ ಎಫ್.ಎ.ಆರ್ನ 0.6 ರಷ್ಟು(ಅಂದರೆ ಶೇ. 60 ರಷ್ಟು) ಹೆಚ್ಚುವರಿ ಎಫ್.ಎ.ಆರ್ ಬಳಸಬಹುದಾಗಿರುತ್ತದೆ.
ಈ ತಿದ್ದುಪಡಿಗೆ ಕೆಲವರು ಹೈಕೋರ್ಟ್ನಲ್ಲಿ WP no: 6347/2025 ಹಾಗೂ WP No: 11201/2025 ರಲ್ಲಿ ದಾವೆ ಹೂಡಿದ್ದರು. ಆದರೆ, ಹೈಕೋರ್ಟ್ ದಿನಾಂಕ: 05.12.2025 ರಂದು ಸದರಿ ದಾವೆಯನ್ನು ವಜಾಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪರವಾಗಿ ತೀರ್ಪು ಬಂದಿರುತ್ತದೆ. ಅದರಿಂದಾಗಿ ಇನ್ನು ಮುಂದೆ ಸಾರ್ವಜನಿಕರು, ಭೂ ಮಾಲೀಕರು, ಅಭಿವೃದ್ದಿದಾರರು ಮತ್ತು ನಿರ್ಮಾಣದಾರರು ಪ್ರಿಮಿಯಂ ಎಫ್.ಎ.ಆರ್ ಅನ್ನು ಸದುಪಯೋಗ ಪಡಿಸಿಕೊಳ್ಳಲು ಈ ಕೆಳಕಂಡ ವಿಧಾನದಡಿಯಲ್ಲಿ ಪ್ರಿಮಿಯಂ ಎಫ್.ಎ.ಆರ್ ಅನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications