ಮಲ್ಲೇಶ್ವರಕ್ಕೆ ಹೋದರೆ ಕಡಲೆಕಾಯಿ ಪರಿಷೆ ಮಿಸ್ ಮಾಡ್ಕೋಬೇಡಿ
ಬೆಂಗಳೂರು, ನವೆಂಬರ್ 23: ವೀಕೆಂಡ್ ಬಂತು ಈ ವಾರ ಎಲ್ಲಿಗೆ ಹೋಗೋದು ಎಂದು ಯೋಚನೆ ಮಾಡ್ತಿದೀರಾ ಹಾಗಾದರೆ ಮಲ್ಲೇಶ್ವರ ಕಡಲೆಕಾಯಿ ಪರಿಷೆಗೆ ಒಮ್ಮೆ ಹೋಗಿಬನ್ನಿ.
ಬೆಂಗಳೂರು ಉತ್ತರ ಭಾಗದಲ್ಲಿ ಜನಪ್ರಿಯವಾಗುತ್ತಿರುವ ಕಾಡು ಮಲ್ಲೇಶ್ವರ ಗೆಳೆಯರ ಬಳಗವು ನಾಲ್ಕು ದಿನಗಳ ಕಡಲೆಕಾಯಿ ಪರಿಷೆಯನ್ನು ಹಮ್ಮಿಕೊಂಡಿದ್ದು ಶುಕ್ರವಾರ ಪರಿಷೆ ಆರಂಭಗೊಂಡಿದೆ.
ಮಲ್ಲೇಶ್ವರ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಪರಿಷೆಗೆ ಚಾಲನೆ ನೀಡಿದ್ದಾರೆ. ನವೆಂಬರ್ 25ರಂದು ಬೆಳಗ್ಗೆ 11 ಗಂಟೆಗೆ ವಿದುಷಿ ಎವಿ ದೀಪಶ್ರೀ , ಕಾವ್ಯ ದಿಲೀಪ್ ಮತ್ತು ಶಿಷ್ಯ ವೃಂದದಿಂದ ನಾಟ್ಯ ವಿಶಾರದಾ ಸಂಗಮ ಕಾರ್ಯಕ್ರಮ ನಡೆಯಲಿದೆ.

ನವೆಂಬರ್ 26ರಂದು ಕಾಡು ಮಲ್ಲೇಶ್ವರ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಹಾಗೂ ಸಂಜೆ ಆರು ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಗಾಯಕಿ ಎಂಡಿ ಪಲ್ಲವಿಯವರಿಂದ ಸುಗಮಸಂಗೀತ ಗಾಯನ ಕಾರ್ಯಕ್ರಮವೂ ಕೂಡ ನಡೆಯಲಿದೆ.












Click it and Unblock the Notifications