Makar Sankranti : ಸಂಕ್ರಾಂತಿ ಹಬ್ಬಕ್ಕೂ ಮುನ್ನ ಬೆಂಗಳೂರಿನಲ್ಲಿ ದುಪ್ಪಟ್ಟಾದ ಹೂವು, ಹಣ್ಣಿನ ಬೆಲೆ- ಇಲ್ಲಿವೆ ದರಗಳು
ಬೆಂಗಳೂರು, ಜನವರಿ 14: ಸಂಕ್ರಾಂತಿ, ಪೊಂಗಲ್ ಹಬ್ಬಕ್ಕೂ ಮುನ್ನ ಕಳೆದ ಒಂದು ವಾರದಿಂದ ನಗರದಲ್ಲಿ ಹೂವಿನ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ನಗರದಲ್ಲಿರುವ ಮಾರುಕಟ್ಟೆಗಳಿಗೆ ಭೇಟಿ ನೀಡಿದರೆ, ಹೂವಿನ ದರಗಳಲ್ಲಿ ಭಾರೀ ಏರಿಕೆ ಕಂಡುಬಂದಿರುವುದು ನಿಮಗೆ ತಿಳಿಯಲಿದೆ. ಅದರಲ್ಲೂ ಮಲ್ಲಿಗೆ ಹೂವಿಗೆ ಹೆಚ್ಚಿನ ಬೇಡಿಕೆಯಿದೆ ಎಂಬುದು ಗೊತ್ತಾಗುತ್ತದೆ. ಈ ಕುರಿತು 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ವರದಿ ಮಾಡಿದೆ.
ಮಲ್ಲೇಶ್ವರಂ 11ನೇ ಕ್ರಾಸ್ನ ಹೂವಿನ ಮಾರುಕಟ್ಟೆಯಲ್ಲಿ ಒಂದು ಸರಮಾಲೆ ಮಲ್ಲಿಗೆ ಹೂವಿಗೆ 60 ರಿಂದ 120 ರೂಪಾಯಿಗೆ ಏರಿದೆ. ನೀವು ಒಂದು ವೇಳೆ, ಮಲ್ಲಿಗೆ ಮಾಲೆ ಖರೀದಿಸಬೇಕೆಂದತೆ 1,200 ರೂಪಾಯಿ ನೀಡಬೇಕಿದೆ. 600 ರೂಪಾಯಿಂದ 1,200 ರೂಪಾಯಿಗೆ ಏರಿಕೆಯಾಗಿದೆ.
ಹಬ್ಬ-ಹರಿದಿನಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಸೇವಂತಿ ಹೂವು 25 ರಿಂದ 50 ರೂಪಾಯಿಗೆ ಏರಿಕೆಯಾಗಿದೆ. ಮತ್ತೊಂದೆಡೆ ಸೇವಂತಿಗೆ ಮಾಲೆ 100 ರಿಂದ 200 ರೂಪಾಯಿಗೆ ಏರಿದೆ.

ಕನಕಾಂಬರ ಮಾಲೆಯು ಮೊದಲಿನ 60 ರೂ.ಗಳಿಂದ ಈಗ 120 ರೂಪಾಯಿ ವರೆಗೆ ಏರಿಕೆ ಕಂಡಿದೆ.
ಹಬ್ಬದ ಪ್ರಯುಕ್ತ ತೀವ್ರ ಬೇಡಿಕೆಯಿಂದಾಗಿ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ. ಬಾಳೆಹಣ್ಣು ಕಿಲೋಗೆ 60 ರೂ.ನಿಂದ 70 ರೂಪಾಯಿ ಏರಿಕೆಯಾಗಿದೆ. ಸೇಬು ಹಣ್ಣಿನ ಬೆಲೆ 120 ರೂ.ನಿಂದ 150 ರೂಪಾಯಿ ಏರಿಕೆ ಕಂಡಿದೆ.
'ಈ ಹಣ್ಣುಗಳ ಸೀಸನ್ ಮುಗಿಯುತ್ತಿದ್ದಂತೆ ಬೆಲೆಯಲ್ಲಿ ಏರಿಕೆಯಾಗಿದೆ. ಆದರೆ ದ್ರಾಕ್ಷಿಯಂತಹ ಇತರ ಹಣ್ಣುಗಳ ಬೆಲೆ ಕಡಿಮೆಯಾಗಿದೆ. ಅವುಗಳ ಸೀಸನ್ ಪ್ರಾರಂಭವಾಗಿರುವುದರಿಂದ ಬೆಲೆ ಕಡಿಮೆಯಾಗಿದೆ. ದ್ರಾಕ್ಷಿ ಬೆಲೆ 250 ರಿಂದ 200 ರೂ.ಗೆ ಇಳಿಕೆಯಾಗಿದೆ' ಎಂದು ರಸೆಲ್ ಮಾರುಕಟ್ಟೆಯ ಹಣ್ಣು ಮಾರಾಟಗಾರರೊಬ್ಬರು 'ಡೆಕ್ಕೆನ್ ಹೆರಾಲ್ಡ್'ಗೆ ತಿಳಿಸಿದ್ದಾರೆ.
ಮಕರ ಸಂಕ್ರಾಂತಿಯು ಭಾರತದಾದ್ಯಂತ ಅತ್ಯಂತ ವೈಭವ ಮತ್ತು ಉತ್ಸಾಹದಿಂದ ಆಚರಿಸಲಾಗುವ ವರ್ಷದ ಮೊದಲ ಹಿಂದೂ ಹಬ್ಬವಾಗಿದೆ. ಇದು ಪ್ರತಿ ವರ್ಷ ಜನವರಿಯಲ್ಲಿ ಬರುತ್ತದೆ. ಇದು ಭಾರತದಾದ್ಯಂತ ಹಿಂದೂಗಳು ಆಚರಿಸುವ ಪ್ರಮುಖ ಸುಗ್ಗಿಯ ಹಬ್ಬವಾಗಿದೆ. ಆದರೆ, ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿಯು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಸೂರ್ಯ ಉತ್ತರಕ್ಕೆ ಪ್ರಯಾಣಿಸುತ್ತಾನೆ. ಈ ಕಾರಣದಿಂದಾಗಿ, ಇನ್ನು ಮುಂದೆ ಹಗಲಿನ ಸಮಯ ದೀರ್ಘವಾಗುತ್ತವೆ. ಈ ಅವಧಿಯನ್ನು ಉತ್ತರಾಯಣ ಎಂದೂ ಕರೆಯುತ್ತಾರೆ. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಈ ವರ್ಷ, ಮಕರ ಸಂಕ್ರಾತಿ ಹಬ್ಬವು ಜನವರಿ 15, 2023 ರಂದು ಭಾನುವಾರ ಬಂದಿದೆ. ಪಂಚಾಂಗದ ಪ್ರಕಾರ, ಸಂಕ್ರಾಂತಿ ತಿಥಿಯು 8:57, ಜನವರಿ 14 ಕ್ಕೆ ಇರುತ್ತದೆ. ಮಕರ ಸಂಕ್ರಾಂತಿ ಪುಣ್ಯ ಕಾಲವು ಬೆಳಿಗ್ಗೆ 7:15 ರಿಂದ ಸಂಜೆ 5:46 ರ ವರೆಗೆ (ಅವಧಿ - 10 ಗಂಟೆ 31 ನಿಮಿಷಗಳು) ಮತ್ತು ಮಕರ ಸಂಕ್ರಾಂತಿ ಮಹಾ ಪುಣ್ಯ ಕಾಲವು ಬೆಳಿಗ್ಗೆ 7:15 ಕ್ಕೆ ಪ್ರಾರಂಭವಾಗಿ ರಾತ್ರಿ 9:00 ಕ್ಕೆ ಕೊನೆಗೊಳ್ಳುತ್ತದೆ (ಕಾಲ - 1 ಗಂಟೆ 45 ನಿಮಿಷಗಳು).
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications