Shravana Shanivara 2023: ಗೋವಿಂದಾ.. ಗೋವಿಂದಾ..ಭಕ್ತಿಭಾವದಲ್ಲಿ ಮಿಂದೆದ್ದು ಶ್ರಾವಣ ಮಾಸ ಬರ ಮಾಡಿಕೊಂಡ ಭಕ್ತ ಗಣ
ಬೆಂಗಳೂರು, ಆಗಸ್ಟ್ 19: ಈಗಷ್ಟೇ ಆಷಾಢ ಕಳೆದು ಶ್ರಾವಣ ಮಾಸ ಆರಂಭವಾಗಿದೆ, ಶ್ರಾವಣ ಮಾಸದ ಮೊದಲ ಶನಿವಾರವಾದ ಇಂದು (ಆ19) ಸಿಲಿಕಾನ್ ಸಿಟಿಯಲ್ಲಿ ಗೋವಿಂದನ ನಾಮಸ್ಮರಣೆ ಮಾರ್ಧನಿಸಿತ್ತು. ಬೆಳ್ಳಂಬೆಳಗ್ಗೆ ಶುಚಿಯಾಗಿ ದೇಗುಲಗಳಿಗೆ ಎಂಟ್ರಿ ಕೊಟ್ಟ ಭಕ್ತರು ಗೋವಿಂದನ ದರ್ಶನ ಪಡೆದು ಪುನೀತರಾದರು. ಸಿಲಿಕಾನ್ ಸಿಟಿಯಲ್ಲಿ ಮೊದಲ ಶ್ರಾವಣ ಶನಿವಾರದ ಸಂಭ್ರಮ ಹೇಗಿತ್ತು ಗೊತ್ತಾ?
ಶ್ರಾವಣ ಮಾಸ ಅಂದರೆ ಹಿಂದೂಗಳಿಗೆ ಪವಿತ್ರ ಮಾಸ ಆರಂಭವಾದ ಸಂಭ್ರಮ. ಸಾಲು ಸಾಲು ಹಬ್ಬಗಳಿಗೆ ನಾಂದಿ ಹಾಡುವ ಈ ಪವಿತ್ರ ಮಾಸದಲ್ಲಿ ವ್ರತ, ಪೂಜೆಗಳ ಜೊತೆಗೆ ಕಟ್ಟುನಿಟ್ಟಿನ ಆಚರಣೆಗಳನ್ನ ಅನುಸರಿಸಲಾಗುತ್ತೆ. ಸಿಲಿಕಾನ್ ಸಿಟಿಯಲ್ಲೂ ಕೂಡ ಶ್ರಾವಣ ಮಾಸದ ವ್ರತಗಳು ಆರಂಭವಾಗಿದ್ದು, ಮೊದಲ ಶ್ರಾವಣ ಶನಿವಾರವಾದ ಇಂದು ಮಲ್ಲೇಶ್ವರಂನ ಟಿಟಿಡಿ ದೇವಾಲಯಕ್ಕೆ ನೂರಾರು ಭಕ್ತರು ಭೇಟಿ ನೀಡಿ ಗೋವಿಂದನ ದರ್ಶನ ಪಡೆದರು.

ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತ ಭಕ್ತರು, ತುಳಸಿ, ಮಲ್ಲಿಗೆ ಹೂವು ಹಿಡಿದು ಗೋವಿಂದನಿಗೆ ಜೈಕಾರ ಕೂಗುತ್ತಾ ಶ್ರಾವಣ ಮಾಸದ ವ್ರತದ ಆಚರಣೆಗೆ ಶಂಖನಾದ ಮೊಳಗಿಸಿದರು. ಇನ್ನು ಆಷಾಢದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಅನ್ನುವ ನಂವಿಕೆ ಇರುವುದರಿಂದ ಆಗ ನಿಂತುಹೋಗಿದ್ದ ಶುಭಕಾರ್ಯಗಳಿಗೆ ಶ್ರಾವಣ ಮಾಸದಲ್ಲಿ ಚಾಲನೆ ಸಿಗುತ್ತದೆ.
ಶ್ರಾವಣ ಶನಿವಾರಗಳಲ್ಲಿ ಗೋವಿಂದನ ಭಜನೆ ಮಾಡುತ್ತಾ, ಮಾಂಸಾಹಾರ ತ್ಯಜಿಸಿ ವಿಶೇಷ ವ್ರತಗಳನ್ನ ಆಚರಣೆ ಮಾಡುತ್ತಾರೆ. ಅದರಂತೆ ಇಂದು ಕೂಡ ಸಿಲಿಕಾನ್ ಸಿಟಿ ಜನರು ಬೆಳಗ್ಗೆಯೇ ಗೋವಿಂದನ ನಾಮಸ್ಮರಣೆ ಮೂಲಕ ಶ್ರಾವಣ ಮಾಸವನ್ನು ಬರಮಾಡಿಕೊಂಡರು.
ಇನ್ನು ಶ್ರಾವಣ ಮಾಸದಲ್ಲಿ ವಿಶೇಷವಾಗಿ ತಿರುಪತಿ ತಿಮ್ಮಪ್ಪ, ಗೋವಿಂದ ಅಂತಾ ಕರೆಯಲ್ಪಡುವ ಶ್ರೀಹರಿಯನ್ನ ಹೆಚ್ಚಾಗಿ ಜನರು ಪೂಜಿಸುವ ಪರಿಪಾಠವಿದೆ. ತಿರುಪತಿ ತಿಮ್ಮಪ್ಪನಿಗೆ ಪ್ರಿಯವಾದ ಈ ಪವಿತ್ರಮಾಸದಲ್ಲಿ ನೂರಾರು ಭಕ್ತರು ಪ್ರತಿ ಶನಿವಾರ ಗೋವಿಂದನ ಸ್ಮರಣೆ ಮಾಡಿ ಪೂಜೆ,ವ್ರತಗಳನ್ನ ಮಾಡುತ್ತಾರೆ.
ಕೆಲ ಜನರು ಶ್ರೀಹರಿಯ ಸೇವೆಗೆ ಅಂತಾನೇ ಹಲವು ದಿನಗಳ ವ್ರತ ಕೂಡ ಮಾಡಿ ಶ್ರಾವಣ ಮಾಸದ ಮಹತ್ವಕ್ಕೆ ಮತ್ತಷ್ಟು ಮೌಲ್ಯ ತುಂಬುತ್ತಾರೆ. ಅದೇನೇ ಇರಲಿ ಭಕ್ತಿ-ಭಾವಗಳ ಜೊತೆ ಜೊತೆಗೆ ಆರಂಭವಾದ ಪವಿತ್ರ ಶ್ರಾವಣ ಮಾಸಕ್ಕೆ ಸಿಲಿಕಾನ್ ಸಿಟಿ ಜನರು ಭಕ್ತಿಪೂರ್ವಕ ಸ್ವಾಗತ ಕೋರಿದ್ದಾರೆ.
ವೇಗವಾಗಿ ಪಾಶ್ಚಾತ್ಯ ನಾಗರೀಕತೆಯ ಪ್ರಭಾವಕ್ಕೆ ಒಳಗಾಗುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇನ್ನೂ ಕೂಡ ಪ್ರಕೃತಿಯ ಬದಲಾವಣೆಗಳಿಗೆ ದೈವರೂಪ ನೀಡಿ ಪೂಜಿಸುವ ಸಂಸ್ಕೃತಿ ಉಳಿದಿರೋದು ಮಾತ್ರ ನಿಜಕ್ಕೂ ಖುಷಿಯ ವಿಚಾರ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
ಬೆಂಗಳೂರು-ಮಂಗಳೂರು ಮಧ್ಯ ನಿತ್ಯ ತಡರಾತ್ರಿ ವಿಮಾನ ಸೇವೆ, ಯಾವಾಗ? ಸಮಯ-ವೇಳಾಪಟ್ಟಿ ಇಲ್ಲಿದೆ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers












Click it and Unblock the Notifications