Shravana Shanivara 2023: ಗೋವಿಂದಾ.. ಗೋವಿಂದಾ..ಭಕ್ತಿಭಾವದಲ್ಲಿ ಮಿಂದೆದ್ದು ಶ್ರಾವಣ ಮಾಸ ಬರ ಮಾಡಿಕೊಂಡ ಭಕ್ತ ಗಣ
ಬೆಂಗಳೂರು, ಆಗಸ್ಟ್ 19: ಈಗಷ್ಟೇ ಆಷಾಢ ಕಳೆದು ಶ್ರಾವಣ ಮಾಸ ಆರಂಭವಾಗಿದೆ, ಶ್ರಾವಣ ಮಾಸದ ಮೊದಲ ಶನಿವಾರವಾದ ಇಂದು (ಆ19) ಸಿಲಿಕಾನ್ ಸಿಟಿಯಲ್ಲಿ ಗೋವಿಂದನ ನಾಮಸ್ಮರಣೆ ಮಾರ್ಧನಿಸಿತ್ತು. ಬೆಳ್ಳಂಬೆಳಗ್ಗೆ ಶುಚಿಯಾಗಿ ದೇಗುಲಗಳಿಗೆ ಎಂಟ್ರಿ ಕೊಟ್ಟ ಭಕ್ತರು ಗೋವಿಂದನ ದರ್ಶನ ಪಡೆದು ಪುನೀತರಾದರು. ಸಿಲಿಕಾನ್ ಸಿಟಿಯಲ್ಲಿ ಮೊದಲ ಶ್ರಾವಣ ಶನಿವಾರದ ಸಂಭ್ರಮ ಹೇಗಿತ್ತು ಗೊತ್ತಾ?
ಶ್ರಾವಣ ಮಾಸ ಅಂದರೆ ಹಿಂದೂಗಳಿಗೆ ಪವಿತ್ರ ಮಾಸ ಆರಂಭವಾದ ಸಂಭ್ರಮ. ಸಾಲು ಸಾಲು ಹಬ್ಬಗಳಿಗೆ ನಾಂದಿ ಹಾಡುವ ಈ ಪವಿತ್ರ ಮಾಸದಲ್ಲಿ ವ್ರತ, ಪೂಜೆಗಳ ಜೊತೆಗೆ ಕಟ್ಟುನಿಟ್ಟಿನ ಆಚರಣೆಗಳನ್ನ ಅನುಸರಿಸಲಾಗುತ್ತೆ. ಸಿಲಿಕಾನ್ ಸಿಟಿಯಲ್ಲೂ ಕೂಡ ಶ್ರಾವಣ ಮಾಸದ ವ್ರತಗಳು ಆರಂಭವಾಗಿದ್ದು, ಮೊದಲ ಶ್ರಾವಣ ಶನಿವಾರವಾದ ಇಂದು ಮಲ್ಲೇಶ್ವರಂನ ಟಿಟಿಡಿ ದೇವಾಲಯಕ್ಕೆ ನೂರಾರು ಭಕ್ತರು ಭೇಟಿ ನೀಡಿ ಗೋವಿಂದನ ದರ್ಶನ ಪಡೆದರು.

ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತ ಭಕ್ತರು, ತುಳಸಿ, ಮಲ್ಲಿಗೆ ಹೂವು ಹಿಡಿದು ಗೋವಿಂದನಿಗೆ ಜೈಕಾರ ಕೂಗುತ್ತಾ ಶ್ರಾವಣ ಮಾಸದ ವ್ರತದ ಆಚರಣೆಗೆ ಶಂಖನಾದ ಮೊಳಗಿಸಿದರು. ಇನ್ನು ಆಷಾಢದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಅನ್ನುವ ನಂವಿಕೆ ಇರುವುದರಿಂದ ಆಗ ನಿಂತುಹೋಗಿದ್ದ ಶುಭಕಾರ್ಯಗಳಿಗೆ ಶ್ರಾವಣ ಮಾಸದಲ್ಲಿ ಚಾಲನೆ ಸಿಗುತ್ತದೆ.
ಶ್ರಾವಣ ಶನಿವಾರಗಳಲ್ಲಿ ಗೋವಿಂದನ ಭಜನೆ ಮಾಡುತ್ತಾ, ಮಾಂಸಾಹಾರ ತ್ಯಜಿಸಿ ವಿಶೇಷ ವ್ರತಗಳನ್ನ ಆಚರಣೆ ಮಾಡುತ್ತಾರೆ. ಅದರಂತೆ ಇಂದು ಕೂಡ ಸಿಲಿಕಾನ್ ಸಿಟಿ ಜನರು ಬೆಳಗ್ಗೆಯೇ ಗೋವಿಂದನ ನಾಮಸ್ಮರಣೆ ಮೂಲಕ ಶ್ರಾವಣ ಮಾಸವನ್ನು ಬರಮಾಡಿಕೊಂಡರು.
ಇನ್ನು ಶ್ರಾವಣ ಮಾಸದಲ್ಲಿ ವಿಶೇಷವಾಗಿ ತಿರುಪತಿ ತಿಮ್ಮಪ್ಪ, ಗೋವಿಂದ ಅಂತಾ ಕರೆಯಲ್ಪಡುವ ಶ್ರೀಹರಿಯನ್ನ ಹೆಚ್ಚಾಗಿ ಜನರು ಪೂಜಿಸುವ ಪರಿಪಾಠವಿದೆ. ತಿರುಪತಿ ತಿಮ್ಮಪ್ಪನಿಗೆ ಪ್ರಿಯವಾದ ಈ ಪವಿತ್ರಮಾಸದಲ್ಲಿ ನೂರಾರು ಭಕ್ತರು ಪ್ರತಿ ಶನಿವಾರ ಗೋವಿಂದನ ಸ್ಮರಣೆ ಮಾಡಿ ಪೂಜೆ,ವ್ರತಗಳನ್ನ ಮಾಡುತ್ತಾರೆ.
ಕೆಲ ಜನರು ಶ್ರೀಹರಿಯ ಸೇವೆಗೆ ಅಂತಾನೇ ಹಲವು ದಿನಗಳ ವ್ರತ ಕೂಡ ಮಾಡಿ ಶ್ರಾವಣ ಮಾಸದ ಮಹತ್ವಕ್ಕೆ ಮತ್ತಷ್ಟು ಮೌಲ್ಯ ತುಂಬುತ್ತಾರೆ. ಅದೇನೇ ಇರಲಿ ಭಕ್ತಿ-ಭಾವಗಳ ಜೊತೆ ಜೊತೆಗೆ ಆರಂಭವಾದ ಪವಿತ್ರ ಶ್ರಾವಣ ಮಾಸಕ್ಕೆ ಸಿಲಿಕಾನ್ ಸಿಟಿ ಜನರು ಭಕ್ತಿಪೂರ್ವಕ ಸ್ವಾಗತ ಕೋರಿದ್ದಾರೆ.
ವೇಗವಾಗಿ ಪಾಶ್ಚಾತ್ಯ ನಾಗರೀಕತೆಯ ಪ್ರಭಾವಕ್ಕೆ ಒಳಗಾಗುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇನ್ನೂ ಕೂಡ ಪ್ರಕೃತಿಯ ಬದಲಾವಣೆಗಳಿಗೆ ದೈವರೂಪ ನೀಡಿ ಪೂಜಿಸುವ ಸಂಸ್ಕೃತಿ ಉಳಿದಿರೋದು ಮಾತ್ರ ನಿಜಕ್ಕೂ ಖುಷಿಯ ವಿಚಾರ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications