ನಾಗಶ್ರೀ ರಾಮಮೂರ್ತಿ ಫೆಮಿನಾ ಸ್ಟೈಲಿಸ್ಟಾ ಸೌತ್ 2020 ವಿಜೇತೆ
ಬೆಂಗಳೂರು, ಜನವರಿ 19: ಭಾರತದ ಅನುಭವಿ ಮತ್ತು ವಿಶ್ವಾಸಾರ್ಹ ಮಹಿಳಾ ಬ್ರಾಂಡ್ ಫೆಮಿನಾ ಈ ಭಾಗದ ಭವಿಷ್ಯದ ಮನಮೋಹಕ ಫ್ಯಾಷನಿಸ್ಟರಿಗಾಗಿ ಫೆಮಿನಾ ಸ್ಟೈಲಿಸ್ಟಾ ಸೌತ್ನ 6 ನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿದೆ.
ಬ್ರ್ಯಾಂಡ್ ಈಗಾಗಲೇ ನಾರ್ತ್, ವೆಸ್ಟ್, ಸೌತ್ ಸೇರಿದಂತೆ ರಾಷ್ಟ್ರದಾದ್ಯಂತ ತನ್ನ ಯಶಸ್ವಿ ಆವೃತ್ತಿಗಳೊಂದಿಗೆ ಹೆಜ್ಜೆ ಗುರುತನ್ನು ಮೂಡಿಸಿದೆ. ಗಾಲಾ-ನೈಟ್ ಬೆಂಗಳೂರಿನ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿ ನಡೆಯಿತು.

ತೀರ್ಪುಗಾರರು ಮತ್ತು ಪ್ರೇಕ್ಷಕರ ಮುಂದೆ ದಿವಾಸ್ ಗಳು ಅಪಾರ ಶಕ್ತಿ, ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದರು. ನಾಗಶ್ರೀ ರಾಮಮೂರ್ತಿ ಪ್ರಶಸ್ತಿ ಗೆದ್ದರೆ, ಮಾನ್ಯ ಗಿರೀಶ್ ಮತ್ತು ಗೋಮತಿ ರೆಡ್ಡಿ ಕ್ರಮವಾಗಿ 1 ಮತ್ತು 2 ನೇ ರನ್ನರ್ಸ್ ಅಪ್ ಪ್ರಶಸ್ತಿಗಳನ್ನು ಗೆದ್ದರು.

ಗೌರವಾನ್ವಿತ ತೀರ್ಪುಗಾರರಾಗಿ ಹಿರಿಯ ಮತ್ತು ಬಹುಭಾಷಾ ನಟಿ ಪ್ರಿಯಾಂಕ ಉಪೇಂದ್ರ, ಸಮಾಜ ಸೇವಕಿ ಹಾಗು ಉದ್ಯಮಿ ಸ್ಪೂರ್ತಿ ವಿಶ್ವಾಸ್, ಟಿವಿ ಖ್ಯಾತಿಯ ನಟಿ ಅನುಪಮ ಗೌಡ, ಫೆಮಿನಾ ಮ್ಯಾಗಜಿನ್ ನ ಪ್ರೊಡಕ್ಷನ್ ಸಂಪಾದಕಿ ಶ್ರದ್ಧಾ ಕಾಮದಾರ್, ನ್ಯಾಚುರಲ್ ಸಲೂನ್ ನ ಸಹ ಸಂಸ್ಥಾಪಕ ಕುಮಾರವೇಲ್ ಮತ್ತು ಡಾ.ಜಮುನಾ ಪೈ ಅವರ ಸ್ಕಿನ್ ಲ್ಯಾಬ್ನ ರಜತಿ ಕಾಲಿಮುಥನ್ ಪಾಲ್ಗೊಂಡಿದ್ದರು. ಸುಂದರಿಯರನ್ನು ಅವರ ಸೌಂದರ್ಯ ಮತ್ತು ಅವರ ಒಟ್ಟಾರೆ ವ್ಯಕ್ತಿತ್ವ ಮತ್ತು ಬುದ್ಧಿವಂತಿಕೆಯ ಮೇಲೆ ನಿರ್ಣಯಿಸಲಾಯಿತು. ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲಲು ಕಠಿಣ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಮೂಲಕ ಅಭ್ಯರ್ಥಿಗಳು ತಮ್ಮ ಪ್ರತಿಭೆಯನ್ನು ಮೂರು ಕಠಿಣ ಸುತ್ತುಗಳಲ್ಲಿ ಪ್ರದರ್ಶಿಸಿದರು.

ಜನಪ್ರಿಯ ಹಾಸ್ಯನಟ ರೂಪನ್ ಪಾಲ್ ತನ್ನ ಉಲ್ಲಾಸ ಮತ್ತು ಹಾಸ್ಯದ ಮೂಲಕ ಅತಿಥಿಗಳನ್ನು ರಂಜಿಸಿದರು. ಸುಂದರ ಮತ್ತು ಬಹು ಪ್ರತಿಭಾನ್ವಿತ ಗಾಯಕ ಸೌಂದರ್ಯ ಜಯಚಂದ್ರನ್ ತಮ್ಮ ಭಾವಪೂರ್ಣ ಮತ್ತು ಸುಮಧುರ ಧ್ವನಿಯಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು. ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಫ್ಯಾಷನ್ ಶೋಗೆ ಪ್ರೇಕ್ಷಕರಿಂದ ಅಪಾರ ಚಪ್ಪಾಳೆ ಮತ್ತು ಮನ್ನಣೆ ದೊರೆಯಿತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications