ವೋಟ್ ಮಾಡಲು ಅವಕಾಶ ಕೊಡದ ಅಧಿಕಾರಿಗಳಿಗೆ ಧಿಕ್ಕಾರ
ಮತದಾನ ನಿಮ್ಮ ಹಕ್ಕು, ದಾನದಲ್ಲಿ ಶ್ರೇಷ್ಠ ದಾನ ಮತದಾನ, ನಿಮ್ಮ ಒಂದು ಮತ ದೇಶದ ದಿಕ್ಕನ್ನೇ ಬದಲಿಸಬಲ್ಲದು ಮರೆಯದೇ ಮತ ಚಲಾಯಿಸಿ ಹೀಗೆ ಉದ್ದುದ್ದಾ ಭಾಷಣ ಮಾಡುತ್ತಾರೆ ರಾಜಕಾರಣಿಗಳು, ಚುನಾವಣಾ ಅಧಿಕಾರಿಗಳು, ಸೆಲೆಬ್ರಿಟಿಗಳು. ಮುಂತಾದವರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮತಗಟ್ಟೆ ವಿಳಾಸ "ಫುಲಿನ್ ಫಾವ್ಸ್ ಕಾಲೇಜ್ ನಲ್ಲಿರುವ (ಮತಗಟ್ಟೆ 247, ಕ್ರಮ ಸಂಖ್ಯೆ 1123, epic number YER0403816) ಈ ಉರಿ ಬಿಸಿಲಲ್ಲಿ ಸುಮಾರು 2 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು, ವೋಟಿಂಗ್ ಬೂತ್ ಒಳಗೆ ಹೋದರೆ, ಅಲ್ಲಿ ನಡೆಯುವ ಕಥೆಯೇ ಬೇರೆಯಿರುತ್ತದೆ, ಅಲ್ಲಿನ ಅಕ್ರಮಗಳೇ ಬೇರೆಯಿರುತ್ತದೆ.
ಅಲ್ಲಿನ ಅಧಿಕಾರಿಗಳು ನಿಮ್ಮ ಮತ ಬೆಳಿಗ್ಗೆನೇ ಚಲಾವಣೆಯಾಗಿದೆ. ನಿಮ್ಮದೇ ಹೆಸರಿನ ಇನ್ನೊಬ್ಬರು ಬಂದು ವೋಟ್ ಮಾಡಿದ್ದಾರೆ. ಈಗ ನಿಮಗೆ ವೋಟ್ ಮಾಡುವ ಅವಕಾಶವಿಲ್ಲವೆಂದು ಹೇಳಿದರು. ಅಯ್ಯೋ ಸರ್, ನಾನು ಬರುತ್ತಿರುವುದೇ ಈಗ ಇಷ್ಟ್ಹೊತ್ತು ಕ್ಯೂ ನಲ್ಲಿ ನಿಂತು ಬಂದಿದ್ದೀನಿ. ಅದ್ಹೇಗೆ ಬೇರೆಯವರು ವೋಟ್ ಮಾಡುತ್ತಾರೆ ಅದೂ ಅಲ್ಲದೆ ಮತದಾನದ ಪಟ್ಟಿಯಲ್ಲಿ ಹೆಸರು, ಫೋಟೋ , ಇತ್ಯಾದಿ ದಾಖಲೆಗಳು ಸರಿಯಾಗಿರುವಾಗ. ನನ್ನ ಹಕ್ಕನ್ನು ಕಿತ್ತುಕ್ಕೊಳ್ಳಲು ನೀವ್ಯಾರು ಎಂದು ಪ್ರಶ್ನಿಸಿದರೆ ಅಧಿಕಾರಿಗಳು ಕೊಡುವ ಉತ್ತರ ಹೀಗಿದೆ.
ಈ ಪ್ರಣಾಳಿಕೆಗಳಲ್ಲಿ ಯಾವುದು ನಿಮ್ಮ ಗಮನ ಸೆಳೆದಿದೆ?
ನೋಡಿ, ನಮಗಿರುವ ಸೂಚನೆಯಂತೆ ಮತದಾರರ ಪಟ್ಟಿಯಲ್ಲಿ ಫೋಟೋ ಮಿಸ್ ಮ್ಯಾಚ್ ಆಗಿದ್ದರೆ ಹೆಸರು, ಅಪ್ಪನ ಹೆಸರು ಮತ್ತು ಕ್ರಮ ಸಂಖ್ಯೆಯಷ್ಟೇ ನಾವು ಪರಿಗಣಿಸಿ ಮತದಾನ ಮಾಡಲು ಅವಕಾಶ ಕೊಡುತ್ತೇವೆ. ನೀವು ಬೇಗ ಬರ್ಬೇಕಿತ್ತು. ಬೆಳಿಗ್ಗೆಯಿಂದ ಮೂರ್ನಾಲ್ಕು ಜನಕ್ಕೆ ಈಥರ ಆಗಿದೆ. ನೀವು ಈಗ ಮತ ಮಾಡಲು ಬೇರೆದಾರಿಯೇ ಇಲ್ಲ. ಮುಂದಿನ ಸಲ ವೋಟ್ ಮಾಡಿ ಎಂದು ಉಡಾಫೆಯಿಂದ ಮಾತನಾಡುತ್ತಾರೆ.

ಇದು ಒಂದು ಬೂತಿನ ಕಥೆಯಾದರೆ ಉಳಿದ ಕಡೆಯ್ಲಲೂ ಇದೇರೀತಿ ಅದೆಷ್ಟು ಅಕ್ರಮಗಳು ನಡೆದಿರುತ್ತವೋ , ಅದೆಷ್ಟು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುತ್ತಾರೋ ? ಇದಕ್ಕೆ ಚುನಾವಣಾ ಸಂಸ್ಥೆಯೇ ಉತ್ತರಿಸಬೇಕು.
ಕೇಂದ್ರ ಚುನಾವಣಾ ಆಯೋಗ ಮೊದಲ ಬಾರಿಗೆ ಸಿ.ವಿಜಿಲ್ (ಜಾಗೃತ ಮತದಾರ ) ಎಂಬ ಮೊಬೈಲ್ ಅಪ್ಲಿಕೇಷನ್ ಪೂರ್ಣಪ್ರಮಾಣವಾಗಿ ಬಳಸುತ್ತಿದೆ. ಚುನಾವಣಾ ಅಕ್ರಮ ಸಂಬಂಧ ಸಾರ್ವಜನಿಕರು ಘಟನೆಗೆ ಸಂಬಂಧಿಸಿದಂತೆ ಲೈವ ಫೋಟೋ/ವೀಡಿಯೋ ಅಪ್ಲೋಡ್ ಮಾಡಿದರೆ ಸಾಕು, ತಕ್ಷಣವೇ ಮಾಹಿತಿ ಜಿಲ್ಲಾ ಚುನಾವಣಾ ಶಾಖೆಗೆ ರವಾನೆಯಾಗುತ್ತದೆ.
ಆಪ್ನಲ್ಲಿ ಮಾಹಿತಿದಾರ ಹೆಸರು, ಊರು ಬಹಿರಂಗಪಡಿಸುವುದು ಐಚ್ಛಿಕ. ಯಾವ ಸ್ಥಳದಲ್ಲಿ ಇದನ್ನು ತೆಗೆಯಲಾಗಿದೆ ಎಂಬುದು ಗೂಗಲ್ ಮ್ಯಾಪ್ನಿಂದ ತಿಳಿದುಬರಲಿದೆ. ಜಿಐಎಸ್ ತಂತ್ರಜ್ಞಾನ ಬಳಸುವ ಈ ಆಪ್ ನಿಂದ ದಾಖಲಾಗುವ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿ, ನ್ಯಾಯಾಲಯದಲ್ಲಿ ಸಾಕ್ಷ್ಯ ಒದಗಿಸಬಹುದಾಗಿದೆ.
-
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ












Click it and Unblock the Notifications