Get Updates
Get notified of breaking news, exclusive insights, and must-see stories!

ಈ ದಿನ ಕುಡಿಯುವ ನೀರು ಬರಲ್ಲ, ಎರ್ರಾ ಬಿರ್ರಿ ಖಾಲಿ ಮಾಡಿಬಿಟ್ಟಿರಾ ಉಳಿಸಿಟ್ಟುಕೊಳ್ಳಿ...

ಬೆಂಗಳೂರು ಫೆಬ್ರವರಿ 21: ತುರ್ತು ಕಾಮಗಾರಿ ನಿಮಿತ್ತ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

ಬೆಂಗಳೂರು ಜಲಮಂಡಳಿಯು ತುರ್ತು ನಿರ್ವಹಣಾ ಕಾಮಗಾರಿಗಳು ಹಾಗೂ ಯು.ಎಫ್ಡಬ್ಲ್ಯೂ ಬಲ್ಕ್‌ ಫ್ಲೋ ಮೀಟರ್‌ಗಳನ್ನು ಅಳವಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ. ಹೀಗಾಗಿ ದಿನಾಂಕ 27/2/2024ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ 28/2/2024ರ ಬೆಳಿಗ್ಗೆ 6 ಗಂಟೆಯವರೆಗೂ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 2ನೇ ಘಟ್ಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದಾಗಿ ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Drinking water supply cut off in Bengaluru on this day

ಹಾಗಾದರೆ ಬೆಂಗಳೂರಿನ ಯಾವೆಲ್ಲಾ ಸ್ಥಳಗಳಲ್ಲಿ ನೀರು ಸರಬರಾಜು ಆಗುವುದಿಲ್ಲ ಎಂದು ತಿಳಿಯುವುದಾದರೆ- 4ನೇ ಬ್ಲಾಕ್ ನಂದಿನಿ ಲೇಔಟ್, ಬಿಹೆಚ್‌ಇಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸ್ ನಗರ, ಜೈಮಾರುತಿ ನಗರ ಮತ್ತು ಬಡಾವಣೆ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ, ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್‌,ಜಿ,ಇ,ಎಫ್ ಲೇಔಟ್ ಸೇರಿದಂತೆ ನಗರದ ಇನ್ನಿತರ ಪ್ರದೇಶಗಳಲ್ಲಿ ಕುಡಡಿಯುವ ನೀರು ಪೂರೈಕೆ ಇರುವುದಿಲ್ಲ.

ಪಾರ್ಟ್ ಆಫ್‌ ಐ.ಡಿ.ಐ ಲೇಔಟ್, 1ನೇ ಮತ್ತು 2ನೇ ಹಂತ ರೈಲ್ವೇ ಲೇಔಟ್, ಆರ್‌ಹೆಚ್‌,ಬಿ,ಸಿ,ಎಸ್ ಲೇಔಟ್ 1ನೇ ಮತ್ತು 2ನೇ ಸ್ಟೇಜ್, ಭೈರವೆಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಣಪಾಳ್ಯ, ಡಿ ಗ್ರೂಪ್ ಲೇಔಟ್, ಕಬ್ಬೇಹಳ್ಳ, ಚಂದನ ಲೇಔಟ್, ಪಾರ್ಟ್ ಆಫ್‌ ಪಾಪರೆಡ್ಡಿಪಾಳ್ಯ, ಬಿ.ಇ.ಎಲ್ 1ನೇ ಮತ್ತು 2ನೇ ಹಂತ, ಬಿಲೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ, ಟೆಲಿಕಾಂ ಲೇಔಟ್‌ಗಳಲ್ಲಿ ಕುಡಿಯುವ ನೀರು ಪೂರಕೆ ಇರುವುದಿಲ್ಲ.

ವಿನಾಯಕ ಲೇಔಟ್, ಬಾಲಾಜಿ ಲೇಔಟ್, ವಿಶ್ವೇಶರಯ್ಯ ಲೇಔಟ್, ಮುನೇಶ್ವರನಗರ, ಪ್ರಕೃತಿನಗರ, ನಿಸರ್ಗ ಲೇಔಟ್, ಚೊಕ್ಕಸಂದ್ರ, ನಾಗಪ್ಪ ಲೇಔಟ್, ಕೃಷ್ಣಪ್ಪ ಗಾರ್ಡನ್, ಕೆಂಗೇರಿ ಉಪನಗರ, ಕೆಂಗೇರಿ, ವಿದ್ಯಾಪೀಠ, ವಿದ್ಯಾಗಿರಿ ಲೇಔಟ್, ನಾಯಂಡಹಳ್ಳಿ, ತಿಗಳರ ತೋಟ, ಕಾವೇರಿನಗರ, ಮಾರುತಿ ನಗರ, ಕಾಪಾಕ್ಷಿಪಾಳ್ಯ, ಪಟ್ಟೇಗಾರಪಾಳ್ಯ, ಗೋವಿಂದರಾಜನಗರ, ಕೆನರಾ ಬ್ಯಾಂಕ್ ಕಾಲೋನಿಯಲ್ಲಿ ನೀರು ಪೂರೈಕೆ ಇರುವುದಿಲ್ಲ.

ಜೊತೆಗೆ ಭೈರವೇಶ್ವರನಗರ, ಕೊಕೋನಟ್ ಗಾರ್ಡನ್, ಆದರ್ಶನಗರ, ಕಲ್ಯಾಣನಗರ, ಸಂಜೀವಿನಿನಗರ, ಬಿಡಿಎ ಕಾಲೋನಿ, ಕನಕನಗರ, ಸಂಜೀವಿನಿನಗರ, ಕಲ್ಯಾಣನಗರ, ಯಲಹಂಕ, ವಿದ್ಯಾರಣ್ಯಪುರ, ಜನತಾ ಕಾಲೋನಿ, ಶಾಂತಿನಗರ, ಅಂಬೇಡ್ಕರ್ ನಗರ, ಅಗ್ರಹಾರ ದಾಸರಳ್ಳಿ ಮತ್ತಿತರೆಡೆ ನೀರು ಪೂರೈಕೆ ಇರುವುದಿಲ್ಲ.

ಬಸವಣ್ಣ ನಗರ ರೋಡ್, ವಿನಾಯಕ ಲೇಔಟ್, ಮುನಿಯಪ್ಪ ರೋಡ್, ಮಹೇಶ್ವರಿ ನಗರ, ಪಾಪರೆಡ್ಡಿ ಲೇಔಟ್, ಮರಿಯಮ್ಮ ಟೆಂಪಲ್, ಮಸೀದಿ ರೋಡ್, ಇಸ್ರೋ ಲೇಔಟ್, ಮಂಜುನಾಥ್ ಲೇಔಟ್, ಹೊಸಪಾಳ್ಯ, ಇಂದಿರಾಗಾಂಧಿ ಸ್ಟ್ರೀಟ್, ಅಣ್ಣಸಂದ್ರ ಲೇಔಟ್, ಪ್ರಗತಿ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+