ಬೆಂಗಳೂರಿನಲ್ಲಿ ವಯೋವೃದ್ಧ ವಿಜ್ಞಾನಿ ದಂಪತಿ ಹತ್ಯೆ

drdo-scientist-pattabhiraman-wife-indira-murdered-ramamurthy-nagar-bng
ಬೆಂಗಳೂರು, ಮಾರ್ಚ್6- ಬೆಂಗಳೂರಿನಲ್ಲಿ ಒಂಟಿಯಾಗಿದ್ದ ವಯೋವೃದ್ಧ ದಂಪತಿಯ ಹತ್ಯೆ ನಡೆದಿದೆ. ರಾಮಮೂರ್ತಿನಗರದಲ್ಲಿ ತಮ್ಮ ದೊಡ್ಡ ಬಂಗಲೆಯಲ್ಲಿ ವಾಸವಾಗಿದ್ದ ಡಿಆರ್ ಡಿಒ ಸಂಸ್ಥೆಯ ನಿವೃತ್ತ ವಿಜ್ಞಾನಿ ಮತ್ತು ಅವರ ಪತ್ನಿಯನ್ನು ಹಂತಕರು ಮಂಗಳವಾರ ಸಾಯಂಕಾಲ ಹತ್ಯೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

73 ವರ್ಷದ ಪಟ್ಟಾಭಿರಾಮನ್ ನಾಯ್ಡು ಮತ್ತು ಅವರ ಪತ್ರನಿ ಇಂದಿರಾ (67) ಮೃತಪಟ್ಟ ದುರ್ದೈವಿಗಳು. ನಗ, ನಾಣ್ಯ ದೋಚಲು ಈ ಹತ್ಯೆಗಳು ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರಾದರೂ ಬೇರೆಯದೇ ಕಾರಣವೂ ಬರಬಹುದಾ? ಎಂದೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭೀಕರವಾಗಿ ಹತ್ಯೆಗೀಡಾಗಿರುವ ಪಟ್ಟಾಭಿರಾಮನ್ ನಾಯ್ಡು ಮನೆಯಲ್ಲಿ ಅಮೂಲ್ಯ ವಸ್ತುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಪಟ್ಟಾಭಿರಾಮನ್ ಕುಟುಂಬದ ಮೂಲ ತಿರುಪತಿ.

ಮಾರತ್ ಹಳ್ಳಿಯ ನ್ಯೂ ಹೊರೈಝನ್ ಕಾಲೇಜಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿರುವ ಪಟ್ಟಾಭಿರಾಮನ್ ಅವರ ಪುತ್ರ ಚಂದ್ರಶೇಖರ್ (45) ಅವರು ರಾತ್ರಿ 8 ಗಂಟೆಗೆ ಮನೆಗೆ ಮರಳಿದಾಗ ಹತ್ಯೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಅರೆಬರೆ ಮುಚ್ಚಿದ್ದ ಬಾಗಿಲನ್ನು ದೂಡಿಕೊಂಡು ಒಳಬಂದು ನೋಡಿದಾಗ ಚಂದ್ರಶೇಖರಗೆ ಅವರ ಅಪ್ಪ-ಅಮ್ಮ ಸಾವಿಗೀಡಾಗಿರುವುದು ಅರಿವಿಗೆ ಬಂದಿದೆ.

ವೃದ್ಧ ದಂಪತಿಯನ್ನು ಬಲವಾಗಿ ತಲೆಗೆ ಹೊಡೆದು ಸಾಯಿಸಲಾಗಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಂತಕರು ಸುಲಭವಾಗಿ ಮನೆಯೊಳಕ್ಕೆ ಪ್ರವೇಶಿಸಿದ್ದಾರೆ. ಹಾಗಾಗಿ ಪರಿಚಿತರದೇ ಕೈವಾಡವಿರಬಹುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಹತ್ಯೆಗೀಡಾದ ದಂಪತಿ ಆಸ್ತಿ ವಿಷಯದಲ್ಲಿ ಸಮೀಪದ ಬಂಧುಗಳೊಂದಿಗೆ ತಕರಾರು ಹೊಂದಿದ್ದರು. ಜತೆಗೆ, ಪುತ್ರ ಚಂದ್ರಶೇಖರ್ ಸಹ ತನ್ನ ಅಪ್ಪ-ಅಮ್ಮನೊಂದಿಗೆ ವೈಮನಸ್ಯ ಹೊಂದಿದ್ದ ಎಂದು ತಿಳಿದುಬಂದಿದೆ.

ಸುಮಾರು 10 ವರ್ಷಗಳ ಹಿಂದೆ DRDO ಸೇವೆಯಿಂದ ನಿವೃತ್ತಿಯಾಗಿದ್ದ ಪಟ್ಟಾಭಿರಾಮನ್ ನಾಯ್ಡು ರಾಮಮೂರ್ತಿನಗರದ OMBR Layoutನಲ್ಲಿ ಮನೆ ಕಟ್ಟಿಕೊಂಡು ಕೆಳಗಿನ ಮನೆಯಲ್ಲಿ ತಾವಿದ್ದು, ಮೇಲಿನ ಅಂತಸ್ತನ್ನು ಒಂದು ತಿಂಗಳ ಹಿಂದೆ ಬಾಡಿಗೆಗೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+