60ಸೆಕೆಂಡ್ಸ್ ನೌ ಅಪ್ಲಿಕೇಷನ್ : ಇದು ಕನ್ನಡ ಸುದ್ದಿಗಳ ರಾಶಿ
ಬೆಂಗಳೂರು, ಜೂ.3: ಯಾವ ದಿನಪತ್ರಿಕೆಯಲ್ಲಿ ಏನು ಸುದ್ದಿ ಬಂದಿದೆ. ವೆಬ್ ಸೈಟ್ ಗಳಲ್ಲಿ ಏನು ಲೇಟೆಸ್ಟ್ ಅಪ್ಡೇಟ್ ಇದೆ. ಎಲ್ಲಾ ಪತ್ರಿಕೆ, ವೆಬ್ ಗಳನ್ನು ಒಂದೆಡೆ ನೋಡಲು ಸಾಧ್ಯವೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಒನ್ ಇಂಡಿಯಾ ಸಂಸ್ಥೆಯ ಹೊಸ ಉತ್ಪನ್ನ '60 ಸೆಕೆಂಡ್ಸ್' ಅಪ್ಲಿಕೇಷನ್ ಮೂಲಕ ಕ್ಷಣ ಕ್ಷಣದ ಮಾಹಿತಿ ಪಡೆದುಕೊಳ್ಳಬಹುದು.
ಇತ್ತೀಚಿನ ಸುದ್ದಿಗಾಗಿ ನಿಮ್ಮ ನೆಚ್ಚಿನ ವೆಬ್ ಸೈಟ್ ಗಳಲ್ಲಿ ಹುಡುಕಾಟ ನಡೆಸುವ ತೊಂದರೆ ತಪ್ಪುತ್ತದೆ. ಒನ್ ಇಂಡಿಯಾ ಸಂಸ್ಥೆ ಉತ್ಪನ್ನ 60SecondsNow ಅಪ್ಲಿಕೇಷನ್ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನಿನಲ್ಲಿ ಹಾಕಿಕೊಂಡರೆ ಸಾಕು ಜನಪ್ರಿಯ ಮಾಧ್ಯಮ ಸಂಸ್ಥೆಗಳು ನೀಡುವ ಸುದ್ದಿಗಳನ್ನು ಓದಬಹುದು.
60SecondsNow ಅಪ್ಲಿಕೇಷನ್ ನಿಮ್ಮ ಮೊಬೈಲಿಗೆ ಇಳಿಸಿಕೊಳ್ಳುವುದು ಹೇಗೆ? ಏನೆಲ್ಲ ಇಲ್ಲಿ ಓದಬಹುದು? ಯಾವ ಯಾವ ಭಾಷೆಯಲ್ಲಿ ಈ ಅಪ್ಲಿಕೇಷನ್ ಲಭ್ಯ? ಸುದ್ದಿ ಎಲ್ಲೆಲ್ಲಿ ಹಂಚಬಹುದು ಎಂಬ ಮಾಹಿತಿ ನಿಮ್ಮ ಮುಂದಿದೆ...
[ಈ ಅಪ್ಲಿಕೇಷನ್ ನಿಮ್ಮ ಮೊಬೈಲ್ ಫೋನಿಗೆ ಡೌನ್ ಲೋಡ್ ಮಾಡಿಕೊಳ್ಳಿ]
* ಗೂಗಲ್ ಪ್ಲೇ ಸ್ಟೋರ್ ನಲ್ಲಿ ನ್ಯೂಸ್ ಅಂಡ್ ಮ್ಯಾಗಜೀನ್ ವಿಭಾಗದಲ್ಲಿ 60 Seconds Now ಅಪ್ಲಿಕೇಷನ್ ಇದೆ. ಸರ್ಚ್ ಬಾಕ್ಸ್ ನಲ್ಲಿ 60 Seconds Now ಅಥವಾ Oneindia ಎಂದು ಹಾಕಿ ಪಡೆದುಕೊಳ್ಳಬಹುದು.
* ಸುಮಾರು 4.4 ಎಂಬಿ ಗಾತ್ರ ಈ ಸಾಫ್ಟ್ ವೇರ್ ಅಪ್ಲಿಕೇಷನ್ ಎಲ್ಲಾ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಫೋನ್ ನಲ್ಲಿ ಇಳಿಸಿಕೊಳ್ಳಬಹುದಾಗಿದೆ.
* ಆಂಡ್ರಾಯ್ಡ್ ಓಸ್ 2.3 ಹಾಗೂ ಮೇಲ್ಪಟ್ಟ ಓಸ್ ಬಳಕೆ ಮಾಡುತ್ತಿರುವ ಎಲ್ಲಾ ಸ್ಮಾರ್ಟ್ ಫೋನ್ ನಲ್ಲಿ ಬಳಸಬಹುದು.
* ವಿಂಡೋಸ್ ಫೋನ್ ಗಳಲ್ಲಿ ಸದ್ಯಕ್ಕೆ ಲಭ್ಯವಿಲ್ಲ. [ಐಒಎಸ್ ಸಾಧನಕ್ಕೆ ಡೌನ್ ಲೋಡ್ ಮಾಡಿಕೊಳ್ಳಿ]
* ರಾಜ್ಯ, ನಗರ, ಅಂತಾರಾಷ್ಟ್ರೀಯ, ಚಲನಚಿತ್ರ, ಕ್ರೀಡೆ, ವಾಣಿಜ್ಯ ಹೀಗೆ ಆಯಾ ವಿಭಾಗದಲ್ಲಿ ವಿವಿಧ ವೆಬ್ ಸೈಟ್ ಗಳಿಂದ ಸಿಗುವ ಆ ಕ್ಷಣದ ಸುದ್ದಿ ನೀವು ಓದಬಹುದು.
* ಕನ್ನಡ ಪ್ರಭ, ವಿಜಯಕರ್ನಾಟಕ, ವಿಜಯವಾಣಿ, ಅವಧಿ, ಉದಯವಾಣಿ, ಈ ಸಂಜೆ ಅಲ್ಲದೆ ಯೂನಿಕೋಡ್ ಬಳಕೆ ಮಾಡುವ ಯಾವುದೇ ವೆಬ್ ಸೈಟ್ ನ ಸುದ್ದಿಯನ್ನು ಇಲ್ಲೇ ಕಾಣಬಹುದು.
* ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಬೆಂಗಾಳಿ, ಮರಾಠಿ, ಗುಜರಾತಿ, ಮಲಯಾಳಂನಲ್ಲಿ ಸದ್ಯಕ್ಕೆ ಅಪ್ಲಿಕೇಷನ್ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳನ್ನು ಅಳವಡಿಸಲಾಗುತ್ತಿದೆ.
* ಅಪ್ಲಿಕೇಷನ್ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಇಮೇಲ್ ಮಾಡಲು ವಿಳಾಸ: [email protected]
ಈ ಅಪ್ಲಿಕೇಷನ್ ನಿಮ್ಮ ಮೊಬೈಲ್ ಫೋನಿಗೆ ಇಳಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
* ಈ ಅಪ್ಲಿಕೇಷನ್ ನಲ್ಲಿ ಓದಿದ ಸುದ್ದಿಯನ್ನು ಎಸ್ ಎಂಎಸ್, ವಾಟ್ಸಪ್, ಇಮೇಲ್, ಫೇಸ್ ಬುಕ್ ಅಥವಾ ಇನ್ನಿತರ ಜಾಲ ತಾಣಗಳಿಗೆ ಸುಲಭವಾಗಿ ಹಂಚಬಹುದು.
(ಒನ್ ಇಂಡಿಯಾ ಸುದ್ದಿ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ














Click it and Unblock the Notifications