Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಮುರುಘಾಶ್ರೀಗಳ ಅರ್ಥಪೂರ್ಣ ನಾಗರಪಂಚಮಿ

ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಿದ ಶಿವಮೂರ್ತಿ ಮುರುಘಾ ಶರಣರು.

ಬೆಂಗಳೂರು, ಜುಲೈ 27: ನಾಗರ ಪಂಚಮಿಯಂದು ಹುತ್ತಕ್ಕೆ ಹಾಲು ಎರೆಯುವ ಬದಲು ಅದೇ ಹಾಲನ್ನು ಮಕ್ಕಳಿಗೆ, ರೋಗಿಗಳಿಗೆ ನೀಡಿದರೆ ಅದೇ ಸಾರ್ಥಕವಾದ ಪೂಜೆ ಎಂದು ಮುರುಘಾ ಶರಣರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು, ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

Don't pour milk on idols on Nagarapanchami, give it to patients or children: Murugha Shree

ನಮ್ಮಲ್ಲಿ ತಲತಲಾಂತರಗಳಿಂದಲೂ ನಾಗರ ಪಂಚಮಿಯಂದು ಹುತ್ತಕ್ಕೆ, ನಾಗರ ಕಟ್ಟೆಗಳಿಗೆ ಹಾಲೆರೆಯುವ ಪದ್ಧತಿಯಿದೆ. ಅಸಲಿಗೆ ಹುತ್ತದಲ್ಲಿರುವ ಹಾವು ಹಾಲು ಕುಡಿಯುವುದಿಲ್ಲ. ಇನ್ನು, ನಾಗರ ಕಟ್ಟೆಗೆ ಸುರಿವ ಹಾಲು ಚರಂಡಿ ಹೋಗುತ್ತದೆ. ಇದು ಮೌಢ್ಯ.

Don't pour milk on idols on Nagarapanchami, give it to patients or children: Murugha Shree

ಹಾಗೆ, ವ್ಯರ್ಥಗೊಳಿಸುವ ಹಾಲನ್ನು ಮಕ್ಕಳಿಗೆ, ರೋಗಿಗಳಿಗೆ ಅಥವಾ ಹಾಲಿನ ಅವಶ್ಯಕತೆಯಿರುವ ದುರ್ಬಲರಿಗೆ ಕೊಟ್ಟರೆ ಅವರಿಗೆ ಅದು ಅನುಕೂಲವಾಗುತ್ತದೆ. ನಾಗರ ಪಂಚಮಿ ಆಚರಣೆಯನ್ನು ಅರ್ಥಗರ್ಭಿತವಾಗಿಸಿದಂತಾಗುತ್ತದೆ.

ನಾನು ಕಳೆದ 15 ವರ್ಷಗಳಿಂದಲೂ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನಾಗರ ಪಂಚಮಿಯಂದು ಹಾಲು, ಹಣ್ಣು ವಿತರಿಸುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ ಎಂದು ಶರಣರು ತಿಳಿಸಿದರು.

Don't pour milk on idols on Nagarapanchami, give it to patients or children: Murugha Shree

ಆಸ್ಪತ್ರೆಯಲ್ಲಿ ಹೀಗೆ ರೋಗಿಗಳಿಗೆ, ಮಕ್ಕಳಿಗೆ ಹಾಲು ವಿತರಿಸಿ ಶತಮಾನಗಳ ಮೌಢ್ಯತೆಯಿಂದ ಹೊರಬರಬೇಕು ಎಂದು ಶರಣರು ಇದೇ ವೇಳೆ ಕರೆ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+