ರಾಜಕಾರಣಿಯಾಗಿ ರಾಜಕಾರಣಿಗಳನ್ನೇ ಮೂದಲಿಸಿದ ಜಿ.ಟಿ.ದೇವೇಗೌಡ
ಬೆಂಗಳೂರು, ಆಗಸ್ಟ್ 09: ಸಕ್ರಿಯ ರಾಜಕಾರಣಿಯಾಗಿದ್ದುಕೊಂಡು ರಾಜಕಾರಣಿಗಳನ್ನೇ ಮೂದಲಿಸಿದ್ದಾರೆ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ.
ಯಲಹಂಕ ಸಮೀಪದ ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳಿಂದ ದೇಶ ಉದ್ಧಾರ ಸಾಧ್ಯವಿಲ್ಲ. ವಿದ್ಯಾರ್ಥಿಗಳಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗೆ ಪ್ರೀತಿ ಪಾಠ ಮಾಡಿದ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಇಷ್ಟಕ್ಕೆ ಸುಮ್ಮನಾಗದ ಜಿ.ಟಿ.ದೇವೇಗೌಡ ಅವರು, ರಾಜಕಾರಣಿಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಎಂಬ ಉಚಿತ ಸಲಹೆಯನ್ನೂ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಆ ಮೂಲಕ ರಾಜಕಾರಣಿಗಳು ನಂಬಿಕೆ ಅರ್ಹರಲ್ಲ ಎಂದು ಹೇಳಿದ್ದಾರೆ.
ಸರ್ಕಾರಿ ಕಾಲೇಜುಗಳ ಗುಣಮಟ್ಟ ಕಡಿಮೆ ಆಗಿರುವುದಕ್ಕೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿದ ದೇವೇಗೌಡ ಅವರು, ಎಲ್ಲಾ ಅನುದಾನ ನೀಡಿದರೂ ಸಹ ಸರ್ಕಾರಿ ಕಾಲೇಜುಗಳು ಅಭಿವೃದ್ಧಿ ಆಗದ್ದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂದರು.
ಮತ್ತೆ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಜಿ.ಟಿ.ದೇವೇಗೌಡ
ಖಾಸಗಿ ಕಾಲೇಜಿನಲ್ಲಿ ಎಲ್ಲ ಸೌಲಭ್ಯಗಳೂ ಇವೆ. ಅವುಗಳ ಸದ್ಭಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡುವಂತೆ ದೇವೇಗೌಡ ಹೇಳಿದರು. ವಿದ್ಯಾರ್ಥಿಗಳು ಕಲಾಂ ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದೂ ಅವರು ಉಪದೇಶಿಸಿದರು.