Video: ಬೆಂಗಳೂರಿನ ಈ ಕಳ್ಳನಿಗೆ TVS XL ಬೈಕ್ಗಳೇ ಟಾರ್ಗೆಟ್!
ಬೆಂಗಳೂರು, ಜುಲೈ 06: ಸಿಲಿಕಾನ್ ಸಿಟಿಯಲ್ಲಿ ಚಿತ್ರ ವಿಚಿತ್ರ ಕಳ್ಳರ ಬಗ್ಗೆ ನೋಡಿರುತ್ತೀರೀ ಹಾಗೂ ಕೇಳಿರುತ್ತೀರಿ. ಬೆಂಗಳೂರಿನಲ್ಲಿ ಸರಗಳ್ಳರಿಂದ ಹಿಡಿದು ದುಬಾರಿ ಬೈಕ್ ಕಳ್ಳರವರೆಗೂ ಒಬ್ಬರಿಗಿಂತ ಒಬ್ಬರು ಚಾಲಾಕಿಗಳೇ. ಆದರೆ ಇಂಥವರ ಮಧ್ಯೆ ಈ ಕಳ್ಳನಿಗೆ ಕೇವಲ TVS XL ಬೈಕ್ ಗಳ ಮೇಲೇ ಕಣ್ಣು.
ದುಬಾರಿ ದ್ವಿಚಕ್ರ ವಾಹನಗಳು ಕಣ್ಣು ಎದುರಿಗೇ ಇದ್ದರೂ ಈ ಕಳ್ಳ ಅವುಗಳನ್ನು ಎಗರಿಸುತ್ತಿರಲಿಲ್ಲ. ದೊಡ್ಡ ದೊಡ್ಡ ಬೈಕ್ ಗಳನ್ನು ಮುಟ್ಟದ ಈ ಆಸಾಮಿಗೆ ಟಿವಿಎಸ್ ಎಕ್ಸ್ ಎಲ್ ಎಂದರೆ ಅದೇನೋ ಒಂದು ರೀತಿ ಪ್ಯಾರ್ ಅಂತೆ.
ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ತನ್ನ ಕೈಚಳಕ ತೋರುತ್ತಿದ್ದ ಟಿವಿಎಸ್ ಎಕ್ಸ್ ಎಲ್ ಕಳ್ಳನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ರಾಜಣ್ಣನಿಂದ 3 ಲಕ್ಷ ಮೌಲ್ಯದ 7 ಟಿವಿಎಸ್ ಎಕ್ಸ್ ಎಲ್ ಬೈಕ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪೊಲೀಸರು ನಡೆಸಿರುವ ವಿಚಾರಣೆ ವೇಳೆ ಆರೋಪಿ ರಾಜಣ್ಣ ನೀಡಿರುವ ಹೇಳಿಕೆಗಳು ಎಂಥವರಿಗೂ ಬೆರಗು ಮೂಡಿಸುತ್ತವೆ. ಟಿವಿಎಸ್ ಎಕ್ಸ್ ಎಲ್ ದ್ವಿಚಕ್ರ ವಾಹನಗಳನ್ನಷ್ಟೇ ಕದಿಯುತ್ತಿದ್ದ ಆರೋಪಿ ನೀಡಿರುವ ಕಾರಣಗಳು ಬಲು ರೋಚಕ ಹಾಗೂ ಅಚ್ಚರಿ ಮೂಡಿಸುವಂತಿವೆ.

1ನೇ ಕಾರಣ
ಪೊಲೀಸ್ ವಿಚಾರಣೆ ವೇಳೆ ಆರೋಪಿ ರಾಜಣ್ಣ ತಾನು ಟಿವಿಎಸ್ ಎಕ್ಸ್ ಎಲ್ ಬೈಕ್ ಅನ್ನೇ ಹೆಚ್ಚಾಗಿ ಕದಿಯುತ್ತಿರುವುದಕ್ಕೆ ವಿಚಿತ್ರ ಕಾರಣವೊಂದನ್ನು ಹೇಳಿದ್ದಾರೆ. ಈ ಪೈಕಿ ಮೊದಲ ಕಾರಣ ಆತನಿಗೆ ದುಬಾರಿ ಬೈಕ್ ಗಳನ್ನು ಚಾಲನೆ ಮಾಡುವುದಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಚಾಲನೆ ಮಾಡುವುದಕ್ಕೆ ಬರುವ ಈ ಬೈಕ್ ಅನ್ನು ಮಾತ್ರ ಕಳ್ಳತನ ಮಾಡುತ್ತಿರುವುದಾಗಿ ಬಾಯಿ ಬಿಟ್ಟಿದ್ದಾನೆ.

2ನೇ ಕಾರಣ
ದುಬಾರಿ ಹಾಗೂ ಗೇರ್ ಯುಳ್ಳ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಈ ಬೈಕ್ ಅನ್ನು ಕದಿಯುವುದು ತುಂಬಾ ಸುಲಭವಾಗಿರುತ್ತದೆ. ಈ ಕಾರಣದಿಂದಾಗಿಯೇ ಟಿವಿಎಸ್ ಎಕ್ಸ್ ಎಲ್ ಬೈಕ್ ಅನ್ನು ಹೆಚ್ಚಾಗಿ ಕದಿಯುತ್ತಿದ್ದೆನು ಎಂದು ಆರೋಪಿ ಹೇಳಿಕೊಂಡಿದ್ದಾನೆ.

3ನೇ ಕಾರಣ
ಟಿವಿಎಸ್ ಎಕ್ಸ್ ಎಲ್ ಕಡಿಮೆ ಬೆಲೆಯ ಬೈಕ್ ಆಗಿರುವುದರಿಂದ ಪೊಲೀಸರು ಈ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಕಳ್ಳತನದ ಮಾಡಿದ ನಂತರದಲ್ಲಿ ಹೆಚ್ಚಿನ ಅಪಾಯ ಇರುವುದಿಲ್ಲ ಎನ್ನುವುದು ಕಳ್ಳನ ಲೆಕ್ಕಾಚಾರ.

4ನೇ ಕಾರಣ
ಟಿವಿಎಸ್ ಎಕ್ಸ್ ಎಲ್ ಕದಿಯುವುದಕ್ಕೆ ಈ ಮೂರು ಕಾರಣಗಳ ಜೊತೆಗೆ ಮತ್ತೊಂದು ಪ್ರಮುಖ ಕಾರಣವಿದೆ. ಅದು ಕಡಿಮೆ ಬೆಲೆಯ ಬೈಕ್ ಅನ್ನು ಕದ್ದ ನಂತರದಲ್ಲಿ ಅದನ್ನು ಕಡಿಮೆ ಬೆಲೆ ಮಾರಾಟ ಮಾಡುವುದು ಬಲು ಸುಲಭವಾಗಿರುತ್ತದೆ. ಈ ಬೈಕ್ ಮಾರಾಟ ಮಾಡುವುದು ಅಷ್ಟೇನು ಕಷ್ಟವಲ್ಲ ಎಂದು ಸ್ವತಃ ಆರೋಪಿ ರಾಜಣ್ಣ ಪೊಲೀಸ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications