1000 ಸ್ಮಾರ್ಟ್ ಕಾರ್ಡ್, 47 ಸಾವಿರ ಜನ... ಇದು ಮೆಟ್ರೋ ಮಹಿಮೆ!
ಬೆಂಗಳೂರು, ಜೂನ್ 19: ಸದ್ಯಕ್ಕೆ ಬೆಂಗಳೂರಿನ ಜನರ ಬಾಯಲ್ಲಿ ಮೆಟ್ರೋದ್ದೇ ಜಪ! ಜೂನ್ 17 ರಂದು ಉದ್ಘಾಟನೆಗೊಂಡ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ ನಮ್ಮ ಮೆಟ್ರೋ ಗ್ರೀನ್ ಲೈನ್, ಜೂನ್ 18 ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿತ್ತು. ಮೊಟ್ಟ ಮೊದಲ ಬಾರಿಗೆ ಈ ಹಾದಿಯಲ್ಲಿ ಪ್ರಯಾಣಿಸುವುದಕ್ಕಾಗಿ ನಿನ್ನೆ (ಜೂನ್ 18) ಹಲವು ಮೆಟ್ರೋ ನಿಲ್ದಾಣಗಳಲ್ಲಿ ಜನಜಾತ್ರೆಯೇ ನೆರೆದಿತ್ತು.
ಭಾನುವಾರ ಬೇರೆ! ಭಾರತ-ಪಾಕಿಸ್ತಾನ ಪಂದ್ಯದ ಹಣೆಬರಹವನ್ನು ಮೊದಲೇ ಊಹಿಸಿದ್ದ ಜನರೆಲ್ಲ, ಟಿವಿ ಮುಂದೆ ಕೂತು ಕಾಲಹರಣ ಮಾಡೋದು ಬೇಡ ಅಂತ ಮೆಟ್ರೋ ಪ್ರಯಾಣದ ಅನುಭವ ಪಡೆಯುವುದಕ್ಕೆ ಹೊರಟಿದ್ದರು.
ಅಪರಾಹ್ನ 4 ಗಂಟೆಗೆ ಕನಕಪುರ ರಸ್ತೆಯ ಯಲಚೇನಹಳ್ಳಿಯಿಂದ ಹೊರಟ ಮೊದಲ ಮೆಟ್ರೋ ರೈಲಿನಲ್ಲಿ ಹೆಚ್ಚು ಜನ ಕಂಡುರಲಿಲ್ಲವಾದರೂ, ನಂತರದ ಎಲ್ಲಾ ರೈಲುಗಳಲ್ಲೂ ತುಂಬಿ ತುಳುಕುತ್ತಿದ್ದ ಜನರು, ಬೆಂಗಳೂರಿಗರ ಮೆಟ್ರೋ ಪ್ರೇಮವನ್ನು ಪ್ರತಿನಿಧಿಸುತ್ತಿದ್ದರು. ನಿನ್ನೆ ಒಂದೇ ದಿನ 47 ಸಾವಿರಕ್ಕೂ ಹೆಚ್ಚು ಜನ ಈ ಮಾರ್ಗದಲ್ಲಿ ಸಂಚರಿಸಿದ್ದು, ಈ ಭಾಗಕ್ಕೆ ಮೆಟ್ರೋ ಅಗತ್ಯವೆಷ್ಟಿತ್ತು ಅನ್ನುವುದಕ್ಕೆ ಸಾಕ್ಷಿ.
ಈಗಿನ್ನೂ ಮೆಟ್ರೋ ಕಾರ್ಯಾರಂಭಮಾಡಿದ್ದು, ಕೆಲವೇ ತಿಂಗಳುಗಳಲ್ಲಿ ಈ ಭಾಗದ ಮೆಟ್ರೋ ಪ್ರಯಾಣಿಕರ ಸಂಖ್ಯೆ 3 ಲಕ್ಷವನ್ನು ಮೀರಬಹುದು ಎಂದು ಅಂದಾಜಿಸಲಾಗಿದೆ.

ಮೊದಲ ಮೆಟ್ರೋ ಪ್ರಯಾಣ!
ಬೆಂಗಳೂರು ಉತ್ತರ -ದಕ್ಷಿಣವನ್ನು ಬೆಸೆಯುವ ನಾಗಸಂದ್ರದಿಂದ ಯಲಚೇನಹಳ್ಳಿ ವರೆಗಿನ 24.2 ಕಿ.ಮೀ. ಮಾರ್ಗದಲ್ಲಿ ಭಾನುವಾರ ಅಪರಾಹ್ನ 4 ರಿಂದ 9ರವರೆಗೆ ಓಡಿದ ಮೆಟ್ರೋ ಟ್ರೇನಿಲ್ಲಿ 47 ಸಾವಿರಕ್ಕೂ ಹೆಚ್ಚು ಜನ ಸಂಚರಿಸಿ ಹೊಸ ಮೆಟ್ರೋ ಮಾರ್ಗದ ಅನುಭವ ಪಡೆದರು.

ಸ್ಮಾರ್ಟ್ ಕಾರ್ಡ್ ಗೆ ಡಿಮ್ಯಾಂಡೋ ಡಿಮ್ಯಾಂಡು
ದಿನಂಪ್ರತಿ ಮೆಟ್ರೋ ಪ್ರಯಾಣ ಮಾಡುವವರು ಟೋಕನ್ ಗಾಗಿ ಕಾಯುವ ಕಷ್ಟವನ್ನು ತಪ್ಪಿಸುವುದಕ್ಕಾಗಿ ಬಿಎಂಆರ್ ಸಿ ಎಲ್ ಸ್ಮಾರ್ಟ್ ಕಾರ್ಡ್ ಅನ್ನು ಸಹ ಪರಿಚಯಿಸಿ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವನ್ನುಂಟುಮಾಡಿದೆ. ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗೆ ಸಂಚರಿಸುವುದಕ್ಕೆ ನಿನ್ನೆ (ಜೂನ್ 18) ಒಂದು ಸಾವಿರಕ್ಕೂ ಹೆಚ್ಚು ಜನ ಸ್ಮಾರ್ಟ್ ಕಾರ್ಡ್ ಖರೀದಿಸಿ ದಾಖಲೆ ಬರದರು. ಈ ಸ್ಮಾರ್ಟ್ ಕಾರ್ಡ್ ಬೆಲೆ 50 ರೂ. ಆಗಿದ್ದು, ನಂತರ 50 ರೂ. ನಿಂದ 1500 ರೂ.ವರೆಗೂ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಮೆಟ್ರೋ ಸ್ಟೇಶನ್ ನಲ್ಲಿ ಮಾತ್ರವಲ್ಲದೆ, ಬಿಎಂಆರ್ ಸಿಎಲ್ ವೆಬ್ ಸೈಟ್ ಮೂಲಕವೂ ಈ ಸ್ಮಾರ್ಟ್ ಕಾರ್ಡ್ ಪಡೆಯಬಹುದು.

ಸ್ಮಾರ್ಟ್ ಕಾರ್ಡ್ ಗೆ ಶೇ. 15 ರಿಯಾಯಿತಿ
ಸ್ಮಾರ್ಟ್ ಕಾರ್ಡ್ ಗೆ ಟೋಕನ್ ಗಿಂತ ಶೇ.15 ರಷ್ಟು ರಿಯಾಯಿತಿ ಸಹ ಇರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ಕ್ಯಾಶ್ ಲೆಸ್ ಪದ್ಧತಿಗೆ ಪ್ರೋತ್ಸಾಹ ನೀಡುವ ಉದ್ದೇಶವೂ ಇದರ ಹಿಂದಿದೆ.

ಎಲ್ಲಾ ಸ್ಟೇಶನ್ ಗಳಲ್ಲೂ ಜನಜಾತ್ರೆ
ಬೆಂಗಳೂರು ಉತ್ತರದ ನಾಗಸಂದ್ರ ದಿಂದ ದಕ್ಷಿಣದ ಯಲಚೇನಹಳ್ಳಿ ವರೆಗಿನ ಗ್ರೀನ್ ಲೈನ್ ಮಾರ್ಗದ ಒಟ್ಟು 24 ಸ್ಟೇಶನ್ ಗಳಲ್ಲೂ ಜನಜಂಗುಳಿ ಕಂಡುಬರುತ್ತಿದ್ದುದು ಸಾಮಾನ್ಯವಾಗಿತ್ತು. ಟೋಕನ್ ಖರೀದಿಸುವುದಕ್ಕೆಂದೇ ನೂರಾರು ಜನರು ಟಿಕೇಟ್ ಕೌಂಟರ್ ಬಳಿ ಸಾಲಿನಲ್ಲಿ ನಿಂತಿದ್ದುದು ಕಂಡುಬಂತು.
-
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ











Click it and Unblock the Notifications