ಯವನಿಕಾದಲ್ಲಿ ಅಂಜಲಿ ನಿರ್ದೇಶಿತ 'ಮೌನದಿಂದ ನೃತ್ಯಕ್ಕೆ'
ಬೆಂಗಳೂರು, ಡಿಸೆಂಬರ್ 02 : ಕಳೆದ ಒಂದು ದಶಕದಿಂದ ಅಬ್ಬರದ ಪ್ರಚಾರದಿಂದ ದೂರವಿದ್ದೇ, ವೀಣಾ ಭಟ್ ಅವರು ನಡೆಸುತ್ತಿರುವ 'ನೃತ್ಯದರ್ಪಣ' ಕಲಾ ಶಾಲೆಯು ನೃತ್ಯ, ನಾಟಕ ಮತ್ತು ಸಂಗೀತ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕೊಡುವುದು ಮಾತ್ರವಲ್ಲ ಕಥಕ್ ನೃತ್ಯ ವಿಭಾಗದಲ್ಲಿ ಹಲವು ಪ್ರಯೋಗಗಳಿಂದ ರಾಜ್ಯದಾದ್ಯಂತ ಜನರ ಮೆಚ್ಚುಗೆ ಗಳಿಸಿದೆ.
'ನೃತ್ಯದರ್ಪಣಕ್ಕಾಗಿ ಅಂಜಲಿ ರಾಮಣ್ಣ ಅವರು ಹಲವು ನೃತ್ಯ ರೂಪಕಗಳನ್ನು ಪರಿಕಲ್ಪಿಸಿ, ರಚಿಸಿ, ನಿರೂಪಿಸಿ, ನಿರ್ದೇಶಿಸಿರುತ್ತಾರೆ. ಅವುಗಳಲ್ಲಿ ಜಯಂತ್ ಕಾಯ್ಕಿಣಿ, ವಿದೂಷಿ ವೈಜಯಂತಿ ಕಾಶಿ, ಹಿರಿಯ ಪತ್ರಕರ್ತ ಭಾಸ್ಕರ್ ರಾವ್, ವಿದ್ವಾನ್ ಹಾಸಣಿಗಿ ಗಣಪತಿ ಭಟ್, ವಿದೂಷಿ ರೊಮೆಲಾ ಮುಖೋಪಾದ್ಯಾಯ್, ವಿದುಷಿ ಶಾಶ್ವತಿ ಸೇನ್, ವಿದೂಷಿ ಶೀಲಾ ಮೆಹ್ತಾ ಇವರುಗಳಿಂದ ಮೆಚ್ಚುಗೆ ಗಳಿಸಿದೆ.

ಬಿರ್ಜು ಮಹರಾಜ್ ಜಿ ಅವರ ಆಶಿರ್ವಾದ ಗಳಿಸಿಕೊಂದ ಕೆಲವು ನೃತ್ಯ ರೂಪಕಗಳೆಂದರೆ;
* 'ನೃತ್ಯ ನುಡಿ ' - ಮೌನಕ್ಕೆ ಮತ್ತು ಕನ್ನಡ ಪಠ್ಯಕ್ಕೆ, ಗೆಜ್ಜೆಯಿಲ್ಲದೆ ಮೊದಲ ಬಾರಿಗೆ ಕಥಕ್ ನೃತ್ಯ ಪ್ರಸ್ತುತ ಪಡಿಸಿದ್ದು.
* 'ಸಾಸಿವೆ ತೆರೆದಿಟ್ಟ ಸತ್ಯ' - ಕನ್ನಡದ ಜಾನಪದ ತ್ರಿಪದಿಗಳನ್ನು ಬಳಸಿಕೊಂಡು ಜಾನಪದ ಶೈಲಿ ಮತ್ತು ಕಥಕ್ ಶೈಲಿಯ ಸಂಯೋಜನೆಯಿದ್ದ ನೃತ್ಯ ರೂಪಕ.
* ಶೇಕ್ಸ್ ಪಿಯರ್ ಸಾನೆಟ್-20 - ಯಕ್ಷಗಾನ, ಕಥಕ್ ಮತ್ತು ಪ್ಲೆಮಿಂಕೋ ಸಂಯೋಜನೆಯ ನೃತ್ಯ ರೂಪಕ.
* ಅನಿಕೇತನ - ಕನ್ನಡ ಜಾನಪದ ಗೀತೆಗಳಿಗೆ ಕಥಕ್ ಶೈಲಿಯ ನೃತ್ಯ ಪ್ರಸ್ತುತಿ. [ಪಂಚಕ್ಷೇತ್ರದ ಸಾಧಕಿ 'ಪಂಚಮಿ'ಗೆ ಪ್ರಪಂಚವೇ ಬೆರಗು]

'ನೃತ್ಯದರ್ಪಣ'ದ ಮುಂದಿನ ಯೋಜನೆಗಳು;
* ನಮ್ಮೊಳಗಿರುವ ಅಪರಿಚಿತ ಗಾಂಧಿ ಮತ್ತು ನಾಚೇ ನಾಚಿಯಾರ್
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಬರಹಗಾರರು ಮತ್ತು ಕಲಾವಿದರ ಬಳಗ ಅವರ ಸಂಯೋಗದಲ್ಲಿ 'ನೃತ್ಯದರ್ಪಣ' ಈಗ ಪ್ರಸ್ತುತ ಪಡಿಸುತ್ತಿದೆ 'ಮೌನದಿಂದ ನೃತ್ಯಕ್ಕೆ' ಕಥಕ್ ಶೈಲಿಯ ನೃತ್ಯ ರೂಪಕ.
ಬ್ರಹ್ಮಾಂಡದ ಪಂಚಭೂತಗಳಲ್ಲೂ ಮೌನವಿದೆ ಆ ಮೌನದಲ್ಲಿ ನೃತ್ಯವಿದೆ ಎನ್ನುವ ಪರಿಕಲ್ಪನೆಗೆ ಅಂಜಲಿ ರಾಮಣ್ಣ ಅವರು ಅಕ್ಷರಗಳನ್ನು ಕೊಟ್ಟು, ಧ್ವನಿಯಾಗಿ, ನಿರೂಪಿಸಿ, ನಿರ್ದೇಶಿಸಿದ್ದಾರೆ ಮತ್ತು ವೀಣಾ ಭಟ್ ಅವರೊಂದಿಗೆ ನೃತ್ಯ ಸಂಯೋಜನೆ ಮತ್ತು ಉಡುಪು ವಿನ್ಯಾಸವನ್ನು ಮಾಡಿರುತ್ತಾರೆ.
ದಿನಾಂಕ : ಡಿಸೆಂಬರ್ 4, 2015, ಶುಕ್ರವಾರ
ಸಮಯ : ಸಂಜೆ 6.30 ಗಂಟೆಗೆ
ಸ್ಥಳ : ಯವನಿಕಾ ಸಭಾಂಗಣ, ನೃಪತುಂಗ ರಸ್ತೆ, ಬೆಂಗಳೂರು.
-
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್










Click it and Unblock the Notifications