Get Updates
Get notified of breaking news, exclusive insights, and must-see stories!

ರಾಜ್ ಪ್ರತಿಮೆಗೆ ಬೆಂಕಿ: 5 ಆಟೋ ಚಾಲಕರ ಬಂಧನ

ಬೆಂಗಳೂರು, ನ. 15: ಇಬ್ಬರು ಚಿತ್ರ ನಟರ ಅಭಿಮಾನಿಗಳು ಪರಸ್ಪರ ಹಲ್ಲೆ ನಡೆಸುವುದು, ಗಲಭೆ ಸೃಷ್ಟಿಸುವುದು ಸಾಮಾನ್ಯವಾಗಿ ಆಂಧ್ರಪ್ರದೇಶದಲ್ಲಿ ಕಂಡುಬರುತ್ತಿದ್ದ ಪ್ರಕರಣ. ಆದರೆ, ಈ ರೋಗ ಕನ್ನಡಿಗರಿಗೂ ಹಬ್ಬಿದೆಯೇ?

ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿರುವ ಡಾ. ರಾಜಕುಮಾರ್ ಪ್ರತಿಮೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ಆರೋಪಿಗಳನ್ನು ನೋಡಿದರೆ ಈ ಅನುಮಾನ ಹುಟ್ಟುತ್ತದೆ. [ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ]

rajkumar

ಈ ಸ್ಥಳದಲ್ಲಿ ಶಂಕರ್‌ನಾಗ್ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್‌ಕುಮಾರ್ ಪ್ರತಿಮೆ ನಿಲ್ಲಿಸಿದ್ದರಿಂದ ಅಮಾಧಾನಗೊಂಡ ಶಂಕರನಾಗ್ ಅಭಿಮಾನಿಗಳು ಬೆಂಕಿ ಹಚ್ಚಿದ್ದಾರೆಂಬ ವದಂತಿ ಸ್ಥಳೀಯರಲ್ಲಿ ಕೇಳಿಬಂದಿತ್ತು. ಈ ಮಾಹಿತಿ ಅನುಸರಿಸಿ ಪೊಲೀಸರು ಶಂಕರನಾಗ್ ಅಭಿಮಾನಿಗಳು ಎನ್ನಲಾದ ಐವರು ಆಟೋ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ತನಿಖೆಯ ನಂತರವೇ ಸತ್ಯ ಹೊರಬರಬೇಕಿದೆ. [ರಾಜ್ ಪ್ರತಿಮೆಗೆ ಬೆಂಕಿ: ಸ್ಥಳೀಯರು ಹೇಳೋದೇನು?]

ಒಂದು ವೇಳೆ ಇದೇ ನಿಜವಾಗಿದ್ದರೆ ಸ್ವರ್ಗದಲ್ಲಿರುವ ಈ ಇಬ್ಬರೂ ಮೇರು ನಟರ ಆತ್ಮಗಳು ನೊಂದುಕೊಳ್ಳುವುದರಲ್ಲಿ ಅನುಮಾನವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+