Cybercrime: 5 ರೂ. ಡಿಟಿಎಚ್ ಟಾಪ್ ಅಪ್ ಮಾಡಲೋಗಿ 1 ಲಕ್ಷ ಕಳೆದುಕೊಂಡ ವ್ಯಕ್ತಿ
ಬೆಂಗಳೂರು, ಮಾರ್ಚ್ 11: 43 ವರ್ಷದ ವ್ಯಕ್ತಿರೊಬ್ಬರು ತಮ್ಮ ಟಿವಿ ಡಿಟಿಎಚ್ ಪ್ಲಾನ್ ಅನ್ನು ಬದಲಿಸಲು 5 ರೂಪಾಯಿ ಟಾಪ್-ಅಪ್ ರೀಚಾರ್ಜ್ ಮಾಡಿಸಲು ಹೋಗಿ 1 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ.
ಟಿವಿ ಡಿಟಿಎಚ್ ಪ್ಲಾನ್ ಅನ್ನು ಬದಲಿಸಲು ಅವರು ಇಂಟರ್ನೆಟ್ನಲ್ಲಿ ಸರ್ಚ್ ಮಾಡುವಾಗ ಕಾಣಿಸಿಕೊಂಡ ಗ್ರಾಹಕ ಸೇವೆ ಸಂಖ್ಯೆಗೆ ಕರೆ ಮಾಡಿದಾಗ ಈ ಅವಘಡ ಸಂಭವಿಸಿದೆ. ಪೂರ್ವ ಸಿಇಎನ್ ಅಪರಾಧ ಪೊಲೀಸರಿಗೆ ನೀಡಿದ ದೂರಿನಲ್ಲಿ ಹಣ ಕಳೆದುಕೊಂಡ ವ್ಯಕ್ತಿಯು ತಮ್ಮ ಡಿಟಿಎಚ್ ಸೇವಾ ಪೂರೈಕೆದಾರರ ಗ್ರಾಹಕ ಸೇವಾ ಸಂಖ್ಯೆಯನ್ನು ಕಂಡುಹಿಡಿಯಲು ಹಾಗೂ ಯೋಜನೆಯನ್ನು ಬದಲಾಯಿಸಲು ಮತ್ತು ತಮ್ಮ ಟಿವಿ ವೀಕ್ಷಣೆಯಲ್ಲಿ ಕನ್ನಡ ಚಾನೆಲ್ಗಳನ್ನು ಸೇರಿಸಲು ಇಂಟರ್ನೆಟ್ ಹುಡುಕಾಟ ನಡೆಸಿದ್ದಾರೆ. ಗೂಗಲ್ನಲ್ಲಿ ಗುತ್ತಿದಾರ ವ್ಯಕ್ತಿಯು ದೂರವಾಣಿ ಸಂಖ್ಯೆಯನ್ನು ನೋಡಿದ್ದಾರೆ. ಅಲ್ಲಿ ಕರೆಗೆ ಉತ್ತರಿಸಿದ ವ್ಯಕ್ತಿಯು ತಾನು ಹೇಳಿದ ಡಿಟಿಎಚ್ ಸಂಸ್ಥೆಯವನೆಂದು ಹೇಳಿಕೊಂಡಿದ್ದಾನೆ.

ಬಳಿಕ ಗ್ರಾಹಕ ವ್ಯಕ್ತಿ ಆತನಿಂದ ಮೂರು ವಿಭಿನ್ನ ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಿದನು. ಆದರೆ ಅದೇ ವ್ಯಕ್ತಿ ತಾನು ಡಿಟಿಎಚ್ ಸಿಬ್ಬಂದಿ ಎಂದು ಹೇಳಿಕೊಂಡನು. ಬಳಿಕ ಕರೆ ಮಾಡಿದವರು ವ್ಯಕ್ತಿಗೆ ಯೋಜನೆಯನ್ನು ಬದಲಾಯಿಸಲು 5 ರೂಪಾಯಿ ಟಾಪ್-ಅಪ್ ಪಾವತಿಯನ್ನು ಮಾಡಬೇಕು ಎಂದು ಹೇಳಿದನು.
ಜನವರಿ 16ರಂದು ಬಾಧಿತ ವ್ಯಕ್ತಿಗೆ ಹಣ ಪಾವತಿಯ ಲಿಂಕ್ ಸಿಕ್ಕಿತು. ಹೊಸ ಯೋಜನೆಯನ್ನು ಸಕ್ರಿಯಗೊಳಿಸಲು ಅದೇ ಬಗೆಯಲ್ಲಿ ಹಣವನ್ನು ಪಾವತಿಸಬೇಕೆಂದು ತಿಳಿಸಲಾಯಿತು. ಆದರೆ ಲಿಂಕ್ ಕೆಲಸ ಮಾಡಲಿಲ್ಲ. ಕೆಲವು ನಿಮಿಷಗಳ ನಂತರ ವ್ಯಕ್ತಿ ಮತ್ತೆ ಅವನಿಗೆ ಕರೆ ಮಾಡಿ ವಾಟ್ಸಾಪ್ನಲ್ಲಿ ಹೊಸ ಲಿಂಕ್ ಕಳುಹಿಸುವುದಾಗಿ ಹೇಳಿದರು. ಸುಮಾರು 15 ನಿಮಿಷಗಳ ನಂತರ ವಂಚಕನು ವ್ಯಕ್ತಿಗೆ ಹೊಸ ಲಿಂಕ್ ಅನ್ನು ಕಳುಹಿಸಿದನು.

ಲಿಂಕ್ ಕಳುಹಿಸಿದ ನಂತರ ಕರೆ ಮಾಡಿದವರು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಗೊತ್ತುಪಡಿಸಿದ ಜಾಗದಲ್ಲಿ ಅವರ ಯುಪಿಐ ಐಡಿಯನ್ನು ಸೇರಿಸಲು ವ್ಯಕ್ತಿಗೆ ತಿಳಿಸಿದರು. ಆ ವ್ಯಕ್ತಿಯು ಸಹ ವಂಚಕರ ಸೂಚನೆಗಳನ್ನು ಅನುಸರಿಸಿದರು. ಆದರೆ ಖಾತೆಯಿಂದ ಯಾವುದೇ ಹಣವನ್ನು ಕಡಿತಗೊಳಿಸಲಾಗಿಲ್ಲ. ಆದಾಗ್ಯೂ, ನಂತರ ರಾತ್ರಿ ವೇಳೆಯಲ್ಲಿ ಮೊದಲು 1 ರೂಪಾಯಿಯನ್ನು ಕಡಿತಗೊಳಿಸಲಾಯಿತು ಮತ್ತು ನಂತರ ಎರಡು ಬೇರೆ ಬೇರೆ ವಹಿವಾಟುಗಳಲ್ಲಿ 99,000 ರೂಪಾಯಿ ಕಣ್ಮೆರೆಯಾಯಿತು.
ರಿವರ್ಸ್ ಟ್ರಾನ್ಸಾಕ್ಷನ್ ಮೂಲಕ ಹಣ ವಸೂಲಿ ಮಾಡಲು ಸಾಧ್ಯವೇ ಎಂಬುದನ್ನು ತಿಳಿದುಕೊಳ್ಳಲು ತನ್ನ ಹಣವನ್ನು ಸ್ಥಳಾಂತರಿಸಿದ ಬ್ಯಾಂಕ್ನೊಂದಿಗೆ ಮಾತನಾಡುವುದಾಗಿ ಪೊಲೀಸರು ಹೇಳಿರುವುದಾಗಿ ಹಣ ಕಳೆದುಕೊಂಡ ವ್ಯಕ್ತಿಯು ತಿಳಿಸಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications