ಬಾಡಿಗೆ ಮನೆ ಮಾಲೀಕರನ್ನು ಟಾರ್ಗೆಟ್ ಮಾಡ್ತಿರುವ ಸೈಬರ್ ಕಳ್ಳರು
ಬೆಂಗಳೂರು, ಮೇ. 17: ನಿಮ್ಮದು ಬಾಡಿಗೆ ಮನೆಯಿದೆ. ಖಾಲಿಯಾದ ಬಾಡಿಗೆ ಮನೆ ಬಗ್ಗೆ ಆನ್ಲೈನ್ನಲ್ಲಿ ಜಾಹೀರಾತು ಹಾಕಿದ್ದೀರಾ ? ಹಾಗಿದ್ದರೆ ನಿಮಗೆ ಬಾಡಿಗೆ ಹಣ ಕೊಡ್ತೀವಿ ಈ ಲಿಂಕ್ ಬರಬಹುದು. ಈ ಲಿಂಕ್ ಲಿಂಕ್ ಒತ್ತಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಮಂಗ ಮಾಯವಾಗುತ್ತದೆ ! ಆನ್ಲೈನ್ ಜಾಹೀರಾತು ನೋಡಿ ಕರೆ ಮಾಡುವರಿಗೆ ಬಾಡಿಗೆ ನೀಡುವ ಮುನ್ನ ಈ ಸ್ಟೋರಿ ಓದಿ.
ಕೊರೊನಾ ಸೋಂಕು ಬೆಂಗಳೂರಿನಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಬಹುತೇಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಕೂಲಿ ಕಾರ್ಮಿಕರು, ಐಟಿ ಉದ್ಯೋಗಿಗಳು ತೊರೆದಿರುವ ಕಾರಣ ಇದೀಗ ಬಾಡಿಗೆದಾರರನ್ನು ಹುಡುಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮನೆ ಬಾಡಿಗೆ ಆದಾಯದ ಮೂಲ ಮಾಡಿಕೊಂಡಿದ್ದವರು ಇದೀಗ ವಿಲ ವಿಲ ಒದ್ದಾಡುವಂತಾಗಿದೆ. ಬಾಡಿಗೆ ನಂಬಿಕೊಂಡು ಸಾಲ ಮಾಡಿ ಮನೆ ಕಟ್ಟಿದವರು ಇದೀಗ ಬಾಡಿಗೆದಾರರನ್ನು ಹುಡುಕಲು ಆನ್ಲೈನ್ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಜಾಹೀರಾತು ಹಾಕಿ ಬಾಡಿಗೆದಾರರನ್ನು ಹುಡುಕುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು ಇದೀಗ ಮನೆ ಬಾಡಿಗೆದಾರರ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಇಂಥದ್ದೇ ಪ್ರಕರಣಗಳು ಇದೀಗ ಬೆಂಗಳೂರಿನಲ್ಲಿ ವರದಿಯಾಗುತ್ತಿವೆ.

ಎಚ್ಎಎಲ್ ನ ಬಸವೇಶ್ವರನಗರದಲ್ಲಿರುವ ಮಹೇಶ್ ಅವರ ಬಾಡಿಗೆ ಮನೆಗಳು ಖಾಲಿಯಾಗಿದ್ದವು. ಬಾಡಿಗೆದಾರರಿಗಾಗಿ ಸಾಮಾಜಿಕ ಜಾಲ ತಾಣವೊಂದರಲ್ಲಿ ಮನೆ ಖಾಲಿಯಿರುವುದಾಗಿ ಜಾಹೀರಾತು ಹಾಕಿದ್ದರು. ಜಾಹೀರಾತು ನೋಡಿದ್ದ ವ್ಯಕ್ತಿಯೊಬ್ಬ ಮಹೇಶ್ಗೆ ಕರೆ ಮಾಡಿ, ಸಚಿನ್ ಶರ್ಮಾ ಎಂದು ಪರಿಚಯಿಸಿಕೊಂಡಿದ್ದ. ಮನೆಯ ಪೋಟೋ ಮತ್ತು ವಿಡಿಯೋ ಕಳಿಸುವಂತೆ ಕೇಳಿದ್ದ. ಮನೆ ಪೋಟೋ ಕಳಿಸಿದ್ದ ಮಹೇಶ್ 30 ಸಾವಿರ ಅಡ್ವಾನ್ಸ್ ನೀಡುವಂತೆ ಕೇಳಿದ್ದರು. ಮನೆ ಮಾಲೀಕ ಪೋನ್ ಪೇ ನಂಬರ್ ಪಡೆದಿದ್ದ ಸೈಬರ್ ವಂಚಕ ಐದು ರೂಪಾಯಿಯನ್ನು ಪೋನ್ ಪೇ ಮೂಲಕ ರವಾನಿಸಿದ್ದ. ಆನಂತರ ತಾಂತ್ರಿಕ ತೊಂದರೆ ಎದುರಾಗಿದೆ. ನಾನು ಕಳಿಸುವ ಪೇಟಿಎಂ ಲಿಂಕ್ ಒತ್ತಿ, ನಿಮ್ಮ ಬ್ಯಾಂಕ್ ಖಾತೆಗೆ 30 ಸಾವಿರ ಮುಂಗಡ ಹಣ ಕಳಿಸುತ್ತೇನೆ ಎಂದು ಹೇಳಿ ಲಿಂಕ್ನ್ನು ಕಳಿಸಿದ್ದ.

Recommended Video
ಮಹೇಶ್ ಖುಷಿಯಿಂದಲೇ ಲಿಂಕ್ ಒತ್ತಿದ್ದಾರೆ. ಲಿಂಕ್ ಒತ್ತುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ 50 ಸಾವಿರ ಹಣ ವಂಚಕನ ಖಾತೆಗೆ ವರ್ಗಾವಣೆಯಾಗಿದೆ. ಬಳಿಕ ಸೈಬರ್ ವಂಚಕ ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಮನನೊಂದ ಮಹೇಶ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೊರೊನಾ ಸೋಂಕು ಹೆಚ್ಚಳದಿಂದ ಬೆಂಗಳೂರಿನಲ್ಲಿ ಮನೆ ಖಾಲಿ ಕೊಂಡು ಅನೇಕರು ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ಬಾಡಿಗೆ ಮನೆ ಮಾಲೀಕರು ಬಾಡಿಗೆದಾರರಿಗಾಗಿ ಆನ್ಲೈನ್ನಲ್ಲಿ ಜಾಹೀರಾತು ಹಾಕುತ್ತಿದ್ದಾರೆ. ಇಂಥ ಬಾಡಿಗೆ ಮನೆ ಮಾಲೀಕರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುವ ಸೈಬರ್ ಕಳ್ಳರು ಸಕ್ರಿಯವಾಗಿದ್ದಾರೆ. ಮುಂಗಡ ಹಣಕ್ಕೆಂದು ಕಳಿಸುವ ಲಿಂಕ್ ಒತ್ತಿ ಮೋಸಹೋಗಬಾರದು. ನಾನಾ ರೀತಿಯಲ್ಲಿ ಲಿಂಕ್ ಕಳಿಸುತ್ತಾರೆ. ಅವನ್ನು ಯಾವ ಕಾರಣಕ್ಕೂ ಒತ್ತಬಾರದು ಎಂದು ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications