ಇದು ಬೆಂಗಳೂರು ಮಳೆ ಬರೆದ ಚಿತ್ರ! ಸ್ವಲ್ಪ ಸಿಹಿ, ಜಾಸ್ತಿ ಕಹಿ!
ಬೆಂಗಳೂರು, ಸೆಪ್ಟೆಂಬರ್ 9: ಗಿಡಮರಗಳ ಮೇಲೆ ಮುತ್ತು ಪೋಣಿಸಿಟ್ಟಂತೆ ಕಾಣುವ ತುಂತುರು ಹನಿ, ಮಡಿಕೇರಿಯನ್ನು ಬೆಂಗಳೂರಿಗೆ ಎಳೆದುತಂದ ಮಂಜುಮುಸುಕಿದ ವಾತಾವರಣ, ಕಚೇರಿ, ಶಾಲೆಯನ್ನೆಲ್ಲ ಬಿಟ್ಟು ಲಗುಬಗೆಯಲ್ಲಿ ಮನೆಸೇರಿಕೊಳ್ಳುವ ತವಕ, ಇಳೆಗೆ ಮುತ್ತಿಕ್ಕಲು ಸಿದ್ಧನಾದ ವರುಣ ಬೆಂಗಳೂರಿಗೊಂದು ಆಹ್ಲಾದಕರ ಮೂಡ್ ತಂದಿಟ್ಟಿದ್ದಂತೂ ನಿಜ.
ಎಲ್ಲೋ ನಾಲ್ಕು ಹನಿ ಬೀಳಿಸಿ ಹೊರಟು ಹೋಗಪ್ಪ ಅಂದ್ರೆ ಈ ವರುಣ ಹೀಗಾ ಸುರ್ಯೋದು?! ಅದೂ ಈ ಬೆಂಗಳೂರಲ್ಲಿ! ಸೆ.8 ರಂದು ಉದ್ಯಾನ ನಗರಿಯಲ್ಲಿ ಎಡಬಿಡದೆ ನರ್ತಿಸಿದ ವರುಣ, ಮರಣ ಮೃದಂಗವನ್ನೂ ಬಾರಿಸಿದ್ದು ಮಾತ್ರ ಶೋಚನೀಯ ಸಂಗತಿ! ಮರದ ಕೆಳಗೆ ಕಾರು ನಿಲ್ಲ್ಲಿಸಿದ ತಪ್ಪಿಗೆ ಮೃತರಾದ ಮೂವರ ಸಾವು ಮಳೆ ಎಂದರೆ ಸಾಕು ಬೆಂಗಳೂರಿಗರು ಬೆಚ್ಚಿಬೀಳುವಂಥ ಸನ್ನಿವೇಶ ನಿರ್ಮಿಸಿದೆ.
ಒಂದೆಡೆ ಸೊಬಗಿನ ಚಿತ್ರ ಬರೆದ ಬೆಂಗಳೂರು ಮಳೆ ಇನ್ನೊಂದೆಡೆ ತನ್ನ ರುದ್ರ ನರ್ತನದಿಂದ ಅಮಾಯಕರ ಕಣ್ಣೀರಿಗೆ ಕಾರಣವಾಗಿದೆ.
ಇತ್ತ ಮಳೆಯಿಂದಾಗಿ ಕುಟುಂಬ ಸದಸ್ಯರನ್ನು ಕಳೆದುಕೊಂಡ ಬೆಂಗಳೂರಿನ ಕತೆಯೊಂಡೆಯಾದರೆ ಅತ್ತ ಗುರುಗಾಂವ್ ನಲ್ಲಿ ಶಾಲೆಯ ಶೌಚಾಲಯದಲ್ಲಿ ಹತ್ಯೆಯಾದ ಏಳು ವರ್ಷದ ಬಾಲಕನ ತಂದೆ ತಾಯಿಯ ಆಕ್ರಂದನ ಇನ್ನೊಂದೆಡೆ. ಹೀಗೆ ಸಿಹಿಗಿಂತ ಹೆಚ್ಚಾಗಿ ಕಹಿಯಿಂದಲೇ ಸೆ.8 ರ ಶುಕ್ರವಾರ ಕಳೆದಿದೆ!

ಇದು ಮಳೆ ಬರೆದ ಚಿತ್ರ
ಬೆಂಗಳೂರಿನಲ್ಲಿ ಧೋ ಎಂದು ಸುರಿದ ಮಳೆ ಅದೆಷ್ಟು ತೀವ್ರವಾಗಿತ್ತೆಂದರೆ ರಸ್ತೆಯಲ್ಲಿ ಛತ್ರಿ ಹಿಡಿದು ಸಾಗುತ್ತಿದ್ದ ವ್ಯಕ್ತಿಯ ಛತ್ರಿಯಷ್ಟೇ ಕಣ್ಣಿಗೆ ಬಿದ್ದು, ಅಲ್ಲೊಂದು ವ್ಯಕ್ತಿಯಿರುವುದೇ ಅನುಮಾನ ಎಂಬಷ್ಟು ಮಸುಕಾಗಿತ್ತು!

ನಮ್ಮ ಆಕ್ರಂದನ ಕೇಳೋರ್ಯಾರು?
ಗುರುಗಾಂವ್ ನ ರಿಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಹತ್ಯೆಯಾದ ಏಳು ವರ್ಷದ ಪುಟ್ಟ ಬಾಲಕನ ತಾಯಿಯನ್ನು ಸಂಬಂಧಿಗಳು ಸಂತೈಸುತ್ತಿರುವ ದೃಶ್ಯ ಹೃದಯಕಲಕುವಂತಿದೆ.

ಗದ್ಗದಿತರಾದ ತಂದೆ
ಗುರುಗಾಂವ್ ನ ರಿಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಹತ್ಯೆಯಾದ ಮಗುವಿನ ತಂದೆ ವರುಣ್ ಠಾಕೂರ್ ತಮ್ಮ ಮಗುವನ್ನು ನೆನಪಿಸಿಕೊಂಡು ಗದ್ಗದಿತರಾದ ದೃಶ್ಯ.

ಪ್ರಾರ್ಥನೆ
ಮಂಗಳೂರಿನಲ್ಲಿ ಶುಕ್ರವಾರ ತಾಯಿ ಮೇರಿಯ ಜನ್ಮದಿನವನ್ನು ಭಕ್ತರು ಭಕ್ತಿ, ಶ್ರದ್ಧೆಯಿಂದ ಆಚರಿಸಿದ್ದು ಹೀಗೆ.

ನಜ್ಜುಗುಜ್ಜಾದ ಆಟೋ
ಬೆಂಗಳೂರಿನಲ್ಲಿ ಸೆ.8 ರಂದು ಸುರಿದ ಮಳೆಗೆ ಆಟೋ ರಿಕ್ಷಾ ಮೇಲೆ ಮರವೊಂದು ಬಿದ್ದ ಪರಿಣಾಮ ಆಟೋ ನಜ್ಜುಗುಜ್ಜಾದ ದೃಶ್ಯ.

ಸಾಂಪ್ರದಾಯಿಕ ಧಿರಿಸಿನಲ್ಲಿ ಯುವರಾಜ!
ಮರಾಠ್ವಾಡ ಮೆಳವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಹಾರಾಷ್ಟ್ರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇಲ್ಲಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ್ದು ಹೀಗೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Bengaluru Rain: ಬೆಂಗಳೂರಲ್ಲಿ ಮಳೆ ಬಂದಾಗ ಪವರ್ ಕಟ್ ಆಗುವುದ್ಯಾಕೆ, ಡಾಕ್ಟರ್ ಪ್ರಶ್ನೆಗೆ ನೆಟ್ಟಿಗರು ಹೇಳಿದ್ದೇನು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ











Click it and Unblock the Notifications