BMTC ಮಾಸಿಕ ಪಾಸು ಮಾರಾಟಕ್ಕೆ ಕೋಟಿ ಕೋಟಿ ಕಮೀಷನ್ ಪಾವತಿ
ಬೆಂಗಳೂರು, ಮಾ. 30: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನಿರ್ವಾಹಕರ ಬಗ್ಗೆಯಾಗಲೀ, ಚಾಲಕರ ಬಗ್ಗೆಯಾಗಲೀ ಸ್ವಲ್ಪವೂ ಕನಿಕರವಿಲ್ಲ!
ಬಿಎಂಟಿಸಿ ಮಾಸಿಕ ಪಾಸುಗಳನ್ನು ಮಾರಾಟ ಮಾಡಲು ಕಮೀಷನ್ ಆಧಾರದ ಮೇಲೆ ಬಿಎಂಟಿಸಿ ಖಾಸಗಿ ಏಜೆಂಟರನ್ನು ನೇಮಕ ಮಾಡಿಕೊಂಡಿದೆ. ಕಮೀಷನ್ ರೂಪದಲ್ಲಿ ಕೋಟ್ಯಂತರ ರೂಪಾಯಿ ಪಾವತಿ ಮಾಡಿರುವ ಸಂಗತಿ ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದ ದಾಖಲೆಗಳಿಂದ ಬಹಿರಂಗವಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 1940 ರಲ್ಲಿಯೇ ಬೆಂಗಳೂರು ಟ್ರಾನ್ಸ್ ಪೋರ್ಟ್ ಸರ್ವೀಸ್ ಹೆಸರಿನಲ್ಲಿ ಹುಟ್ಟಿಕೊಂಡಿರುವ ಸಂಸ್ಥೆ. ಅವತ್ತಿಗೆ ಕೇವಲ 98 ಬಸ್ ಗಳಿಂದ ಬಿಎಂಟಿಸಿ ಅರಂಭವಾಗಿತ್ತು. ಇವತ್ತಿಗೆ ಸುಮಾರು 6800 ಬಸ್ಗಳಿವೆ. ಐಶಾರಾಮಿ ಬಸ್ಗಳನ್ನು ರಸ್ತೆಗೆ ಇಳಿಸಿದೆ. 30 ಸಾವಿರ ಮಂದಿಗೆ ನೇರ ಉದ್ಯೋಗ ಕಲ್ಪಿಸಿದ ಮಹಾನ್ ಸಂಸ್ಥೆ. ದಿನಕ್ಕೆ ಎರಡೂವರೆ ಕೋಟಿ ಯಿಂದ ಮೂರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಬಿಎಂಟಿಸಿ ಪ್ರಸಕ್ತ 2021-22 ನೇ ಸಾಲಿನಲ್ಲಿ ಅತಿ ಹೆಚ್ಚು ಪ್ರಗತಿ ದಾಖಲಿಸಿದೆ. ದೇಶದ ಸಾರಿಗೆ ಸೇವೆ ವಿಚಾರದಲ್ಲಿ ಹಲವು ಪ್ರಶಸ್ತಿಗಳನ್ನು ಬಿಎಂಟಿಸಿ ಮುಡಿಗೇರಿಸಿಕೊಂಡಿದೆ.

ಸಿಬ್ಬಂದಿ ವಿಚಾರದಲ್ಲಿ ದೊಂಬರಾಟ:
ಬಿಎಂಟಿಸಿ ಏಳಿಗೆಗಾಗಿ ಹಗಳಿರುಳು ಶ್ರಮಿಸುತ್ತಿರುವ ನೌಕರರ ವಿಚಾರಕ್ಕೆ ಬಂದರೆ ಬಿಎಂಟಿಸಿ ಇಬ್ಬಗೆ ನೀತಿ ಅನುಸರಿಸುತ್ತದೆ. ನಾಲ್ಕು ವರ್ಷ ಕಳೆದರೂ ವೇತನ ಪರಿಷ್ಕರಣೆ ಮಾಡಿಲ್ಲ. ಹೋರಾಟ ಮಡಿದ ನೌಕರರನ್ನು ಮುಲಾಜಿಲ್ಲದೇ ವಜಾ ಮಾಡಿದೆ. ಪರಿ ಪರಿ ಬೇಡಿಕೊಂಡರೂ ಸಿಬ್ಬಂದಿಯನ್ನು ವಾಪಸು ಪಡೆಯುವ ವಿಚಾರದಲ್ಲಿ ಜಪ್ಪಯ್ಯ ಎಂದ್ರೂ ಕದಲುತ್ತಿಲ್ಲ.
ಇನ್ನು ಮಾಸಿಕ ಪಾಸ್ ವಿಚಾರಕ್ಕೆ ಬಂದ್ರೆ ಬೇರೆಯದ್ದೇ ಕಥೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ನಂಬಿ ಪ್ರತಿ ದಿನ ಪ್ರಯಾಣಿಸುವ ಪ್ರಯಾಣಿಕರು ಮಾಸಿಕ ಪಾಸು ಖರೀದಿಸುತ್ತಾರೆ. ಈ ಪಾಸುಗಳನ್ನು ಕಮೀಷನ್ ಆಧಾರದ ಮೇಲೆ ಮಾರಾಟ ಮಾಡುವ ಗುತ್ತಿಗೆಯನ್ನು ಬೆಂಗಳೂರಿನ ಖಾಸಗಿ ಏಜೆಂಟರಿಗೆ ಬಿಎಂಟಿಸಿ ವಹಿಸಿದೆ.

ಸುಮಾರು 70ಕ್ಕೂ ಹೆಚ್ಚು ಏಜೆನ್ಸಿಗಳಿಗೆ ಬಿಎಂಟಿಸಿ ಮಾಸಿಕ ಬಸ್ ಪಾಸ್ ಗಳನ್ನು ಮಾರಾಟ ಮಾಡುವ ಕಾರ್ಯವನ್ನು ವಹಿಸಿದೆ. ಬಿಎಂಟಿಸಿ ಮಾಸಿಕ ಬಸ್ ಪಾಸ್ ಮಾರಾಟ ಮಾಡಿದವರಿಗೆ ಕಮೀಷನ್ ನೀಡಲಾಗುತ್ತದೆ. ಒಂದು ಪಾಸಿಗೆ ಮೂರು ರೂ.ನಿಂದ ಐದು ರೂ. ನೀಡಲಾಗುತ್ತದೆ. ಮಾಸಿಕ ಕನಿಷ್ಠ 3 ರಿಂದ 4 ಲಕ್ಷ ರೂ.ಗಳನ್ನು ಕಮೀಷನ್ ರೂಪದಲ್ಲಿ ಬಿಎಂಟಿಸಿ ಏಜೆಂಟರಿಗೆ ನೀಡುತ್ತಿದೆ. ಕಳೆದ 2013 ರಿಂದ 2020 ರ ಅವಧಿಯಲ್ಲಿ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಹಣ ಕಮೀಷನ್ ಹೆಸರಿನಲ್ಲಿ ಬಿಎಂಟಿಸಿ ವೆಚ್ಚ ಮಾಡಿದೆ. ಬಿಎಂಟಿಸಿಯ ಈ ನಿರ್ಧಾರದ ಬಗ್ಗೆ ಬಿಎಂಟಿಸಿ ಚಾಲಕರು ಅಪರಸ್ವರ ಎತ್ತಿದರೂ, ಒಳ್ಳೆಯ ಸಲಹೆ ನೀಡಿದರೂ ಮೇಲಾಧಿಕಾರಿಗಳು ಸ್ವೀಕರಿಸಿಲ್ಲ.

ಏಜೆಂಟರಿಗೆ ಮಾಸಿಕ ಪಾಸು ಕೊಡುವ ಬದಲಿಗೆ, ನಿರ್ವಾಹಕರಿಗೆ ಕೊಟ್ಟಿದ್ದರೆ, ಆ ಪಾಸುಗಳನ್ನು ಬಸ್ ನಲ್ಲಿ ಮಾರಾಟ ಮಾಡುತ್ತಿದ್ದರು. ಏಜೆಂಟರಿಗೆ ಕೊಡುವ ಕಮೀಷನ್ ಸಿಬ್ಬಂದಿಗೆ ಕೊಟ್ಟಿದ್ದರೆ ಒಂದಷ್ಟು ಆರ್ಥಿಕ ಸಹಾಯ ಅಗುವುದು. ಬಸ್ ಟಿಕೆಟ್, ಡೈಲಿ ಪಾಸು ಕೊಡುವ ಸಿಬ್ಬಂದಿಗೆ ಮಾಸಿಕ ಪಾಸು ಮಾರಾಟ ಮಾಡುವುದು ದೊಡ್ಡ ಭಾರವಾದೀತೇ? ಬಿಎಂಟಿಸಿ ನೌಕರರಿಗೆ ಬಸ್ನಲ್ಲಿಯೇ ಮಾಸಿಕ ಪಾಸ್ ಮಾರಾಟ ಮಾಡುವ ಕೆಲಸ ವಹಿಸಿದ್ದಲ್ಲಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಏಜೆಂಟರಿಗೆ ಕೊಡುವ ಹಣವನ್ನು ಹೆಚ್ಚುವರಿ ಸೇವೆ ರೂಪದಲ್ಲಿ ಸಿಬ್ಬಂದಿಗೆ ಕೊಟ್ಟಿದ್ದಲ್ಲಿ ಒಂದಷ್ಟು ಅನುಕೂಲವಾಗುವುದು.
ಖಾಸಗಿ ಏಜೆಂಟರ ಹೆಸರಿನಲ್ಲಿ ಬಿಎಂಟಿಸಿ ಕೌಂಟರ್ ನಲ್ಲಿ ಮಾಸಿಕ ಪಾಸು ಮಾಡಿದವರು ಇದ್ದಾರೆ. ಬಿಎಂಟಿಸಿ ನೌಕರರಿಗೆ ಪಾಸು ಮಾರಾಟ ಮಾಡುವುದನ್ನು ಕೊಡುವ ಬದಲಿಗೆ ಖಾಸಗಿ ಏಜೆಂಟರಿಗೆ ನೀಡಿ ಕೋಟ್ಯಂತರ ರೂಪಾಯಿ ಬಿಎಂಟಿಸಿ ವ್ಯಯಿಸುತ್ತಿದೆ. ಅದರ ಬದಲಿಗೆ ಸಿಬ್ಬಂದಿಗೆ ವಹಿಸಿ ಆ ಹಣವನ್ನು ನೌಕರರ ಯೋಗ ಕ್ಷೇಮಕ್ಕೆ ವೆಚ್ಚ ಮಾಡಬಹುದಿತ್ತು. ಸಂಸ್ಥೆಗಾಗಿ ಎಷ್ಟೇ ಪ್ರಾಮಾಣಿಕ ಕೆಲಸ ಮಾಡಿದ್ರೂ ನಮ್ಮನ್ನು ಮಾತ್ರ ಕೀಳಾಗಿಯೇ ನಡೆಸಿಕೊಳ್ಳಲಾಗುತ್ತಿದೆ ಎಂದು ಬಿಎಂಟಿಸಿ ನಿರ್ವಾಹಕರು ಆಗ್ರಹಿಸಿದ್ದಾರೆ.

ಕೊರೊನಾ ಸೋಂಕು, ಡೀಸೆಲ್ ದರ ಸತತ ಹೆಚ್ಚಳದಿಂದ ಬಿಎಂಟಿಸಿ ನಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಬಿಎಂಟಿಸಿ ದುಂದು ವೆಚ್ಚದ ಹಾದಿಗಳನ್ನು ಕಡಿತ ಮಾಡಿಲ್ಲ. ನಷ್ಟ ನೆಪ ಮುಂದಿಟ್ಟುಕೊಂಡು ನೌಕರರ ವೇತನ ನಾಲ್ಕು ವರ್ಷದಿಂದಲೂ ಪರಿಷ್ಕರೆ ಮಾಡಿಲ್ಲ. ಅದರೆ ಕಮೀಷನ್ ರೂಪದಲ್ಲಿ ಪಾಸು ಮಾರಾಟ ಮಾಡಿದವರಿಗೆ ಕೊಡಲು ಬಿಎಂಟಿಸಿ ಬಳಿ ಹಣವಿದೆ. ಸಂಸ್ಥೆಗಾಗಿ ದುಡಿಯುವರು ಏಳಿಗೆಯಾಗಿಬಿಟ್ಟರೆ ಎಂಬ ಮನಸ್ಥಿತಿಯಲ್ಲಿ ಬಿಎಂಟಿಸಿ ಉನ್ನತ ಅಧಿಕಾರಿಗಳು ನೌಕರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ನಿರ್ವಾಹಕರು ಅರೋಪಿಸಿದ್ದಾರೆ. ಬಿಡಿಗಾಸಿಗೆ ದುಡಿಯುವ ಬಿಎಂಟಿಸಿ ನೌಕರರಿಗೆ ಮಾಸಿಕ ಪಾಸು ಮಾರಾಟ ಮಾಡುವ ಕೆಲಸ ವಹಿಸುವುದರಲ್ಲಿ ತಪ್ಪೇನಿದೆ? ಈ ಬಗ್ಗೆ ಅಧಿಕಾರಿಗಳು ಈಗಲಾದರೂ ಮನಸು ಮಾಡುವರೇ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications