ಶಕ್ತಿದೇವತೆ ದ್ರೌಪದಿ ದೇವಿ ಕೊರೊನಾ ಓಡಿಸಿ 'ಕರಗ'ಕ್ಕೆ ದಾರಿ ಮಾಡಿಕೊಳ್ಳುತ್ತಾಳೆ
ಬೆಂಗಳೂರು, ಮಾರ್ಚ್ 24: ದೇಶ ಎಂತೆಂತಹ ಆಪತ್ತನ್ನು ಎದುರಿಸಿದರೂ, ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವ ರದ್ದಾದ ಉದಾಹರಣೆಗಳಿಲ್ಲ.ಆದರೆ, ಇದೇ ಮೊದಲ ಬಾರಿಗೆ ಕರಗ ರದ್ದು ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆದೇಶ ಹೊರಡಿಸಿದ್ದಾರೆ.
"ಈ ವರ್ಷವೂ ಕರಗ ನಡೆಯುತ್ತದೆ. ಈ ಹಿಂದೆ ಪ್ಲೇಗ್, ಕಾಲರಾದಂತಹ ಮಾರಣಾಂತಿಕ ಕಾಯಿಲೆಗಳು ಬಂದಾಗಲೂ ಕರಗ ನಡೆದಿತ್ತು. ಈ ಬಾರಿಯೂ ಕರಗ ಉತ್ಸವ ನಡೆಯಲಿದೆ" ಎಂದು ಮಾರ್ಚ್ 12ರಂದು ನಗರದ ಮೇಯರ್ ಗೌತಮ್ ಕುಮಾರ್ ಹೇಳಿದ್ದರು.
ಆದರೆ, ಬದಲಾದ ಪರಿಸ್ಥಿತಿಯಲ್ಲಿ ಇಡೀ ರಾಜ್ಯವೇ ಲಾಕ್ ಡೌನ್ ಆಗಿರುವಾಗ, ಲಕ್ಷಾಂತರ ಜನ ಸೇರುವ ಕರಗ ಉತ್ಸವ ನಡೆಸುವುದು ಸರಿಯಲ್ಲ ಎನ್ನುವ ನಿರ್ಧಾರಕ್ಕೆ ಸರಕಾರ ಬಂದಿದೆ. ಆದರೂ, ಸರಕಾರ ಇದಕ್ಕೆ ಅವಕಾಶ ನೀಡಬಹುದು ಎನ್ನುವ ಆಶಾಭಾವನೆಯಲ್ಲಿದೆ ಧರ್ಮರಾಯ ದೇವಸ್ಥಾನದ ಆಡಳಿತ ಮಂಡಳಿ.
ಹನ್ನೊಂದು ದಿನಗಳ ಈ ಐತಿಹಾಸಿಕ ಬೆಂಗಳೂರು ಕರಗ ಮಾರ್ಚ್ 31ರಿಂದ ಆರಂಭವಾಗಬೇಕಿತ್ತು. ಒಂಬತ್ತನೇ ದಿನ ಹೂವಿನ ಕರಗ ನಡೆಯುವುದು ಪದ್ದತಿ. ಆದರೆ, ಸರಕಾರದ ನಿರ್ಧಾರದಿಂದ ಭಕ್ತರಿಗೆ ನಿರಾಸೆ ಉಂಟಾಗಿದೆ. ಶಕ್ತಿದೇವತೆ ದ್ರೌಪದಿ, ಕರಗಕ್ಕೆ ದಾರಿಮಾಡಿಕೊಡುತ್ತಾಳೆ ಎನ್ನುವ ನಂಬಿಕೆಯಲ್ಲಿದ್ದಾರೆ ಮಂಡಳಿ ಮತ್ತು ಭಕ್ತರು.

ಪಾಲಿಕೆ - ದೇವಾಲಯ ಮಂಡಳಿ ಸಭೆ
ಒಂದು ತಿಂಗಳ ಹಿಂದಿನಿಂದ ಇಲ್ಲಿಯವರೆಗೆ ಪಾಲಿಕೆ ಮತ್ತು ಧರ್ಮರಾಯ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ನಡುವೆ ಹಲವು ಸುತ್ತಿನ ಸಭೆಗಳು ನಡೆದಿದ್ದವು. ಆದರೆ, ಕೊರೊನಾ ಮಹಾಮಾರಿ ಕಾಲಿಟ್ಟ ನಂತರ, ಆರೋಗ್ಯ ಕಾಪಾಡುವ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಮಾತುಕತೆಗಳು ನಡೆದಿದ್ದವು. ಕರಗ ಉತ್ಸವಕ್ಕೆ ಸಿದ್ದತೆಯನ್ನೂ ಮಾಡಿಕೊಂಡು ಬರಲಾಗಿತ್ತು.

ಮಾರ್ಚ್ 31ರಿಂದ ಆರಂಭವಾಗಿ ಏಪ್ರಿಲ್ 10ರವರೆಗೆ
ಮಾರ್ಚ್ 31ರಿಂದ ಆರಂಭವಾಗಿ ಏಪ್ರಿಲ್ 10ರವರೆಗೆ ಕರಗ ಉತ್ಸವಕ್ಕೆ ದಿನಾಂಕ ನಿಗದಿಯಾಗಿತ್ತು. ಏಪ್ರಿಲ್ 8ರಂದು ವಿಶ್ವವಿಖ್ಯಾತ ಹೂವಿನ ಕರಗ, ದ್ರೌಪದಿ ದೇವಿಯ ಮಹಾರಥೋತ್ಸವ ನಡೆಯಬೇಕಾಗಿತ್ತು. ವಹ್ನಿಕುಲ ಕ್ಷತ್ರಿಯ ಸಮುದಾಯ ಈ ಉತ್ಸವವನ್ನು ನಡೆಸುತ್ತದೆ.

ಬ್ರಿಟಿಷರ ಕಾಲದಿಂದಲೂ, ಕರ್ಪ್ಯೂ ಇದ್ದಾಗಲೂ ಈ ಉತ್ಸವ ನಡೆದಿದೆ
"ಯಾವ ಕಾಯಿಲೆ ಬಂದರೂ, ಬ್ರಿಟಿಷರ ಕಾಲದಿಂದಲೂ, ಕರ್ಪ್ಯೂ ಇದ್ದಾಗಲೂ ಈ ಉತ್ಸವ ನಡೆದಿದೆ. ಯಾವ ಅಡಚಣೆಯಿಲ್ಲದೆಯೇ ಕರಗ ಉತ್ಸವ ನಡೆಯಲಿದೆ ಎನ್ನುವ ವಿಶ್ವಾಸದಲ್ಲಿದ್ದೇವೆ. ದ್ರೌಪದಿ ದೇವಿ, ಮಹಾಮಾರಿ ಕೊರೊನ ಓಡಿಸಿ, ಕರಗ ಉತ್ಸವವಕ್ಕೆ ದಾರಿ ಮಾಡಿಕೊಡುತ್ತಾಳೆ ಎನ್ನುವ ನಂಬಿಕೆ ನಮಗಿದೆ" ಎಂದು ಧರ್ಮರಾಯ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹೇಳಿದ್ದಾರೆ.

ಶಕ್ತಿದೇವತೆ ದ್ರೌಪದಿ ದೇವಿ ಕೊರೊನಾ ಓಡಿಸಿ 'ಕರಗ'ಕ್ಕೆ ದಾರಿ ಮಾಡಿಕೊಳ್ಳುತ್ತಾಳೆ
"ಏಪ್ರಿಲ್ ಎಂಟರಂದು ಕರಗ ಮೆರವಣಿಗೆ ಇರಲಿದೆ. ಅಷ್ಟೊತ್ತಿಗೆ ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಬರಬಹುದು. ಕೊನೆಯ ಕ್ಷಣದವರೆಗೂ ಸರಕಾರದ ಆದೇಶಕ್ಕೆ ಕಾಯುತ್ತೇವೆ. ಒಂದು ವೇಳೆ ಅನುಮತಿ ಸಿಗದೇ ಇದ್ದಲ್ಲಿ ಒಳಾಂಗಣದಲ್ಲಿ ಉತ್ಸವ ನಡೆಸುತ್ತೇವೆ" ಎಂದು ದೇವಾಲಯದ ಅಧಿಕಾರಿಗಳು ಹೇಳಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications