Get Updates
Get notified of breaking news, exclusive insights, and must-see stories!

ಪಾಕಿಗಳ ಬಂಧನದ ತನಿಖೆಗೆ ಕತಾರ್ ಗೆ ಹೊಂಟರು ಬೆಂಗಳೂರು ಪೊಲೀಸರು

ಬೆಂಗಳೂರು, ಜೂನ್ 13: ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿಯರು ಸೇರಿ 4ಜನ ಬಂಧಿತರಾಗಿದ್ದ ಪ್ರಕರಣ ಸಂಬಂಧ ತನಿಖೆಗಾಗಿ ನಗರದ ಪೊಲೀಸರ ತಂಡ ಕತಾರ್ ಗೆ ಭೇಟಿ ನೀಡಲಿದೆ.

ನಗರದಲ್ಲಿ ಬಂಧಿತರಾಗಿದ್ದ ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ನೆಲೆಯೂರಲು ಪ್ರೀತಿ ಮತ್ತು ಮದುವೆಯೇ ಕಾರಣ ಎಂದಿದ್ದರು. ಹೀಗಿದ್ದೂ ಇವರ ಉದ್ದೇಶ ಏನಾಗಿತ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಕಾರಣಕ್ಕೆ ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಕತಾರ್ ಗೆ ಭೇಟಿ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.

Cops suspect motive of three Pakistanis arrested in Bengaluru, team to visit Qatar

"ಅವರು ಭಾರತಕ್ಕೆ ಬರಲು ಬೇರೆ ಕಾರಣಗಳೂ ಇರಬಹುದು. ಅವರ ವಾದ ಮತ್ತು ಉದ್ದೇಶಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಅವರ ವಿವರಗಳನ್ನು ಕೇಂದ್ರ ತನಿಖಾ ದಳಗಳು ಪರಿಶೀಲನೆ ನಡೆಸುತ್ತಿವೆ. ಅವರು ಈ ಹಿಂದೆ ಕೆಲಸ ಮಾಡಿದ ಕತಾರ್ ಗೆ ನಾವು ಪ್ರಯಾಣಿಸಲಿದ್ದೇವೆ. ಇದರರ್ಥ ನಾವು ಯಾವುದೇ ತೀರ್ಮಾನಕ್ಕೆ ಬಂದಿದ್ದೇವೆ ಎಂದಲ್ಲ. ಆದರೆ ಅವರ ವಾದವನ್ನು ನಂಬುತ್ತಿಲ್ಲ ಅಷ್ಟೇ," ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ.

ಇನ್ನು ತನಿಖೆಯ ವಿವರಗಳನ್ನು ನೀಡಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಆದರೆ ಮೂಲಗಳ ಪ್ರಕಾರ ಆರೋಪಿಗಳು ನೀಡುತ್ತಿರುವ ಹೇಳಿಕೆಗಳು ಗೊಂದಲದಿಂದ ಕೂಡಿದ್ದು ಪ್ರೀತಿ ಮತ್ತು ಮದುವೆಯ ಹೊರತಾಗಿ ಈ ಪ್ರಕರಣಕ್ಕೆ ಬೇರೆಯದೇ ಆಯಾಮಗಳಿವೆ ಎನ್ನಲಾಗಿದೆ. ಯುವತಿ ಸಮೀರಾ ತಾನು ಕೇರಳದ ಯುವಕ ಮುಹಮ್ಮದ್ ಶಿಹಾಬ್ ನನ್ನು ಮದುವೆಯಾಗಿದ್ದೇನೆ ಎಂದು ಹೇಳುತ್ತಿದ್ದಾಳೆ. ಆದರೆ ಇತರ ಇಬ್ಬರು ಪಾಕಿಸ್ತಾನಿಯರು ಖಾಸಿಫ್ ಮತ್ತು ಕಿರ್ಹಾನ್ ಕೂಡಾ ಮದುವೆಯಾಗಿರುವುದಾಗಿ ಹೇಳುತ್ತಿದ್ದಾರೆ. ಇದರಿಂದ ಅವರ ಮದುವೆ ಬಗ್ಗೆಯೇ ಅನುಮಾನಗಳು ಹುಟ್ಟಿವೆ.

ಇನ್ನು ಮೂವರೂ ಆದಷ್ಟು ಬೇಗ ಆಧಾರ್ ಕಾರ್ಡ್ ಪಡೆಯಲು ಯತ್ನಿಸಿದ್ದು ತನಿಖಾ ಸಂಸ್ಥೆಗಳ ಗಮನ ಸೆಳೆದಿದ್ದು, ಹೆಚ್ಚಿನ ವಿಚಾರಣೆಯಲ್ಲಿ ನಿರತರಾಗಿದ್ದಾರೆ. ಇವೆಲ್ಲದರ ಜತೆಗೆ ಕತಾರ್ ಮತ್ತು ಪಾಶ್ಚಿಮಾತ್ಯ ದೇಶಗಳು ಬದುಕಲು ಹೆಚ್ಚು ಸುರಕ್ಷಿತವಾಗಿರುವಾಗ ಭಾರತಕ್ಕೇ ಬಂದಿದ್ದು ಏಕೆ ಎಂಬುದೂ ಅನುಮಾನ ಹುಟ್ಟಿಸುತ್ತಿದೆ. ಹೀಗೆ ಪ್ರಕರಣದ ತನಿಖೆಗೆ ಚುರುಕಾಗಿ ನಡೆಯುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+