ಬೆಂಗಳೂರು : ಪೊಲೀಸ್ ಪೇದೆ ಮೇಲೆ ಯುವಕರಿಂದ ಹಲ್ಲೆ
ಬೆಂಗಳೂರು, ಸೆ. 16 : ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಕಲ್ಲು ಮತ್ತು ಬಾಟಲಿಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗಾಯಗೊಂಡಿರುವ ಪೇದೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ರಾಮಮೂರ್ತಿ
ನಗರ
ಸಮೀಪದ
ಕಸ್ತೂರಿ
ನಗರದಲ್ಲಿ
ಮಂಗಳವಾರ
ತಡರಾತ್ರಿ
ಈ
ಘಟನೆ
ನಡೆದಿದೆ.
ಮೂವರು
ಯುವಕರ
ಗುಂಪು
ರಾಮಮೂರ್ತಿ
ನಗರ
ಠಾಣೆಯ
ಪೇದೆ
ಪುಂಡಲೀಕ
ಮೇಲೆ
ಹಲ್ಲೆ
ನಡೆಸಿ
ಪರಾರಿಯಾಗಿದೆ.
ಗಾಯಗೊಂಡ
ಪೇದೆಯನ್ನು
ಹ್ಯಾಸ್
ಮಾಟ್
ಆಸ್ಪತ್ರೆಗೆ
ದಾಖಲು
ಮಾಡಲಾಗಿದೆ.
[822
ಪೊಲೀಸ್
ಪೇದೆಗಳ
ಹುದ್ದೆಗೆ
ಅರ್ಜಿ
ಆಹ್ವಾನ]
ಮಂಗಳವಾರ ತಡರಾತ್ರಿ ಮೂವರು ಯುವಕರ ಗುಂಪು ಕಸ್ತೂರಿ ನಗರ ಸಮೀಪ ಮದ್ಯಪಾನ ಮಾಡುತ್ತ ಕುಳಿತಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಪುಂಡಲೀಕ ಅವರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ. [ಸಮಯಪ್ರಜ್ಞೆ ಮೆರೆದು ಪ್ರಾಣ ಉಳಿಸಿದ ಪೊಲೀಸ್ ಪೇದೆ!]
ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮದ್ಯದ ಬಾಟಲಿ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿರುವುದರಿಂದ ಪುಂಡಲೀಕ ಅವರ ಮುಖದ ಬಲಭಾಗದ ಮೂಳೆ ಮುರಿದು ಹೋಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.