ಏಟು ತಿಂದು ಮಲಗಿರುವ ಶಾಸಕ ಆನಂದ್ ಸಿಂಗ್ ನೀಡಿದ್ದಾರೆ ಶಾಕಿಂಗ್ ಹೇಳಿಕೆ
ಬೆಂಗಳೂರು, ಜನವರಿ 21: ಈಗಲ್ ಟನ್ ರೆಸಾರ್ಟ್ನಲ್ಲಿ ಮೊನ್ನೆ ರಾತ್ರಿ ನಡೆದ ಮಾರಾಮಾರಿಯಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಂದ ಹೊಡೆತ ತಿಂದು ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್ ಅವರು ಬಿಡದಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಶಾಸಕ ಗಣೇಶ್ ನನ್ನ ಕೊಲೆಗೆ ಯತ್ನಿಸಿದ ಎಂದು ಆನಂದ್ ಸಿಂಗ್ ಹೇಳಿದ್ದು, ಸಂತ್ರಸ್ತನ ಈ ಹೇಳಿಕೆ ಗಣೇಶ್ ಅವರಿಗೆ ಬಂಧನ ಭೀತಿಯನ್ನು ಎದುರಾಗಿಸಿದೆ. ಆನಂದ್ ಸಿಂಗ್ ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯ ಪೂರ್ಣ ವರದಿ ಇಲ್ಲಿದೆ.
'ಪಕ್ಷದ ಸೂಚನೆಯಂತೆ ಈಗಲ್ಟನ್ ರೆಸಾರ್ಟ್ನಲ್ಲಿ ಇದ್ದ ನಾನು ಶನಿವಾರ ರಾತ್ರಿ ಊಟ ಮುಗಿಸಿ ಸಚಿವ ತುಕಾರಾಂ, ಶಾಸಕ ರಘುಮೂರ್ತಿ, ತನ್ವೀರ್ ಸೇಠ್ ಅವರುಗಳ ಜೊತೆ ನನ್ನ ರೂಮ್ (ನಂ 207) ಕಡೆ ಹೋಗುತ್ತಿದ್ದೆ. ಆಗ ಬಹು ಕೆಟ್ಟ ಭಾಷೆಯಲ್ಲಿ ನನ್ನ ಕೂಗಿ ಕರೆದು ನಿಲ್ಲುವಂತೆ ಕಂಪ್ಲಿ ಶಾಸಕ ಗಣೇಶ್ ಕೂಗಾಡಿದರು ಎಂದು ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ. (ಯಾವ ಪದಗಳನ್ನು ಬಳಸಿದರೆಂದು ಪೊಲೀಸ್ ಹೇಳಿಕೆಯಲ್ಲಿ ನಮೂದಾಗಿದೆ)

'ಬಂದೂಕು ಕೊಡಿ ಸುಡುತ್ತೇನೆ' ಎಂದರು
'ಏನೋ, ನನ್ನ ವಿರುದ್ಧ ನೀನು ಪಕ್ಷದ ಮುಖಂಡರನ್ನು ಎತ್ತಿ ಕಟ್ಟುತ್ತೀಯಾ?' ಎಂದು ಹೇಳಿ ನನ್ನ ಮೇಳೆ ಧಿಡೀರ್ ದಾಳಿ ನಡೆಸಿದ ಶಾಸಕ ಗಣೇಶ್, ನನ್ನ ಮುಖಕ್ಕೆ ಗುದ್ದಿ, ಗೋಡೆಗೆ ತಲೆಯನ್ನು ಗುದ್ದಿಸಿದರು. 'ಎಲ್ಲಿ ನನ್ನ ಬಂದೂಕು, ಇವನನ್ನು ಇಲ್ಲಿಯೇ ಮುಗಿಸುತ್ತೇನೆ, ಇವನು ನನ್ನ ರಾಜಕೀಯ ಮುಗಿಸುವ ಯತ್ನ ಮಾಡುತ್ತಿದ್ದಾನೆ, ನಾನು ಇವನನ್ನು ಮುಗಿಸುತ್ತೇನೆ' ಎಂದು ಕೂಗಾಡಿದರು ಎಂದು ಆನಂದ್ ಸಿಂಗ್ ಹೇಳಿಕೆ ದಾಖಲಿಸಿದ್ದಾರೆ.

'ಶಾಸಕ ಗಣೇಶ್ ಸಮಾಧಾನಕ್ಕೆ ಯತ್ನಿಸಿದೆ'
'ಆಗಲೂ ಕೂಡ ನಾನು , ಗಣೇಶ್ ನೋಡಪ್ಪ ನೀನು ನಮ್ಮ ಹುಡುಗ, ನನ್ನ ಸಹೋದರ ಸಮಾಜದಂತಿರುವ ವಾಲ್ಮೀಕಿ ಸಮಾಜದವನು, ನೀನು ಸಹ ನನ್ನ ಸಹೋದರನಿದ್ದಂತೆ ಇಲ್ಲಸದ್ದನ್ನು ತಲೆಯಲ್ಲಿಟ್ಟುಕೊಂಡು ಹೀಗೆ ಮಾಡಬೇಡ' ಎಂದು ಬುದ್ದಿ ಹೇಳಿದೆ ಎಂದು ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.

'ಹೂವಿನ ಕುಂಡ ನನ್ನ ಮೇಲೆ ಎಸೆದರು'
ನಾನು ಅಷ್ಟು ಮಾತನಾಡಿದರೂ ಕೇಳದೆ, ನಿನ್ನನ್ನು ಈಗಲೇ ಮುಗಿಸುತ್ತೇನೆ, ಈ ಸಮಯಕ್ಕಾಗಿ ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ, ಬಾ ಈಗ ಸಾಯುವ ಸಮಯ ಬಂದಿದೆ' ಎಂದು ಹೇಳುತ್ತಾ, ರೆಸಾರ್ಟ್ನಲ್ಲಿದ್ದ ಹೂವಿನ ಕುಂಡವನ್ನು ನನ್ನ ಮೇಲೆ ಎಸೆದರು, ಅದು ತಲೆಗೆ ತಾಗಿ ಪೆಟ್ಟಾಯಿತು ಎಂದು ಆನಂದ್ ಸಿಂಗ್ ತಮಗೆ ಗಾಯವಾದ ಬಗೆಯನ್ನು ಪೊಲೀಸರ ಮುಂದೆ ವಿವರಿಸಿದ್ದಾರೆ.

'ಹೊಟ್ಟೆಗೆ ಗುದ್ದಿದರು, ನನಗೆ ಪ್ರಜ್ಞೆ ಹೋಯಿತು'
ಅಷ್ಟು ಆದರೂ ಸಹ ಮುಷ್ಟಿಯಿಂದ ನನ್ನ ಕಿಬ್ಬೊಟ್ಟೆಗೆ ಬಹುವಾಗಿ ಹೊಡೆದರು. ಆ ನಂತರ ನಾನು ಅರೆಪ್ರಜ್ಞಾವಸ್ಥೆಗೆ ತಲುಪಿದೆ, ಆ ನಂತರ ಏನಾಯಿತು ಎಂದು ನನಗೆ ಗೊತ್ತಾಗಿಲ್ಲ. ನಾನು ಕಣ್ಣು ಬಿಟ್ಟಾದ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಯಲ್ಲಿದ್ದೆ. ಹಾಗಾಗಿ ಈ ದೂರನ್ನು ಒಂದು ದಿನ ತಡವಾಗಿ ನೀಡುತ್ತಿದ್ದೇನೆ ಎಂದು ಆನಂದ್ ಸಿಂಗ್ ಪೊಲೀಸರಿಗೆ ಹೇಳಿದ್ದಾರೆ.

'ನನಗೆ ಜೀವ ಬೆದರಿಕೆ ಇದೆ'
ನನಗೆ ಜೀವಬೆದರಿಕೆ ಇದ್ದು, ನನ್ನನ್ನು ಕೊಲ್ಲುವ ಉದ್ದೇಶದಿಂದ ನನ್ನ ಮೇಲೆ ಹಲ್ಲೆ ನಡೆದಿದೆ. ನನಗೆ ತೀವ್ರತೆರನಾದ ಹಲ್ಲೆ ಮಾಡಿದ ಶಾಸಕ ಗಣೇಶ್ ಅವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಂಡು ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂದು ಶಾಸಕ ಆನಂದ್ ಸಿಂಗ್ ಪೊಲೀಸರ ಬಳಿ ಮನವಿ ಮಾಡಿದ್ದಾರೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications