ಸರ್ಕಸ್ ಬಾಲಕಿ ಮತ್ತು ಕತ್ತೆ ಮದುವೆ: ಅಸೆಂಬ್ಲಿಯಲ್ಲಿ ಸ್ವಾರಸ್ಯಕರ ಚರ್ಚೆ
ಬೆಂಗಳೂರು, ಜು.11: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಕತ್ತೆ ಮದುವೆಯಂತೆ ಎಂದು ಬಿಜೆಪಿ ಟೀಕಿಸಿದರೆ, ಸರ್ಕಸ್ನ ಬಾಲಕಿಯನ್ನು ಮದುವೆಯಾಗಲು ಕಾದ ಕತ್ತೆಯಂತಾಗಿದೆ ಎಂದು ಜೆಡಿಎಸ್ ತಿರುಗೇಟು ನೀಡಿದ ಹಾಸ್ಯಮಯ ಪ್ರಸಂಗ ವಿಧಾನಸಭೆಯಲ್ಲಿ ಬುಧವಾರ ನಡೆಯಿತು.
ಬಜೆಟ್ ಚರ್ಚೆ ವೇಳೆ ಜೆಡಿಎಸ್ ಶಾಸಕ ಎಟಿ ರಾಮಸ್ವಾಮಿ ಭಾಷಣ ಆರಂಭಿಸಿ ಬಿಜೆಪಿಯವರು ನಮ್ಮ ಸರ್ಕಾರವನ್ನು ಕುರುಡರು, ಕುಂಟರ ಸರ್ಕಾರ ಎಂದು ಟೀಕಿಸಿದ್ದಾರೆ, ಆದರೆ ಒಂದು ಪ್ರಜಾಪ್ರಭುತ್ವದ ತಳಹದಿಯಲ್ಲಿರುವ ಸರ್ಕಾರವನ್ನು ಈ ರೀತಿ ಹೀಯಾಳಿಸಬಾರದು, ಬಿಜೆಪಿಯವರು ತುಂಬಾ ಆತುರದಲ್ಲಿದ್ದಂತಿದೆ.
ಕಾಂಗ್ರೆಸ್- ಜೆಡಿಎಸ್ ಸರ್ಕಾರ ರಚನೆಯಾದ ಬಳಿಕ ತೀವ್ರ ಅವಸರ ಮಾಡದೆ ಕೆಲ ಸಮಯ ಆಡಳಿತವನ್ನು ಕಾದು ನೋಡಬೇಕು. ಅತಿ ಆತುರ ಮಾಡಿದರೆ ಅಪಘಾತ ಗ್ಯಾರಂಟಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಇದೇ ವೇಳೆ ತಾವು ಬಾಲ್ಯದಲ್ಲಿ ಸರ್ಕಸ್ ನೋಡಿದ ಘಟನೆಯನ್ನು ವಿವಿರಿಸಿ ಸರ್ಕಸ್ನಲ್ಲಿ ಬಾಲಕಿಯೊಬ್ಬಳು ಹಗ್ಗದ ಮೇಲೆ ನಡೆಯುತ್ತಿದ್ದಳು ಆ ಬಾಲಕಿ ಸರ್ಕಸ್ನಲ್ಲಿ ನಡೆಯುವ ಮುನ್ನ ಆಕೆಯ ತಂದೆ ನೀನು ಹಗ್ಗದಿಂದ ಜಾರಿ ಬಿದ್ದರೆ ಕತ್ತೆ ಜೊತೆಗೆ ಮದುವೆ ಮಾಡುವುದಾಗಿ ಬೆದರಿಸುತ್ತಿದ್ದರು.
ಈ ಮಾತನ್ನು ಕೇಳಿಸಿಕೊಂಡ ಕತ್ತೆ ಬಾಲಕಿ ಯಾವತ್ತೋ ಒಂದು ದಿನ ಬೀಳುತ್ತಾಳೆ ತನ್ನನ್ನು ಮದುವೆಯಾಗುತ್ತಾಳೆ ಎಂದು ಕಾದು ಕುಳಿತಿತ್ತು. ಆದರೆ ಬಾಲಕಿ ಯುವತಿಯಾಗಿ ಮದುವೆ ಆಗುವ ವರೆಗೆ ಎಲ್ಲಿಯೂ ಬೀಳಲಿಲ್ಲ ಹೀಗಾಗಿ ಕತೆತ ವಯಸ್ಸಾಗಿ ಸತ್ತು ಹೋಯಿತು ಹೀಗೆ ಬಿಜೆಪಿಯವರು ಜೆಡಿಎಸ್ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂದು ಕಾದು ಕುಳಿತುಕೊಳ್ಳಬೇಕಾಗುತ್ತದೆ ಎಂದು ಟಾಂಗ್ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸಿಟಿ ರವಿ ನಮ್ಮ ಕಡೆ ಮದುವೆಯಾಗದಿದ್ದರೆ ಕತ್ತೆಗಳ ಮದುವೆ ಮಾಡಿಸುತ್ತಾರೆ ಹಾಗೆ ಜೆಡಿಎಸ್ ಮತ್ತ ಕಾಂಗ್ರೆಸ್ ನಡುವೆ ಮಳೆ ಬಾರದ ಸಂದರ್ಭದಲ್ಲಿ ಮದುವೆಯಾದಂತಾಗಿದೆ ಎಂದು ಎದುರೇಟು ನೀಡಿದರು.
ಇದನ್ನು ಬಲವಾಗಿ ಸಮರ್ಥಿಸಿಕೊಂಡ ಸಚಿವ ಬಂಡೆಪ್ಪ ಕಾಶೆಂಪೂರ್ ಕತ್ತೆಗಳ ಮದುವೆಯಾದರೆ ಆಗಲಿ ಅದರೆ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ, ಮಳೆಯಾದರೆ ಮಾತ್ರ ಸುಭೀಕ್ಷವಾಗಿರುತ್ತದೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
ಆಗ ಶಾಸಕ ರಾಮಸ್ವಾಮಿ ಕತ್ತೆಗಳ ವಿಚಾರ ಹಾಗಿರಲಿ ಮನುಷ್ಯರಾದ ನಾವು ಒಂದು ಪ್ರಜಾಪ್ರಭುತ್ವ ಸರ್ಕಾರವನ್ನು ಒಪ್ಪಿಕೊಂಡು ಜನರ ಒಳಿತಿಗಾಗಿ ಕೆಲಸ ಮಾಡಬೇಕಾಗುತ್ತದೆ ಎನ್ನುವ ಮೂಲಕ ಚರ್ಚೆಗೆ ತೆರೆ ಎಳೆದರು.
-
ದ್ವಿತೀಯ ಪಿಯುಸಿ 'ಕಲಾ' ವಿಭಾಗದಲ್ಲಿ ಶೇ.72.86 ರಷ್ಟು ಫಲಿತಾಂಶ: ಟಾಪರ್ಸ್ ಲಿಸ್ಟ್ ಇಲ್ಲಿದೆ -
2nd PUC 'ವಾಣಿಜ್ಯ' ವಿಭಾಗದಲ್ಲಿ ಶೇ.88.4ರಷ್ಟು ಸಾಧನೆ: ಇಬ್ಬರಿಗೆ 600ಕ್ಕೆ 600 ಅಂಕ, ಇವರೇ ಟಾಪರ್ಸ್ -
UGCET ಅಭ್ಯರ್ಥಿಗಳ ಗಮನಕ್ಕೆ: ಇದೇ ತಿಂಗಳು CET ಪರೀಕ್ಷೆ, ರಿಲೀಸಾದ ನಕಲಿ ಲಿಂಕ್ ಬಗ್ಗೆ ಎಚ್ಚರ -
2nd PUC ಫಲಿತಾಂಶದಲ್ಲಿ ಶೇ. 13ರಷ್ಟು ಏರಿಕೆ; ಕಲಿಕೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಫಸ್ಟ್: ಮಧು ಬಂಗಾರಪ್ಪ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್ -
2025ರ ದ್ವಿತೀಯ PUC ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಮಿಂಚಿದ ಪ್ರತಿಭೆಗಳು; ಇಲ್ಲಿದೆ ಟಾಪರ್ಗಳ ಪಟ್ಟಿ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ?












Click it and Unblock the Notifications