Get Updates
Get notified of breaking news, exclusive insights, and must-see stories!

ಫಲಿತಾಂಶದ ಬಗ್ಗೆ ಆತಂಕ, ಮತ್ತೆ ಜ್ಯೋತಿಷಿಗಳ ಮೊರೆ ಹೋದ ಕುಮಾರಸ್ವಾಮಿ

Recommended Video

      ಮಂಡ್ಯ ಚುನಾವಣಾ ಫಲಿತಾಂಶದಿಂದ ಆತಂಕಗೊಂಡು ಜ್ಯೋತಿಷಿಗಳನ್ನ ಭೇಟಿ ಮಾಡಿದ ಎಚ್ ಡಿ ಕೆ Oneindia Kannada

      ಬೆಂಗಳೂರು, ಮೇ 10: ಹೋಮ, ಹವನ, ದೇವಸ್ಥಾನಗಳ ಭೇಟಿ ಬಳಿಕ ಇದೀಗ ಸಿಎಂ ಕುಮಾರಸ್ವಾಮಿ ಅವರು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ಹೀಗೆ ಜ್ಯೋತಿಷಿಗಳ ಬಳಿ ಹೋಗುವುದು ಅವರಿಗೆ ಹೊಸದಲ್ಲದಿದ್ದರೂ ಲೋಕ ಫಲಿತಾಂಶ ಮುಂದಿದ್ದಾಗ ಮಾಡಿರುವ ಈ ಭೇಟಿ ಮಹತ್ವ ಪಡೆದುಕೊಂಡಿದೆ.

      ಕುಮಾರಸ್ವಾಮಿ ಅವರು ಇಂದು ತಮ್ಮ ನಂಬಿಕೆಯ ಜ್ಯೋತಿಷಿ ದ್ವಾರಕನಾಥ ಅವರನ್ನು ಭೇಟಿ ಮಾಡಿದ್ದಾರೆ. ಬೆಳಿಗ್ಗೆ ಹೈಕೋರ್ಟ್‌ ಹೊಸ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರ ಪ್ರಮಾಣವಚನ ಕಾರ್ಯಕ್ರಮ ಮುಗಿಸಿ ಕೂಡಲೇ, ಆರ್‌.ಟಿ.ನಗರದಲ್ಲಿರುವ ದ್ವಾರಕಾನಾಥ್ ಅವರ ಮನೆಗೆ ಭೇಟಿ ನೀಡಿದರು.

      ಮಂಡ್ಯ ಚುನಾವಣೆ ಬಗ್ಗೆ ಆತಂಕಗೊಂಡಿರುವ ಕುಮಾರಸ್ವಾಮಿ ಅವರು ಆ ಬಗ್ಗೆ ಮಾತನಾಡಲು, ಹಾಗೂ ಸರ್ಕಾರಕ್ಕೆ ಮತ್ತೆ ಅಸ್ಥಿರತೆಯ ಭೀತಿ ಉಂಟಾಗಿರುವ ಕಾರಣದಿಂದಾಗಿ ಕುಮಾರಸ್ವಾಮಿ ಅವರು ಅಚಾನಕ್ ಆಗಿ ಜ್ಯೋತಿಷಿಗಳನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

      ಮಂಡ್ಯ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸುವ ಮೊದಲೂ ಸಹ ಕುಮಾರಸ್ವಾಮಿ ಅವರು ದ್ವಾರಕಾನಾಥ್ ಅವರನ್ನು ಭೇಟಿಯಾಗಿದ್ದರು. ಅವರ ಸಲಹೆ ಪಡೆದ ನಂತರವೇ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಆದರೆ ಅಲ್ಲಿ ಅವರಿಗೆ ಭಾರಿ ಪೈಪೋಟಿಯೇ ಎದುರಾಗಿತ್ತು.

      ಈಗಾಗಲೇ ಇವಿಎಂನಲ್ಲಿ ಭವಿಷ್ಯ ಭದ್ರ

      ಈಗಾಗಲೇ ಇವಿಎಂನಲ್ಲಿ ಭವಿಷ್ಯ ಭದ್ರ

      ಮೇ 23 ರಂದು ಫಲಿತಾಂಶ ಇದ್ದು, ಅಂದು ನಿಖಿಲ್ ಕುಮಾರಸ್ವಾಮಿ ಭವಿಷ್ಯ ನಿರ್ಧಾರವಾಗಲಿದೆ. ಆ ಬಗ್ಗೆಯೇ ಚರ್ಚಿಸಲು ಕುಮಾರಸ್ವಾಮಿ ಅವರು ದ್ವಾರಕಾನಾಥ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈಗಾಗಲೇ ಮಂಡ್ಯ ಕ್ಷೇತ್ರದ ಅಭ್ಯರ್ಥಿಗಳಾದ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅವರ ಭವಿಷ್ಯ ಇವಿಎಂ ಮಷೀನ್‌ಗಳಲ್ಲಿ ಭದ್ರವಾಗಿದೆ.

      ಮಾಧ್ಯಮಗಳಿಗೆ ನಿಷೇಧ

      ಮಾಧ್ಯಮಗಳಿಗೆ ನಿಷೇಧ

      ಕುಮಾರಸ್ವಾಮಿ ಅವರು ದ್ವಾರಕಾನಾಥ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭ ಅದನ್ನು ಚಿತ್ರೀಕರಿಸಲು ಮುಂದಾದ ಮಾಧ್ಯಮಗಳಿಗೆ ಪೊಲೀಸರು ತಡೆ ಒಡ್ಡಿದ ಘಟನೆ ಸಹ ನಡೆದಿದೆ. ಈ ಸಂದರ್ಭ ಕೆಲವು ಪೊಲೀಸರು ಮತ್ತು ಮಾಧ್ಯಮದವರ ನಡುವೆ ಮಾತಿನ ಚಕಮಕಿ ನಡೆದಿದೆ.

      ಕೆಲವು ದಿನಗಳ ಹಿಂದೆ ಹೋಮ, ಹವನ

      ಕೆಲವು ದಿನಗಳ ಹಿಂದೆ ಹೋಮ, ಹವನ

      ಕುಮಾರಸ್ವಾಮಿ ಅವರು ಕೆಲವು ದಿನಗಳ ಹಿಂದಷ್ಟೆ ಹಲವು ಹೋಮ ಹವನಗಳನ್ನು ಸಹ ನೆರವೇರಿಸಿದ್ದರು, ಈ ಹವನಗಳು ಸರ್ಕಾರದ ಉಳಿವು ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಜಯಕ್ಕಾಗಿ ಮಾಡಲಾಗಿದ್ದವು ಎಂದು ಹೇಳಲಾಗಿತ್ತು, ಅಂದೂ ಸಹ ಮಾಧ್ಯಮಗಳಿಗೆ ಪೂರ್ಣ ನಿರ್ಭಂದ ಹೇರಲಾಗಿತ್ತು.

      ಫಲಿತಾಂಶದ ದಿನ ಹತ್ತಿರವಾದಷ್ಟೂ ಹೆಚ್ಚುತ್ತಿದೆ ಆತಂಕ

      ಫಲಿತಾಂಶದ ದಿನ ಹತ್ತಿರವಾದಷ್ಟೂ ಹೆಚ್ಚುತ್ತಿದೆ ಆತಂಕ

      ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆ ಸರ್ಕಾರಕ್ಕೆ ಅಸ್ಥಿರತೆಯ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ನಡೆದ ಕೆಲವು ಘಟನಾವಳಿಗಳು ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಆತಂಕ ತಂದಿವೆ, ಜೊತೆಗೆ ಮಂಡ್ಯ ಲೋಕಸಭೆ ಚುನಾವಣೆ ಬಗ್ಗೆ ಬಂದಿರುವ ಗುಪ್ತಚರ ವರದಿಗಳು ಸಹ ಕುಮಾರಸ್ವಾಮಿ ಅವರ ನಿದ್ದೆಗೆಡಿಸಿವೆ ಎನ್ನಲಾಗಿದೆ. ಹಾಗಾಗಿ ಅವರು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+