ಕಲಾ ಸಮುದಾಯದ ಕುಂಭಮೇಳ ಚಿತ್ರಸಂತೆ ಕಲಾವಿದರಿಗೆ ಬಲ ನೀಡಲಿ
ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜನೆಯ 16ನೇ ಚಿತ್ರಸಂತೆ ಸಾಂಗವಾಗಿ ನಡೆದಿದೆ. ಈ ಬಾರಿ ಮಹಾತ್ಮಾ ಗಾಂಧೀಜಿ ಕುರಿತ ಚಿತ್ರ ಗ್ಯಾಲರಿ ಎಲ್ಲರ ಆಕರ್ಷಣೆಯಾಗಿದೆ. ಚಿತ್ರ ಕಲಾವಿದರ ಪಾಲಿನ ಕುಂಭಮೇಳದಿಂದ ಬಡ ಚಿತ್ರಕಾರರಿಗೆ ಇನ್ನಷ್ಟು ನೆರವು ಸಿಗಬೇಕಿದೆ ಎಂದು ವೃತ್ತಿಪರ ಕಲಾವಿದ ಅಶೋಕ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಬಾರಿ 1400 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಚಿತ್ರಸಂತೆಯಲ್ಲಿ ಚಿತ್ರಕಲಾವಿದರು, ಸ್ವಯಂ ಸೇವಕರು, ಭದ್ರತಾ ಸಿಬ್ಬಂದಿ ಸೇರಿದಂತೆ ಚಿತ್ರಸಂತೆಯಲ್ಲಿ ಭಾಗವಹಿಸುವವರಿಗೆ ಊಟ, ಕುಡಿಯುವ ನೀರು, ತಿಂಡಿ ವ್ಯವಸ್ಥೆ ಮಾಡಲಾಗಿದೆ.

ಚಿತ್ರಸಂತೆ ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ನಾಡಿನ ಬಡ ಕಲಾಸಮುದಾಯಕ್ಕೆ ಆರ್ಥಿಕ ಪರಿಸ್ಥಿತಿಯನ್ನು ದೂರಗೊಳಿಸುತ್ತದೆ ಎಂದರೆ ತಪ್ಪಾಗಲಾರದು, ಕಲಾ ಸಮುದಾಯದಲ್ಲಿ ಕೆಲವರಿಗೆ ಚಿತ್ರಸಂತೆಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಆದರೆ ಈಗ ಕಲಾಸಮುದಾಯಕ್ಕೆ ಕುಂಭಮೇಳ ಎಂದು ಮನ್ನಣೆ ಪಡೆದಿದೆ.
ಸಮುದಾಯದ ಏಕತಾನತೆಯನ್ನು ಮುರಿಯುವ ಒಂದು ವರ್ಗವಾದರೆ, ಬಹಳಷ್ಟು ಕಲಾವಿದರನ್ನು ಪ್ರೀತಿಯಿಂದ ಕಾಣುವ ನೋಡುವ ಸ್ಥಳ ಚಿತ್ರಸಂತೆಯಾಗಿದೆ, ಸಾಹಿತ್ಯಸಮ್ಮೆಳನಕ್ಕೆ ದೊರೆಯುವ ಗೌರವ ನಮ್ಮಲ್ಲಿ ಚಿತ್ರಕಲೆಗಿಲ್ಲ ಎನ್ನುವ ಕೊರಗನ್ನು ಚಿತ್ರಸಂತೆ ನೀಗಿಸಬಹುದು ಎನ್ನುವುದೆ ನನ್ನ ಅಭಿಲಾಸೆ.

ನಮ್ಮ ಹಿರಿಯರು ಲೈಬ್ರರಿಯಲ್ಲಿನ ಪುಸ್ತಕಗಳಾಗಿದ್ದಾರೆ,? ಅದನ್ನು ತೆಗೆದು ಓದುವ ಸಂಪ್ರದಾಯ ಕಲಾವಿದರಿಗಿಲ್ಲ, ಕಲಾವಿದರು ಮುಖಾಮುಖಿಯಾಗಿ ಬೆರೆಯುವ ಸಮ್ಮೆಳನಗಳಿಲ್ಲ, ನಮ್ಮ ಸಮುದಾಯಕ್ಕೆ ಪ್ರೀತಿ ಹೇಗೆ ಹುಟ್ಟಬೇಕು, ಚೌಕಟ್ಟನ್ನು ಮೀರುವ ವಿಧಾನವೇ ಕಲೆ ಎಂದವರು? ಚೌಕಟ್ಟಿನ ಒಳಗಿರುವುದೇ ಸಮುದಾಯ. ಅಂತಹ ಸಮುದಾಯಕ್ಕೆ ಚಿತ್ರಸಂತೆ ಪ್ರೀತಿಯ ಹಬ್ಬ ಎನಿಸುತ್ತದೆ.

ಅಲ್ಲಿ ಭಾಗವಹಿಸದವರೂ ಕೂಡ ಎಲ್ಲರನ್ನು ನೋಡಬಹುದೆಂಬ ದಿನ ಚಿತ್ರಸಂತೆ. ಮುಂದಿನ ದಿನಗಳಲ್ಲಿ ಚಿತ್ರಕಲಾ ಪರಿಷತ್ತು, ಅಧ್ಯಕ್ಷರಾದ ಶಂಕ್ರಗೌಡ್ರು ವೃತ್ತಿಪರ ಕಲಾವಿದರನ್ನು ಗುರುತಿಸಿ ಚಿತ್ರಸಂತೆಯ ಗೌರವವನ್ನು ಹೆಚ್ಚಿಸಬೇಕೆಂದು ಕಳಕಳಿಯ ವಿನಂತಿ,
ಮತ್ತು ಕಲಾವಿದರಲ್ಲಿ ವಿನಂತಿಸುವುದೇನೆಂದರೆ ಕಲಾತ್ಮಕ ಚಿತ್ರಗಳನ್ನು ರಚಿಸಿದರೆ ಮಾತ್ರ ನಿಮಗೆ ಭವಿಷ್ಯವಿದೆ, ಬೆಲೆ ಇದೆ. ಇಲ್ಲದಿದ್ದಲ್ಲಿ ಚಿತ್ರಸಂತೆ ಕೇವಲ ಸಂತೆಯಾಗಬಾರದು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications