ಚಿಕ್ಕಬಳ್ಳಾಪುರದ ಜನರೇನು ಮೂರ್ಖರಲ್ಲ : ಬಚ್ಚೇಗೌಡ
(ಬಚ್ಚೇಗೌಡರ ಸಂದರ್ಶನದ ಮುಂದುವರಿದ ಭಾಗ)
ಪ್ರಶ್ನೆ : ಕುಮಾರಸ್ವಾಮಿಯವರ ಪ್ರವೇಶದಿಂದ ನಿಮ್ಮ ಗೆಲುವಿನ ಸಾಧ್ಯತೆಗೆ ತೊಂದರೆಯಾಗಿದೆಯಾ?
ಬಚ್ಚೇಗೌಡ : ನೋಡಿ, ಯಾವುದೇ ರಾಜಕಾರಣಿ ಜನರನ್ನು ಒಂದು ಸಾರಿ ಮೂರ್ಖರನ್ನಾಗಿ ಮಾಡಬಹುದು. ಪದೇ ಪದೇ ಮೂರ್ಖರನ್ನಾಗಿ ಮಾಡೋಕಾಗಲ್ಲ. ಅವರು ರಾಮನಗರದ ಜನರನ್ನು ಹೇಗೆ ನಡುನೀರಲ್ಲಿ ಕೈಬಿಟ್ಟರು ಅನ್ನೋದು ಚಿಕ್ಕಬಳ್ಳಾಪುರದ ಜನತೆಗೆ ಗೊತ್ತಿದೆ. ರಾಮನಗರದ ಜನ ಮಾಡಿದ ತಪ್ಪನ್ನ ಇಲ್ಲಿನ ಜನ ಮಾಡಲ್ಲ ಅನ್ನೋ ನಂಬಿಕೆ ನನಗಿದೆ.
ಪ್ರಶ್ನೆ : ವೀರಪ್ಪ ಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಈಗ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. ಇವರ ವರ್ಚಸ್ಸಿನ ವಿರುದ್ಧ ನಿಮಗೆ ಗೆಲುವು ಸಾಧ್ಯವೇ?
ಬಚ್ಚೇಗೌಡ : ವೀರಪ್ಪ ಮೊಯ್ಲಿ ಕ್ಷೇತ್ರದ ಜನತೆಗೆ ಏನು ಮಾಡಿದ್ದಾರೆ ಅನ್ನೋದನ್ನ ನೀವು ಇಲ್ಲಿನ ಜನರನ್ನ ಕೇಳಬೇಕು. ಚುನಾವಣೆ ಹತ್ತಿರ ಆಗುತ್ತಿದ್ದಂತೆ ಎತ್ತಿನಹೊಳೆ ಯೋಜನೆಯನ್ನು ಉದ್ಘಾಟನೆ ಮಾಡೋ ಹಾಗೆ ನಾಟಕ ಆಡಿ ಜನರ ಕಣ್ಣಿಗೆ ಮಣ್ಣೆರಚುವುದಕ್ಕೆ ಪ್ರಯತ್ನಿಸಿದರು. ಆದರೆ ಜನ ಮರುಳಾಗಲಿಲ್ಲ. ಅವರಿಗೆ ಕಪ್ಪು ಭಾವುಟ ತೋರಿಸಿ ಅವರ ಬಣ್ಣ ಬಯಲು ಮಾಡಿದರು. ಯಾರು ದೊಡ್ಡವರು, ಯಾರು ಚಿಕ್ಕವರು ಅನ್ನೋದನ್ನ ಚುನಾವಣೆ ನಿರ್ಧರಿಸುತ್ತದೆ.

ಪ್ರಶ್ನೆ : ಕುಮಾರಸ್ವಾಮಿ ಪ್ರವೇಶದಿಂದ ಇಲ್ಲಿನ ಸ್ಪರ್ಧೆ ವೀರಪ್ಪ ಮೊಯ್ಲಿ ವರ್ಸಸ್ ಕುಮಾರಸ್ವಾಮಿ ಆಗಿದೆಯಾ?
ಬಚ್ಚೇಗೌಡ : ಖಂಡಿತಾ ಇಲ್ಲ. ನೋಡಿ ಇದೆಲ್ಲಾ ಕೆಲವು ಮಾಧ್ಯಮದವರ ಸೃಷ್ಟಿ. ಸ್ಪರ್ಧೆ ಏನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ. ಬಹುಶ: ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮುಖಾಮುಖಿ ಸ್ಪರ್ಧಿಸುತ್ತಿರೋದರಿಂದ ಮಾಧ್ಯಮ ಸ್ವಲ್ಪ ಈ ವಿಷಯಕ್ಕೆ ಪ್ರಾಮುಖ್ಯತೆ ಕೊಟ್ಟಿರಬಹುದು. ಆದರೆ ವಸ್ತುಸ್ಥಿತಿ ಏನು ಅಂದರೆ ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತು ನನಗೆ ಬಹಳ ಬೆಂಬಲ ಇದೆ.
ಪ್ರಶ್ನೆ : ನೀವು ಹಿಂದೆ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಮಂತ್ರಿಯಾಗಿದ್ದರೂ, ನಿಮ್ಮ ಕೊಡುಗೆ ಏನಿದ್ದರೂ ಹೊಸಕೋಟೆಗೆ ಮಾತ್ರ ಎಂಬ ಟೀಕೆ ಇದೆ!
ಬಚ್ಚೇಗೌಡ : ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರೂ. 3,000 ಕೋಟಿ ತಂದು ರಸ್ತೆ, ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ, ಹಲವಾರು ಕಟ್ಟಡಗಳ ನಿರ್ಮಾಣ ಇತ್ಯಾದಿ ಕೆಲಸ ಮಾಡಿದ್ದೇನೆ. ನನ್ನ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಒಂದು ಪ್ರಗತಿಪರ ಜಿಲ್ಲೆಯಾಗಿ ಬೆಳೆದು ಬಂದಿದೆ. ಬೆಂಗಳೂರು ಗ್ರಾಮಾಂತರ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ನಾನು ಕಾರ್ಮಿಕ ಹಾಗೂ ರೇಷ್ಮೆ ಮಂತ್ರಿಯಾಗಿದ್ದಾಗ, ಹಾಗೂ ಹಿಂದೆ ೯೦ರ ದಶಕದಲ್ಲಿ ಪಶುಸಂಗೋಪನೆ, ನಗರಾಭಿವೃದ್ಧಿ, ಸಾರಿಗೆ ಸಚಿವನಾಗಿದ್ದಾಗ ನೀಡಿದ ಕೊಡುಗೆ ಎಲ್ಲರಿಗೂ ಗೊತ್ತಿದೆ. ನಾನು ಕಾರ್ಮಿಕ ಸಚಿವನಾಗಿ ಹಿಂದೆಂದೂ ಆಗಿಲ್ಲದಷ್ಟು ಕೆಲಸವನ್ನ ಮಾಡಿದ್ದೇನೆ.
ಪ್ರಶ್ನೆ : ನೀವು ರಾಜ್ಯದಲ್ಲಿ ಶಾಸಕರಾಗಿದ್ದೋರು ಹಾಗೂ ಮಂತ್ರಿಯಾಗಿದ್ದೋರು. ಮೊಯ್ಲಿಯಂತಹ ಅನುಭವಿಯನ್ನು ಬಿಟ್ಟು ನಿಮ್ಮನ್ನು ಯಾಕೆ ಗೆಲ್ಲಿಸಿ ಜನ ದೆಹಲಿಗೆ ಕಳುಹಿಸಬೇಕು?
ಬಚ್ಚೇಗೌಡ : ಹೋಲಿಕೆ ಮಾಡೋದರಲ್ಲಿ ಅರ್ಥ ಇಲ್ಲ. ಹಾಗೇ ಇಲ್ಲಿ ಬರಿ ಅನುಭವ ಮುಖ್ಯ ಆಗಲ್ಲ. ಜನರಿಗೆ ನನ್ನ ಮನವಿ ಇಷ್ಟೆ. ನಾನು ಇಷ್ಟು ದಿನ ನುಡಿದಂತೆ ನಡೆದಿರೋ ರಾಜಕಾರಣಿ. ಸುಳ್ಳು ಹೇಳೊದಿಕ್ಕೆ, ಕಣ್ಣೀರು ಸುರಿಸೋದಿಕ್ಕೆ ನನಗೆ ಬರೋಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ನಾನೊಂದು ಮಾರ್ಗಸೂಚಿ ಹಾಕಿಕೊಂಡಿದ್ದೀನಿ. ಅದರ ಪ್ರಕಾರ ನಡೀತಿನಿ. ಈ ಕ್ಷೇತ್ರ ಬಿಟ್ಟು ಇನ್ನೊಂದು ಕಡೆ ಹೋಗೋಲ್ಲ. ಅದು ಜನತೆಗೂ ಗೊತ್ತಿದೆ. ಹಾಗೇನೆ ಒಂದು ಸಲ ದೆಹಲಿ ಕಡೆ ಮುಖ ಮಾಡಿದ್ರೆ ಈ ಕಡೆ ಮುಖ ತಿರುಗಿಸದೇ ಇರೋ ವ್ಯಕ್ತಿ ನಾನಲ್ಲ. ಅದೂ ಸಹ ಜನತೆಗೆ ಗೊತ್ತಿದೆ. ಈ ಕ್ಷೇತ್ರದ ಒಳಿತಿಗೆ ಕೆಲಸ ಮಾಡ್ತೀನಿ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications