ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ ಬದಲು
ಬೆಂಗಳೂರು, ಜನವರಿ 16: ಬೆಂಗಳೂರು-ಮೈಸೂರು ಮೆಮು ರೈಲು ವೇಳಾ ಪಟ್ಟಿ ಬದಲಾಗಿದೆ. ವೇಳಾಪಟ್ಟಿಯನ್ನು ಜನವರಿ 16ರಿಂದ ಅನ್ವಯವಾಗುವಂತೆ ನೈಋತ್ಯ ರೈಲ್ವೆ ಬದಲಿಸಿದೆ.
ಪ್ರತಿ ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸಂಜೆ 7.55ರ ಬದಲಾಗಿ 7.50ಕ್ಕೆ ಮೈಸೂರಿಗೆ ರೈಲು ಹೊರಡಲಿದೆ.
ರಾತ್ರಿ 10.40ಕ್ಕೆ ಮೈಸೂರು ತಲುಪಲಿದೆ. ರೈಲಿಗೆ ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ ರೈಲು ನಿಲ್ದಾಣದಲ್ಲಿ ನಿಲುಗಡೆ ಇರಲಿದೆ.

ಇದೇ ರೈಲು ಪ್ರತಿ ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ರಾತ್ರಿ 11.05ಕ್ಕೆ ಮೈಸೂರಿನಿಂದ ಹೊರಟು ಮಧ್ಯರಾತ್ರಿ 1.50ಕ್ಕೆ ಬೆಂಗಳೂರು ತಲುಪಲಿದೆ. ಮೈಸೂರಿನಿಂದ ಬರುವಾಗ ರಾಮನಗರ ನಂತರ ಕೆಂಗೇರಿಯಲ್ಲಷ್ಟೇ ನಿಲುಗಡೆ ಇರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮೆಮು ರೈಲು ಪ್ರತಿ ಸೋಮವಾರ ಹಾಗೂ ಮಂಗಳವಾರ ರಾಮನಗರದಲ್ಲಷ್ಟೇ ಸಂಚರಿಸಲಿದೆ. ಸಂಜೆ 7.50ಕ್ಕೆ ಕೆಎಸ್ಆರ್ನಿಂದ ಹೊರಟು 8.41ಕ್ಕೆ ರಾಮನಗರ ತಲುಪಲಿದೆ. ರೈಲಿಗೆ ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನಭಾರತಿ, ಕೆಂಗೇರಿ, ಹೆಜ್ಜಾಲ, ಬಿಡದಿಯಲ್ಲಿ ನಿಲುಗಡೆ ಇರಲಿದೆ. ರೈಲು ಸಂಖ್ಯೆ 66535 ಬೆಂಗಳೂರು-ರಾಮನಗರ ಮೆಮು ಭಾನುವಾರ ಹೊರತುಪಡಿಸಿ ಉಳಿದ ಆರು ದಿನಗಳು ಸಂಚಾರ ನಡೆಸಲಿದೆ.











Click it and Unblock the Notifications