ಭಾರತದ ಮೊದಲ ಶ್ರೀಮನ್ಮಾಧ್ವ ಸಂಘದ ಹೊಸ ಸಭಾಂಗಣ ಲೋಕಾರ್ಪಣೆ
ಭಾರತದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಪ್ರಾರಂಭವಾದ ಮಧ್ವ ಸಂಘಕ್ಕೆ ಇದೀಗ ಎಂಬತ್ತಾರು ವಸಂತದ ಸಂಭ್ರಮ. ಈ ಸಂಭ್ರಮಾಚರಣೆಯನ್ನು ಹೆಚ್ಚಿಸಲು ಮೇ5 ರಂದು ಚಾಮರಾಜಪೇಟೆಯ ಶ್ರೀಮನ್ಮಾಧ್ವ ಸಂಘದ ನೂತನ ಮಂಗಳಧಾಮ ಸಭಾಂಗಣ ಲೋಕಾರ್ಪಣೆ ಮಾಡಲಾಗಿದೆ.
ಬೆಂಗಳೂರು, ಮೇ 04: ನಗರದ ಪ್ರಾಚೀನ ವಸತಿ ಪ್ರದೇಶ ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ಕನ್ನಡನಾಡಿನ ಹೆಮ್ಮೆಯ ಆಚಾರ್ಯರಾದ ಶ್ರೀಮಧ್ವರ ಹೆಸರಿನಲ್ಲಿರುವ ಇಡೀ ಭಾರತದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಪ್ರಾರಂಭವಾದ ಸಂಘಕ್ಕೆ ಇದೀಗ ಎಂಬತ್ತಾರು ವಸಂತದ ಸಂಭ್ರಮ.
ಈ ಸಂಭ್ರಮಾಚರಣೆಯನ್ನು ಹೆಚ್ಚಿಸಲು ಮೇ 5 ರಂದು ಚಾಮರಾಜಪೇಟೆಯ ಶ್ರೀಮನ್ಮಾಧ್ವ ಸಂಘದ ನೂತನ ಮಂಗಳಧಾಮ ಸಭಾಂಗಣ ಲೋಕಾರ್ಪಣೆ ಮಾಡಲಾಗಿದೆ.
ಹಿರಿಯ ಚೇತನರಾದ ವರವಣಿ ರಾವ್ಮರಾಯರು, ಸುಭೋಧ ರಾಮರಾಯರು, ರಾವ್ ಬಹದ್ದೂರ್ ವೆಂಕಟೇಶಾಚಾರ್ , ಮುಂತಾದವರಿಂದ ಸ್ಥಾಪಿಸಲ್ಪಟ್ಟ ಈ ಸಂಘದ ಕಾರ್ಯ ಚಟುವಟಿಕೆಗಳಿಗೆ ಅಂದಿನ ಮೈಸೂರು ಮಹಾರಾಜರು ಸ್ಥಳದಾನ ಮಾಡಿದ ಐತಿಹಾಸಿಕ ಘಟನೆ ಇನ್ನು ಅನೇಕರ ನೆನಪಿಂಗಳದಲ್ಲಿ ಹಸಿರಾಗಿದೆ.
ಸೋಸಲೆ ವ್ಯಾಸರಾಜ ಮಠದ ವಿದ್ಯಾಪ್ರಸನ್ನತೀರ್ಥಶ್ರೀಪಾದರಿಂದ ಪ್ರಾರಂಭಗೊಂಡ ಈ ಸಂಘ ಅಂದಿನ ಮೈಸೂರು ಸರ್ಕಾರದ ಸಂಘ ಸಂಸ್ಥೆಗಳ ನಿಬಂಧಕರ ಅಡಿಯಲ್ಲಿ ನೋಂದಣಿ ಪಡೆದ ಮೊದಲ ಸಂಘವೆಂಬ ಹೆಗ್ಗಳಿಕೆ ಇದಕ್ಕಿದೆ.

ಅನೇಕ ಮಾಧ್ವ ಪೀಠಾಧಿಪತಿಗಳು ಇಲ್ಲಿಗೆ ಅಗಮಿಸಿ ಜ್ಞಾನಯಜ್ಞವನ್ನು ನಡೆಸಿ ಇದನ್ನು ಒಂದು ಪಾವನ ತಾಣವನ್ನಾಗಿ ಮಾಡಿದ ಫಲವಾಗಿ 1983 ರಲ್ಲಿ ಮಧ್ವಾಚಾರ್ಯರ ಶಿಲಾಪ್ರತಿಮೆ ಪ್ರತಿಷ್ಠಾಪಿಸಿ ವ್ಯಾಸ ದಾಸ ಸಾಹಿತ್ಯದ ಅನೇಕ ವಿದ್ವನ್ಮಣಿಗಳನ್ನು ತಯಾರು ಮಾಡುತ್ತ ಬಂದಿದೆ.
ಪೂಜ್ಯ ಪೇಜಾವರಶ್ರೀಗಳು ಇದನ್ನು ನೈಮಿಶಾರಣ್ಯ ಎಂದು ಶ್ಲಾಘಿಸಿದ್ದಾರೆ. ಮಂತ್ರಾಲಯ ಮಠದ ಶ್ರೀಸುಶಮೀಂದ್ರತೀರ್ಥರು ಮತ್ತು ಶ್ರೀ ಸುಯತೀಂದ್ರತೀರ್ಥರು ಸಂಘದ ನಿಸ್ವಾರ್ಥ ಸೇವಾ ಚಟುವಟಿಕೆಗಳನ್ನು ಗುರುತಿಸಿ ಸುಜಯಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ.
ಸಂಘದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸುಸಜ್ಜಿತವಾದ ನೂತನ ಮಂಗಳಧಾಮ ಸಭಾಂಗಣವನ್ನು ಇದೇ ಮೇ 5, 2017 ಶುಕ್ರವಾರದಂದು ಕೋಲಾರ ಜಿಲ್ಲೆ ತಂಬಿಹಳ್ಳಿ ಮಾಧವ ತೀರ್ಥ ಸಂಸ್ಥಾನದ ಶ್ರೀ ವಿದ್ಯಾಸಾಗರ ಮಾಧವತೀರ್ಥರು ಮತ್ತು ಕಿರಿಯ ಪಟ್ಟ ಶ್ರೀವಿದ್ಯಾಸಿಂಧು ತೀರ್ಥರು ಲೋಕಾರ್ಪಣೆಗೊಳಿಸಿದರು.
-
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್












Click it and Unblock the Notifications