Get Updates
Get notified of breaking news, exclusive insights, and must-see stories!

ಸಿಬಿಐನಿಂದ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಬಂಧನ

ಬೆಂಗಳೂರು, ಜುಲೈ 15: ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಅವರನ್ನು ಸಿಬಿಐ ತಂಡ ಬುಧವಾರ ಸಂಜೆ ಬಂಧಿಸಿದೆ. ಅಕ್ರಮವಾಗಿ ಕಬ್ಬಿಣ ಅದಿರು ರಫ್ತು ಮಾಡಿದ ಆರೋಪದ ಮೇಲೆ ಅನಿಲ್ ಲಾಡ್ ಬಂಧಿಸಿ, ವಿಚಾರಣೆಗೊಳಪಡಿಸಲಾಗಿದೆ.

2010ರಲ್ಲಿ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ ಲಿಮಿಟೆಡ್ ನಿಂದ ಕಾನೂನು ಬಾಹಿರವಾಗಿ 15 ಸಾವಿರ ಮೆಟ್ರಿಕ್ ಟನ್ ಅದಿರು ರಫ್ರು ಮಾಡಿದ ಆರೋಪವನ್ನು ಅನಿಲ್ ಲಾಡ್ ಎದುರಿಸುತ್ತಿದ್ದಾರೆ. [ಶ್ರೀರಾಮುಲುಗೆ ಸಂಕಟ?]

ನಿಕಟಪೂರ್ವ ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತಂತೆ ನೀಡಿದ ವರದಿಯಲ್ಲಿ ಅನಿಲ್ ಲಾಡ್ ಹಾಗೂ ಅವರ ವಿಎಸ್ ಲಾಡ್ ಅಂಡ್ ಸನ್ಸ್ ಅದಿರು ಸಂಸ್ಥೆ ಹೆಸರು ಉಲ್ಲೇಖವಾಗಿದೆ.

ಉತ್ತರಕನ್ನಡ ಜಿಲ್ಲೆಯ ಬೇಲೇಕೇರಿ ಬಂದರಿನಿಂದ ಕಬ್ಬಿಣ ಅದಿರನ್ನು ಅಕ್ರಮವಾಗಿ ಸಾಗಿಸಿರುವ ಆರೋಪ ಹೊರೆಸಲಾಗಿದೆ. ಅನಿಲ್ ಲಾಡ್ ಅವರ ಕಂಪನಿಯಿಂದ 2006-07 ಹಾಗೂ 2010-11 ರಲ್ಲಿ ಸುಮಾರು 7.74 ಮಿಲಿಯನ್ ಟನ್ ಗಳಷ್ಟು ಕಬ್ಬಿಣದ ಅದಿರು ಅಕ್ರಮವಾಗಿ ಸಾಗಾಟವಾಗಿದೆ.

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಶಾಸಕರಾದ ಆನಂದ್ ಸಿಂಗ್, ಬಿ ನಾಗೇಂದ್ರ, ಸತೀಶ್ ಸೈಲ್, ಸುರೇಶ್ ಬಾಬು ಅವರನ್ನು ವಿಚಾರಣೆಗೆ ಒಳಪಡಿಸಿ ಬಂಧಿಸಲಾಗಿತ್ತು. ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಮಿತ್ರ ಬಿ ಶ್ರೀರಾಮುಲು ಅವರನ್ನು ಕೂಡಾ ಪ್ರಶ್ನಿಸಲಾಗಿತ್ತು.

ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಸತೀಶ್ ಗೂ ಕುತ್ತು?

ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಸತೀಶ್ ಗೂ ಕುತ್ತು?

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಅವರ ಬಂಧನವಾಗಿದ್ದರಿಂದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ (SMSC Pvt Ltd)ಯ ಮಾಲೀಕರಾದ ಶಾಸಕ ಸತೀಶ್ ಸೈಲ್ ಅವರಿಗೆ ಮತ್ತೊಮ್ಮೆ ಕಂಟಕ ಶುರುವಾಗುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಸತೀಶ್ ಸೈಲ್ ಒಮ್ಮೆ ಬಂಧನವಾಗಿ ಜಾಮೀನು ಪಡೆದು ಹೊರಬಂದಿದ್ದಾರೆ.

ಚಿತ್ರದಲ್ಲಿ ಶಾಸಕ ಅನಿಲ್ ಲಾಡ್

ಚಿತ್ರದಲ್ಲಿ ಶಾಸಕ ಅನಿಲ್ ಲಾಡ್

ಜನವರಿ 2009 ರಿಂದ ಮೇ 2010ರ ಅವಧಿಯಲ್ಲಿ ಸುಮಾರು 7.23 ಲಕ್ಷ ಮೆಟ್ರಿಕ್ ಟನ್ ಕಬ್ಬಿಣ ಅದಿರನ್ನು ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಅಕ್ರಮವಾಗಿ ಸಾಗಿಸಿದೆ ಎಂಬ ಆರೋಪವಿದೆ. ಕಾಂಗ್ರೆಸ್ ರೆಬೆಲ್ ಅಭ್ಯರ್ಥಿಯಾಗಿ 2013ರ ಅಸೆಂಬ್ಲಿ ಎಲೆಕ್ಷನ್ ನಲ್ಲಿ ನಿಂತು ಚುನಾವಣೆ ಗೆದ್ದ ಸತೀಶ್ ಸೈಲ್ ನಂತರ ಕಾಂಗ್ರೆಸ್ ಮತ್ತೆ ಸೇರಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಆರೋಪ ಹೊತ್ತಿರುವ ಕಂಪನಿಗಳು

ಆರೋಪ ಹೊತ್ತಿರುವ ಕಂಪನಿಗಳು

* M/s ಡ್ರೀಮ್ ಲಾಜಿಸ್ಟಿಕ್ಸ್ ಪೈ ಲಿ -ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್, ಅವರ ಪುತ್ರ ವಿವೇಕ್ ಹೆಬ್ಬಾರ್.
* ಆನಂದ್ ಸಿಂಗ್ -ವೈಷ್ಣವಿ ಮಿನಿರಲ್ಸ್,
* ನಾಗೇಂದ್ರ - ಈಗಲ್ ಟ್ರೇಡರ್ಸ್ ಅಂಡ್ ಲಾಜಿಸ್ಟಿಕ್ಸ್,
* ಸುರೇಶ್ ಬಾಬು -ಜನಾದೇವಿ ಮಿನರಲ್ಸ್,
* ಕೆ ಸೋಮಶೇಖರ್ -ಐಎಲ್ ಸಿ ಇಂಡಸ್ಟ್ರೀಸ್ ಪೈ.ಲಿ.
* ಪವನ್ ಕುಮಾರ್ ಜೈನ್ - ಪಿಜೆಎಸ್ ಓವರ್ಸೀಸ್ ಲಿ.

ಅಧಿಕಾರಿಗಳಿಂದ ಅದಿರು ಸಾಗಾಣಿಕೆಗೆ ಸಹಾಯ

ಅಧಿಕಾರಿಗಳಿಂದ ಅದಿರು ಸಾಗಾಣಿಕೆಗೆ ಸಹಾಯ

ಬೇಲೆಕೇರಿ ಬಂದರಿನಲ್ಲಿ 34,555.06 ಮೆಟ್ರಿಕ್ ಟನ್ ಅದಿರು ಕಳ್ಳ ಸಾಗಾಣಿಕೆಗೆ ಸಹಾಯ ಮಾಡಿದ ಆರೋಪವಿರುವ ಬಂದರು ಅಧಿಕಾರಿ ಮಹೇಶ್ ಬಲಿಯಾ, ಉಪ ಬಂದರು ಅಧಿಕಾರಿ ಸಿ. ಸ್ವಾಮಿ, ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನರೇಂದ್ರ ಹಿತ್ತಲಮಕ್ಕಿ, ವಲಯ ಅರಣ್ಯಾಧಿಕಾರಿ ಚಂದ್ರಕಾಂತ್ ನಾಯಕ್ ಹಾಗೂ ಬೆಂಗಳೂರು ಮೂಲದ ಗಣಿ ಕಂಪನಿ ವಿರುದ್ಧ ದೋಷಾರೋಪಣಾಪಟ್ಟಿ ಸಲ್ಲಿಕೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+